ಹಲವು ರಾಜ್ಯಗಳಲ್ಲಿ ಮನರೇಗಾ ಯೋಜನೆಗೆ ಮೀಸಲಿಟ್ಟ ಅನುದಾನ ಸಂಪೂರ್ಣ ಖರ್ಚಾಗಿದ್ದು, 2021ರ ನವೆಂಬರ್ 26ರವರೆಗಿನ ಮಾಹಿತಿಯಂತೆ ರಾಜ್ಯ ಸರ್ಕಾರಗಳಿಗೆ ₹9,682 ಕೋಟಿ ಕೊರತೆಯಾಗಿದೆ. ಹೀಗಾಗಿ ಈ ಯೋಜನೆ ಅಡಿ ಕೆಲಸ ಮಾಡಿರುವ ದೇಶದ ಕೋಟ್ಯಂತರ ಕಾರ್ಮಿಕರಿಗೆ ಕೂಲಿ ನೀಡಲು ಸಾಧ್ಯವಾಗುತ್ತಿಲ್ಲ. ರಾಜ್ಯಗಳಿಗೆ ಅನುದಾನ ನೀಡಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ‘ಸ್ವರಾಜ್ ಅಭಿಯಾನ’ ತನ್ನ ಅರ್ಜಿಯಲ್ಲಿ ಕೋರಿದೆ.