<p>ಚೆನ್ನೈ: ಭಾರತದ ಕರಾವಳಿ ತೀರದ ಜನರನ್ನು ಬೆಂಬಲಿಸುವ ಹೊಸ ಯೋಜನೆಗೆ ವಿಶ್ವ ಬ್ಯಾಂಕ್ ಅನುಮೋದನೆ ನೀಡಿದೆ. ಇದು ಪರಿಸರ ವ್ಯವಸ್ಥೆಯ ರಕ್ಷಣೆ, ಪ್ಲಾಸ್ಟಿಕ್ ತ್ಯಾಜ್ಯವನ್ನು ಕಡಿಮೆಗೊಳಿಸುವುದು ಹಾಗೂ ತಮಿಳುನಾಡು ಮತ್ತು ಕರ್ನಾಟಕ ಒಂದು ಲಕ್ಷ ಜನರಿಗೆ ಉದ್ಯೋಗ ನೀಡುವ ಗುರಿ ಹೊಂದಿದೆ.</p>.ವಿಶ್ವಬ್ಯಾಂಕ್ ಅಧ್ಯಕ್ಷರಾಗಿ ಅಜಯ್ ಬಂಗಾ ನೇಮಕ: ಕಮಲಾ ಹ್ಯಾರಿಸ್ ಅಭಿನಂದನೆ.<p>ಕರಾವಳಿ ತೀರದ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ‘ಕರಾವಳಿ ಸ್ಥಿತಿಸ್ಥಾಪಕತ್ವ ಮತ್ತು ಆರ್ಥಿಕತೆಯನ್ನು ಬಲಪಡಿಸುವ’ (ಶೋರ್) ಯೋಜನೆಯಡಿ 212.64 ಮಿಲಿಯನ್ ಡಾಲರ್ ಖರ್ಚು ಮಾಡಲಿದೆ.</p><p>ಭಾರತದಲ್ಲಿ 10 ಸಾವಿರ ಕಿ.ಮೀಟರ್ಗೂ ಅಧಿಕ ಸಮುದ್ರ ತೀರವಿದ್ದು, ಇದರಲ್ಲಿ ಮೂರನೇ ಒಂದಷ್ಟು ಸವಕಳಿ ಹಾಗೂ ತೀವ್ರ ವಾತಾವರಣದಿಂದಾಗಿ ಅಪಾಯದಲ್ಲಿದೆ. ದೇಶದ ಜನಸಂಖ್ಯೆಯ ಸುಮಾರು 25 ಕೋಟಿ ಮಂದಿ ತಮ್ಮ ನಿತ್ಯ ಜೀವನಕ್ಕೆ ಕರಾವಳಿ ತೀರವನ್ನೇ ಆಶ್ರಯಿಸಿದ್ದಾರೆ. ಈ ಪ್ರದೇಶಗಳು ಸುಮಾರು 18 ಸಾವಿರ ಪ್ರಬೇಧದ ಪ್ರಾಣಿ ಮತ್ತು ಸಸ್ಯ ಸಂಪತ್ತಿಗೆ ಆವಾಸ ಸ್ಥಾನವಾಗಿದೆ.</p>.ಸ್ತ್ರೀ ಸಬಲೀಕರಣ: ಭಾರತದ ಕ್ರಮಕ್ಕೆ ವಿಶ್ವಬ್ಯಾಂಕ್ ಶ್ಲಾಘನೆ.<p>ಕರಾವಳಿ ಸವಕಳಿ, ಪ್ರದೂಷಣೆ, ತೀವ್ರ ಮೀನುಗಾರಿಕೆ, ಮ್ಯಾಂಗ್ರೋವ್ ಕಾಡುಗಳ ಅವನತಿ ಮತ್ತು ನಗರ ಒತ್ತಡದಿಂದಾಗಿ ಕಡಲಿನ ಜೀವ ವ್ಯವಸ್ಥೆ ಅಪಾಯದ ಮಟ್ಟದಲ್ಲಿದೆ.