ಸರ್ಕಾರ ಇದೇ 11ರಿಂದ ರಾಜ್ಯದ ಮಹಿಳೆಯರಿಗೆ ‘ಶಕ್ತಿ’ ಯೋಜನೆಯಡಿ ಆಯ್ದ ಸರ್ಕಾರಿ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸುವ ಸೌಲಭ್ಯ ಕಲ್ಪಿಸಿದೆ. ಆದರೆ ಖಾಸಗಿ ಬಸ್ಸುಗಳೇ ಹೆಚ್ಚಿರುವ ಜಿಲ್ಲೆಗಳಲ್ಲಿ, ಗ್ರಾಮೀಣ ಭಾಗಗಳಲ್ಲಿ ಹಾಗೂ ಸರ್ಕಾರಿ ಬಸ್ಸುಗಳೇ ಸಂಚರಿಸದ ಪ್ರದೇಶಗಳಲ್ಲಿ ಸ್ತ್ರೀಯರಿಗೆ ಈ ಯೋಜನೆ ಕೈಗೆಟಕುತ್ತದೆಯೇ?
ಮಲೆನಾಡು ಭಾಗದಲ್ಲಿ ಕೆಎಸ್ಆರ್ಟಿಸಿ ಬಸ್ಸುಗಳ ಸಂಚಾರವೇ ಇಲ್ಲ. ‘ಶಕ್ತಿ’ ಯೋಜನೆಯ ಫಲ ನಮಗೆ ಸಿಗಬೇಕು ಎಂದರೆ ಸರ್ಕಾರ ಮೊದಲು ಈ ಭಾಗಕ್ಕೆ ಸರ್ಕಾರಿ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು– ಗಾಯತ್ರಿ, ಶೇಷಗಿರಿ ತೀರ್ಥಹಳ್ಳಿ
ಮಲೆನಾಡು ಭಾಗದಲ್ಲಿ ಕೆಎಸ್ಆರ್ಟಿಸಿ ಬಸ್ಸುಗಳ ಸಂಚಾರವೇ ಇಲ್ಲ. ‘ಶಕ್ತಿ’ ಯೋಜನೆಯ ಫಲ ನಮಗೆ ಸಿಗಬೇಕು ಎಂದರೆ ಸರ್ಕಾರ ಮೊದಲು ಈ ಭಾಗಕ್ಕೆ ಸರ್ಕಾರಿ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು– ಗಾಯತ್ರಿ ಶೇಷಗಿರಿ ತೀರ್ಥಹಳ್ಳಿ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರ್ಕಾರಿ ಸಾರಿಗೆಯೇ ವಿರಳ. ಮೂಲ್ಕಿ ಉಳ್ಳಾಲ ಮೂಡುಬಿದಿರೆ ಹಾಗೂ ಮಂಗಳೂರು ತಾಲ್ಲೂಕುಗಳಲ್ಲಿ ಸರ್ಕಾರಿ ಸಾರಿಗೆ ಅತೀ ಕಡಿಮೆ. ಮಂಗಳೂರು– ಮೂಡುಬಿದಿರೆ ಸೇರಿದಂತೆ ಹಲವು ಮಾರ್ಗದಲ್ಲಿ ಒಂದೇ ಒಂದು ಸರ್ಕಾರಿ ಬಸ್ ಸಂಚರಿಸುವುದಿಲ್ಲ.
