<p><strong>ಬೆಂಗಳೂರು:</strong> ‘ಗೃಹ ಸಚಿವ ಜಿ. ಪರಮೇಶ್ವರ ಅವರನ್ನು ಜಾತಿ ಉಲ್ಲೇಖಿಸಿ ಅವಹೇಳನ ಮಾಡಿದ ಬಿಜೆಪಿ ಯುವ ಮೋರ್ಚಾ ನಾಯಕನ ನಡೆಯನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ’ ಎಂದು ಮಾಜಿ ಸಚಿವ ಎಚ್. ಆಂಜನೇಯ ಹೇಳಿದರು.</p>.<p>ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಆಡಳಿತದಲ್ಲಿ ವೈಫಲ್ಯ ಉಂಟಾಗಿದ್ದರೆ ಪರಮೇಶ್ವರ ಅವರನ್ನು ಟೀಕೆ ಮಾಡಲಿ. ಅದನ್ನು ಬಿಟ್ಟು ಕುಟುಂಬವನ್ನು ಎಳೆದು ತಂದು ವೈಯಕ್ತಿಕ ತೇಜೋವಧೆ ಮಾಡುವುದು ಸರಿಯಲ್ಲ’ ಎಂದರು.</p>.<p>‘ಇಂತಹ ಟೀಕೆಯನ್ನು ಸಮರ್ಥನೆ ಮಾಡಿಕೊಳ್ಳುತ್ತಿರುವ ಬಿಜೆಪಿಯವರದ್ದು ಹೀನ ಮನಸ್ಥಿತಿ. ಇದೇ ಅವರ ಸಂಸ್ಕೃತಿ. ಈ ಬಿಜೆಪಿಯವರು ಏನು ಮಾಡಿದರೂ ಸಮರ್ಥನೆ ಮಾಡಿಕೊಳ್ಳುತ್ತಾರೆ. ಇದನ್ನು ಮಾಡುವುದಕ್ಕೂ ಮಾನ ಮಾರ್ಯಾದೆ ಇರಬೇಕು. ಇದೇ ವರ್ತನೆ ಮುಂದುವರೆದರೆ, ಇಡೀ ಸಮುದಾಯ ಸಂಸದೀಯ ಪದಗಳಲ್ಲೇ ಪ್ರತಿಭಟಿಸಲಿದೆ’ ಎಂದು ಎಚ್ಚರಿಕೆ ನೀಡಿದರು.</p>.<p>ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಇದ್ದರು.</p>.<p><strong>‘ಹಿಂದೂ ಧರ್ಮದಲ್ಲಿ ನಾವೇ ಬಹುಸಂಖ್ಯಾತರು’</strong> </p><p>‘ಹಿಂದೂ ಧರ್ಮದಲ್ಲೇ ಇದ್ದೇನೆ. ದಲಿತ ಅಸ್ಪೃಶ್ಯರೇ ಈ ಧರ್ಮದ ಎಲ್ಲ ಆಚರಣೆಗಳನ್ನು ಮಾಡಿಕೊಂಡು ಬಂದವರು. ಈ ಧರ್ಮದಲ್ಲಿ ನಾವೇ ಬಹುಸಂಖ್ಯಾತರು. ಆದರೆ ನಮ್ಮನ್ನೇ ಟೀಕೆ ಮಾಡುತ್ತಾರೆ’ ಎಂದು ಆಂಜನೇಯ ಹೇಳಿದರು. ಈ ಹಿಂದೆ ನಾವು ಭಜನೆ ಮಾಡಿಕೊಂಡು ಭಕ್ತಿಯಿಂದ ದೇವರನ್ನು ಬಾವಿಯಲ್ಲಿ ವಿಸರ್ಜನೆ ಮಾಡಿ ಬರುತ್ತಿದ್ದೆವು. ಇದನ್ನೇ ಹಿಡಿದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಿಂದು ವಿರೋಧಿ ಆಂಜನೇಯ ಎಂದು ಹೇಳುತ್ತಾರೆ. ನಾನು ಹಿಂದು ವಿರೋಧಿಯಲ್ಲ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ಗೃಹ ಸಚಿವ ಜಿ. ಪರಮೇಶ್ವರ ಅವರನ್ನು ಜಾತಿ ಉಲ್ಲೇಖಿಸಿ ಅವಹೇಳನ ಮಾಡಿದ ಬಿಜೆಪಿ ಯುವ ಮೋರ್ಚಾ ನಾಯಕನ ನಡೆಯನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ’ ಎಂದು ಮಾಜಿ ಸಚಿವ ಎಚ್. ಆಂಜನೇಯ ಹೇಳಿದರು.</p>.<p>ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಆಡಳಿತದಲ್ಲಿ ವೈಫಲ್ಯ ಉಂಟಾಗಿದ್ದರೆ ಪರಮೇಶ್ವರ ಅವರನ್ನು ಟೀಕೆ ಮಾಡಲಿ. ಅದನ್ನು ಬಿಟ್ಟು ಕುಟುಂಬವನ್ನು ಎಳೆದು ತಂದು ವೈಯಕ್ತಿಕ ತೇಜೋವಧೆ ಮಾಡುವುದು ಸರಿಯಲ್ಲ’ ಎಂದರು.</p>.<p>‘ಇಂತಹ ಟೀಕೆಯನ್ನು ಸಮರ್ಥನೆ ಮಾಡಿಕೊಳ್ಳುತ್ತಿರುವ ಬಿಜೆಪಿಯವರದ್ದು ಹೀನ ಮನಸ್ಥಿತಿ. ಇದೇ ಅವರ ಸಂಸ್ಕೃತಿ. ಈ ಬಿಜೆಪಿಯವರು ಏನು ಮಾಡಿದರೂ ಸಮರ್ಥನೆ ಮಾಡಿಕೊಳ್ಳುತ್ತಾರೆ. ಇದನ್ನು ಮಾಡುವುದಕ್ಕೂ ಮಾನ ಮಾರ್ಯಾದೆ ಇರಬೇಕು. ಇದೇ ವರ್ತನೆ ಮುಂದುವರೆದರೆ, ಇಡೀ ಸಮುದಾಯ ಸಂಸದೀಯ ಪದಗಳಲ್ಲೇ ಪ್ರತಿಭಟಿಸಲಿದೆ’ ಎಂದು ಎಚ್ಚರಿಕೆ ನೀಡಿದರು.</p>.<p>ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಇದ್ದರು.</p>.<p><strong>‘ಹಿಂದೂ ಧರ್ಮದಲ್ಲಿ ನಾವೇ ಬಹುಸಂಖ್ಯಾತರು’</strong> </p><p>‘ಹಿಂದೂ ಧರ್ಮದಲ್ಲೇ ಇದ್ದೇನೆ. ದಲಿತ ಅಸ್ಪೃಶ್ಯರೇ ಈ ಧರ್ಮದ ಎಲ್ಲ ಆಚರಣೆಗಳನ್ನು ಮಾಡಿಕೊಂಡು ಬಂದವರು. ಈ ಧರ್ಮದಲ್ಲಿ ನಾವೇ ಬಹುಸಂಖ್ಯಾತರು. ಆದರೆ ನಮ್ಮನ್ನೇ ಟೀಕೆ ಮಾಡುತ್ತಾರೆ’ ಎಂದು ಆಂಜನೇಯ ಹೇಳಿದರು. ಈ ಹಿಂದೆ ನಾವು ಭಜನೆ ಮಾಡಿಕೊಂಡು ಭಕ್ತಿಯಿಂದ ದೇವರನ್ನು ಬಾವಿಯಲ್ಲಿ ವಿಸರ್ಜನೆ ಮಾಡಿ ಬರುತ್ತಿದ್ದೆವು. ಇದನ್ನೇ ಹಿಡಿದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಿಂದು ವಿರೋಧಿ ಆಂಜನೇಯ ಎಂದು ಹೇಳುತ್ತಾರೆ. ನಾನು ಹಿಂದು ವಿರೋಧಿಯಲ್ಲ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>