17 ದಿನಗಳ ಪ್ರಯಾಣ ಅವಧಿಯ ಪ್ಯಾಕೇಜ್ ಒಳಗೊಂಡ ಮತ್ತೊಂದು ‘ರಾಮಾಯಣ ಯಾತ್ರಾ ಎಕ್ಸ್ಪ್ರೆಸ್’ ರೈಲು ನವೆಂಬರ್ 25ರಂದು ಗಂಗಾನಗರದಿಂದ ಹೊರಡಲಿದೆ. ಭಟಿಂಡಾ, ಬರ್ನಾಲಾ, ಪಟಿಯಾಲಾ, ರಾಜ್ಪುರ, ಅಂಬಾಲಾ ಕ್ಯಾಂಟ್, ಕುರುಕ್ಷೇತ್ರ, ಕರ್ನಾಲ್, ಪಾಣಿಪತ್, ದೆಹಲಿ ಕ್ಯಾಂಟ್, ಗುರುಗ್ರಾಮ, ರೆವಾರಿ, ಅಲ್ವಾರ್, ಜೈಪುರ, ಆಗ್ರಾ ಫೋರ್ಟ್, ಇಟಾವಾ ಮತ್ತು ಕಾನ್ಪುರ ಮೂಲಕ ಸಂಚರಿಸುವ ರೈಲು, ಅಯೋಧ್ಯೆ, ಸೀತಾಮಾರಿ, ಜನಕ್ಪುರ, ವಾರಾಣಸಿ, ಪ್ರಯಾಗ್ರಾಜ್, ಚಿತ್ರಕೂಟ, ನಾಸಿಕ್, ಹಂಪಿ, ರಾಮೇಶ್ವರ, ಕಾಂಚಿಪುರಕ್ಕೆ ತೆರಳಿ ಗಂಗಾನಗರಕ್ಕೆ ಹಿಂತಿರುಗಲಿದೆ ಎಂದು ಐಆರ್ಸಿಟಿಸಿ ಪ್ರಕಟಣೆ ತಿಳಿಸಿದೆ.