</p><p>‘ತಮಿಳುನಾಡು ಮತ್ತು ಕರ್ನಾಟಕದಲ್ಲಿ, ಈ ಯೋಜನೆಯು 1 ಲಕ್ಷ ಜನರಿಗೆ ಜ್ಞಾನ, ಕೌಶಲ್ಯ ಅಭಿವೃದ್ಧಿ ಸಹಾಯ ಮಾಡಲಿದೆ. ಸರ್ಕಾರಿ ಸಂಸ್ಥೆಗಳು ಮತ್ತು ಸ್ಥಳೀಯ ಸಮುದಾಯಗಳಿಗೆ ಹಣವನ್ನು ಬಳಸಿಕೊಳ್ಳುವ ಮೂಲಕ ಎರಡೂ ರಾಜ್ಯಗಳ ಕರಾವಳಿ ನಿರ್ವಹಣಾ ಯೋಜನೆಗಳನ್ನು ಬೆಂಬಲಿಸುತ್ತದೆ’ ಎಂದು ವಿಶ್ವಬ್ಯಾಂಕ್ ಬುಧವಾರ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದೆ.</p>.ಸಂಚಾರ ಮಾರ್ಗ: ವಿಶ್ವಬ್ಯಾಂಕ್ ನೆರವು.<p>ಯೋಜನೆಯು ಸುಸ್ಥಿರ ಪ್ರವಾಸೋದ್ಯಮದಂಥ ವಲಯಗಳಲ್ಲಿ ತರಬೇತಿ ಪಡೆದು ಆದಾಯದ ಹೊಸ ಮೂಲ ಪಡೆಯಲು ಮಹಿಳೆಯರು ಸೇರಿ 70 ಸಾವಿರ ಮಂದಿಗೂ ಈ ಯೋಜನೆ ಉಪಕಾರಿಯಾಗಲಿದೆ.</p>.ಪಡಿತರ ಸೋರಿಕೆ: ವಿಶ್ವಬ್ಯಾಂಕ್ ವರದಿ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚೆನ್ನೈ: ಭಾರತದ ಕರಾವಳಿ ತೀರದ ಜನರನ್ನು ಬೆಂಬಲಿಸುವ ಹೊಸ ಯೋಜನೆಗೆ ವಿಶ್ವ ಬ್ಯಾಂಕ್ ಅನುಮೋದನೆ ನೀಡಿದೆ. ಇದು ಪರಿಸರ ವ್ಯವಸ್ಥೆಯ ರಕ್ಷಣೆ, ಪ್ಲಾಸ್ಟಿಕ್ ತ್ಯಾಜ್ಯವನ್ನು ಕಡಿಮೆಗೊಳಿಸುವುದು ಹಾಗೂ ತಮಿಳುನಾಡು ಮತ್ತು ಕರ್ನಾಟಕ ಒಂದು ಲಕ್ಷ ಜನರಿಗೆ ಉದ್ಯೋಗ ನೀಡುವ ಗುರಿ ಹೊಂದಿದೆ.</p>.ವಿಶ್ವಬ್ಯಾಂಕ್ ಅಧ್ಯಕ್ಷರಾಗಿ ಅಜಯ್ ಬಂಗಾ ನೇಮಕ: ಕಮಲಾ ಹ್ಯಾರಿಸ್ ಅಭಿನಂದನೆ.<p>ಕರಾವಳಿ ತೀರದ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ‘ಕರಾವಳಿ ಸ್ಥಿತಿಸ್ಥಾಪಕತ್ವ ಮತ್ತು ಆರ್ಥಿಕತೆಯನ್ನು ಬಲಪಡಿಸುವ’ (ಶೋರ್) ಯೋಜನೆಯಡಿ 212.64 ಮಿಲಿಯನ್ ಡಾಲರ್ ಖರ್ಚು ಮಾಡಲಿದೆ.</p><p>ಭಾರತದಲ್ಲಿ 10 ಸಾವಿರ ಕಿ.