ಭಾರತಕ್ಕೆ ಸ್ವಾತಂತ್ರ್ಯ ಲಭಿಸಿದ ನಂತರ ಇದೇ ಮೊದಲ ಬಾರಿ ಇಷ್ಟೊಂದು ನೋವು, ಸಂಕಷ್ಟ ಅನುಭವಿಸಿದ್ದು. ಲಕ್ಷಗಟ್ಟಲೆ ಕಾರ್ಮಿಕರು ಅನ್ನ, ನೀರು ಸಿಗದೆ ಬರಿಗಾಲಲ್ಲಿ ನಡೆಯುತ್ತಿದ್ದಾರೆ. ಅವರಿಗೆ ಔಷಧಿ ಸಿಗುತ್ತಿಲ್ಲ ಆದರೂ ಮನೆ ಸೇರಲು ಅವರು ಸಾವಿರ ಕಿಮೀಗಳಷ್ಟು ನಡೆಯಲೇ ಬೇಕಾಗಿದೆ. ಅವರ ನೋವು, ದುಃಖವನ್ನು ಇಡೀ ದೇಶ ಕಂಡಿದೆ ಆದರೆ ಸರ್ಕಾರಕ್ಕೆ ಮಾತ್ರ ಕಾಣುತ್ತಿಲ್ಲ ಎಂದು ಸೋನಿಯಾ ವಿಡಿಯೊ ಸಂದೇಶದಲ್ಲಿ ಹೇಳಿದ್ದಾರೆ.