ಚಂಡೀಗಡ: ಪಂಜಾಬ್ನ ಮಾಜಿ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಶೀಘ್ರದಲ್ಲೇ ಹೊಸ ಪಕ್ಷವನ್ನು ಘೋಷಣೆ ಮಾಡುವುದಾಗಿ ಮಂಗಳವಾರ ತಿಳಿಸಿದ್ದಾರೆ.
ರೈತರ ಹಿತಾಸಕ್ತಿಗೆ ಅನುಗುಣವಾಗಿ ರೈತರ ಪ್ರತಿಭಟನೆ ಪರಿಹಾರಗೊಂಡರೆ 2022ರ ವಿಧಾನಸಭೆ ಚುನಾವಣೆಯಲ್ಲಿಬಿಜೆಪಿ ಜೊತೆಗೆ ಸ್ಥಾನ ಹಂಚಿಕೆ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂದು ಅಮರಿಂದರ್ ಸಿಂಗ್ ಅವರ ಮಾಧ್ಯಮ ಸಲಹೆಗಾರ ರವೀನ್ ಥುಕ್ರಾಲ್ ಟ್ವೀಟ್ ಮಾಡಿದ್ದಾರೆ.
ಮೈತ್ರಿಗೆ ಸರದಾರ್ ಸುಖದೇವ್ ಸಿಂಹ ದಿಂಡಸಾ ಮತ್ತು ರಂಜಿತ್ ಸಿಂಗ್ ಬ್ರಹ್ಮಪುರ ಸೇರಿದಂತೆ ಸಮಾನ ಮನಸ್ಕ ನಾಯಕರನ್ನು ಎದುರು ನೋಡುತ್ತಿರುವುದಾಗಿಯೂ ರವೀನ್ ಥುಕ್ರಾಲ್ ತಿಳಿಸಿದ್ದಾರೆ.