ಮೀಟರ್ಗೂ ಅಧಿಕ ಸಮುದ್ರ ತೀರವಿದ್ದು, ಇದರಲ್ಲಿ ಮೂರನೇ ಒಂದಷ್ಟು ಸವಕಳಿ ಹಾಗೂ ತೀವ್ರ ವಾತಾವರಣದಿಂದಾಗಿ ಅಪಾಯದಲ್ಲಿದೆ. ದೇಶದ ಜನಸಂಖ್ಯೆಯ ಸುಮಾರು 25 ಕೋಟಿ ಮಂದಿ ತಮ್ಮ ನಿತ್ಯ ಜೀವನಕ್ಕೆ ಕರಾವಳಿ ತೀರವನ್ನೇ ಆಶ್ರಯಿಸಿದ್ದಾರೆ. ಈ ಪ್ರದೇಶಗಳು ಸುಮಾರು 18 ಸಾವಿರ ಪ್ರಬೇಧದ ಪ್ರಾಣಿ ಮತ್ತು ಸಸ್ಯ ಸಂಪತ್ತಿಗೆ ಆವಾಸ ಸ್ಥಾನವಾಗಿದೆ.</p>.ಸ್ತ್ರೀ ಸಬಲೀಕರಣ: ಭಾರತದ ಕ್ರಮಕ್ಕೆ ವಿಶ್ವಬ್ಯಾಂಕ್ ಶ್ಲಾಘನೆ.<p>ಕರಾವಳಿ ಸವಕಳಿ, ಪ್ರದೂಷಣೆ, ತೀವ್ರ ಮೀನುಗಾರಿಕೆ, ಮ್ಯಾಂಗ್ರೋವ್ ಕಾಡುಗಳ ಅವನತಿ ಮತ್ತು ನಗರ ಒತ್ತಡದಿಂದಾಗಿ ಕಡಲಿನ ಜೀವ ವ್ಯವಸ್ಥೆ ಅಪಾಯದ ಮಟ್ಟದಲ್ಲಿದೆ.</p><p>‘ತಮಿಳುನಾಡು ಮತ್ತು ಕರ್ನಾಟಕದಲ್ಲಿ, ಈ ಯೋಜನೆಯು 1 ಲಕ್ಷ ಜನರಿಗೆ ಜ್ಞಾನ, ಕೌಶಲ್ಯ ಅಭಿವೃದ್ಧಿ ಸಹಾಯ ಮಾಡಲಿದೆ. ಸರ್ಕಾರಿ ಸಂಸ್ಥೆಗಳು ಮತ್ತು ಸ್ಥಳೀಯ ಸಮುದಾಯಗಳಿಗೆ ಹಣವನ್ನು ಬಳಸಿಕೊಳ್ಳುವ ಮೂಲಕ ಎರಡೂ ರಾಜ್ಯಗಳ ಕರಾವಳಿ ನಿರ್ವಹಣಾ ಯೋಜನೆಗಳನ್ನು ಬೆಂಬಲಿಸುತ್ತದೆ’ ಎಂದು ವಿಶ್ವಬ್ಯಾಂಕ್ ಬುಧವಾರ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದೆ.</p>.ಸಂಚಾರ ಮಾರ್ಗ: ವಿಶ್ವಬ್ಯಾಂಕ್ ನೆರವು.<p>ಯೋಜನೆಯು ಸುಸ್ಥಿರ ಪ್ರವಾಸೋದ್ಯಮದಂಥ ವಲಯಗಳಲ್ಲಿ ತರಬೇತಿ ಪಡೆದು ಆದಾಯದ ಹೊಸ ಮೂಲ ಪಡೆಯಲು ಮಹಿಳೆಯರು ಸೇರಿ 70 ಸಾವಿರ ಮಂದಿಗೂ ಈ ಯೋಜನೆ ಉಪಕಾರಿಯಾಗಲಿದೆ.</p>.ಪಡಿತರ ಸೋರಿಕೆ: ವಿಶ್ವಬ್ಯಾಂಕ್ ವರದಿ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>