ಕರಾವಳಿಯಲ್ಲಿ 2500ಕ್ಕೂ ಹೆಚ್ಚು ಬಸ್ಸುಗಳು ಸಂಚರಿಸುತ್ತಿವೆ. ಖಾಸಗಿ ಬಸ್ಗಳಲ್ಲಿ ಪ್ರಯಾಣಿಸುವ ಮಹಿಳೆಯರ ಸರಾಸರಿ ಪ್ರಮಾಣ ಶೇ 35ರಷ್ಟಿದೆ. ಸರ್ಕಾರಿ ಬಸ್ ಸೌಲಭ್ಯ ಇಲ್ಲದ ಕಡೆಯಲ್ಲೂ ಖಾಸಗಿ ಬಸ್ಗಳು ಸೇವೆ ನೀಡುತ್ತಿವೆ. ಆದಾಯ ಖೋತಾ ಆದರೆ ಗ್ರಾಮೀಣ ಪ್ರದೇಶದ ಜನರಿಗೆ ಸೇವೆ ನೀಡುವುದು ಕಷ್ಟವಾಗಬಹುದು– ಕುಯಿಲಾಡಿ ಸುರೇಶ್ ನಾಯಕ್, ಅಧ್ಯಕ್ಷ ರಾಜ್ಯ ಖಾಸಗಿ ಬಸ್ ಮಾಲೀಕರ ಸಂಘಗಳ ಒಕ್ಕೂಟ
ಸರ್ಕಾರಿ ಬಸ್ಸುಗಳ ರೀತಿ ಮಹಿಳೆಯರಿಗೆ ಉಚಿತವಾಗಿ ಪ್ರಯಾಣಕ್ಕೆ ಅವಕಾಶ ಮಾಡಿಕೊಡಲು ನಾವೂ ಸಿದ್ಧರಿದ್ದೇವೆ. ಅದಕ್ಕೆ ಪೂರಕವಾಗಿ ರಾಜ್ಯ ಸರ್ಕಾರ ಪ್ರತೀ ಮೂರು ತಿಂಗಳಿಗೊಮ್ಮೆ ಕಟ್ಟಿಸಿಕೊಳ್ಳುವ ರಸ್ತೆ ತೆರಿಗೆಯನ್ನು ಮನ್ನಾ ಮಾಡಬೇಕು. ಮೀನುಗಾರಿಕೆ ದೋಣಿಗಳಿಗೆ ಕೊಡುವಂತೆ ನಮಗೂ ಡೀಸೆಲ್ಗೆ ಸಬ್ಸಿಡಿ ಕೊಡಬೇಕು– ಮೀಸೆ ರಂಗಸ್ವಾಮಿ, ಸಂಘಟನಾ ಕಾರ್ಯದರ್ಶಿ ರಾಜ್ಯ ಖಾಸಗಿ ಬಸ್ಗಳ ಮಾಲೀಕರ ಒಕ್ಕೂಟ
ಕೆಎಸ್ಆರ್ಟಿಸಿ ಬಸ್ಗಳಿಗೆ ಬಳಸುವ ಪಾಸ್ಗಳನ್ನೇ ಖಾಸಗಿ ಬಸ್ಗಳಲ್ಲಿ ಬಳಸಲು ಸರ್ಕಾರ ಅವಕಾಶ ನೀಡಬೇಕು. ಎಷ್ಟು ಮಹಿಳೆಯರು ಪ್ರಯಾಣಿಸಿದ್ದಾರೆ ಎಂಬ ಆಧಾರದಲ್ಲಿ ನಮಗೂ ಹಣ ಮರು ಪಾವತಿಸಿದರೆ ಅನುಕೂಲ ಆಗಲಿದೆ. ಈ ಸಂಬಂಧ ಚರ್ಚಿಸಲು ಮುಂದಿನ ವಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗುತ್ತಿದ್ದೇವೆ. ಸರ್ಕಾರ ಅವಕಾಶ ನೀಡದಿದ್ದರೆ ಮುಂದಿನ ಆರು ತಿಂಗಳಲ್ಲಿ ಖಾಸಗಿ ಬಸ್ಗಳೇ ಇರುವುದಿಲ್ಲ– ಬಾಲಕೃಷ್ಣ ಭಟ್, ಅಧ್ಯಕ್ಷ ಚಿಕ್ಕಮಗಳೂರು ಜಿಲ್ಲಾ ಖಾಸಗಿ ಮಾಲೀಕರ ಸಂಘ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.