<p><strong>ಬೆಂಗಳೂರು</strong>: ರಾಜ್ಯದಲ್ಲಿ ತಾಪಮಾನ ತೀವ್ರ ಕುಸಿತ ಕಂಡಿದೆ. 21 ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ 10 ಡಿಗ್ರಿ ಸೆಲ್ಸಿಯಸ್ಗಿಂತಲೂ ಕಡಿಮೆ ಇದೆ. ಬೀದರ್ನಲ್ಲಿ ಅತಿ ಕಡಿಮೆ ಅಂದರೆ 7 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. </p>.<p>ಮುಂದಿನ 5 ದಿನಗಳ ಕಾಲ ಶೀತಗಾಳಿ ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. </p>.<h2>ಶೀತ ಗಾಳಿ: ಆರೆಂಜ್ ಅಲರ್ಟ್ </h2><p>ಉತ್ತರ ಒಳನಾಡಿನ ಕೆಲವೆಡೆ ಮುಂದಿನ 48 ಗಂಟೆಗಳ ಕಾಲ ತೀವ್ರ ಸ್ವರೂಪದ ಶೀತಗಾಳಿ ಬೀಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೇಳಿದೆ.</p><p>ಇಂದು ರಾಜ್ಯದ ಉತ್ತರ ಒಳನಾಡಿನ ಬೀದರ್, ಬಾಗಲಕೋಟೆ, ವಿಜಯಪುರ ಮತ್ತು ಕಲಬುರಗಿಯಲ್ಲಿ ತೀವ್ರ ಸ್ವರೂಪದ ಶೀತ ಗಾಳಿ ಬೀಸುವ ಸಾಧ್ಯತೆಯಿದ್ದು, ಆರೆಂಜ್ ಅಲರ್ಟ್ ನೀಡಲಾಗಿದೆ. ಜನರು ಎಚ್ಚರಿಕೆ ವಹಿಸಬೇಕು ಎಂದೂ ಹೇಳಿದೆ.</p>. <p>ರಾಜ್ಯದ ವಿವಿಧ ಜಿಲ್ಲಾ ಕೇಂದ್ರಗಳಲ್ಲಿ ದಾಖಲಾದ ಕನಿಷ್ಠ ತಾಪಮಾನದ ವಿವರವನ್ನು ಹವಾಮಾನ ಇಲಾಖೆ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಹಂಚಿಕೊಂಡಿದೆ. ಅದರ ವಿವರ ಹೀಗಿದೆ.</p>.<h2>ಜಿಲ್ಲೆ –ತಾಪಮಾನ </h2> <ul><li><p>ಬೀದರ್ –7</p></li><li><p>ಚಿಕ್ಕಬಳ್ಳಾಪುರ–7.1</p></li><li><p>ಧಾರವಾಡ–7.4</p></li><li><p>ತುಮಕೂರು–7.4</p></li><li><p>ಚಿಕ್ಕಮಗಳೂರು–7.6</p></li><li><p>ಬೆಳಗಾವಿ– 7.8</p></li><li><p>ಹಾಸನ–8.3</p></li><li><p>ಕೊಡಗು–8.5</p></li><li><p>ಬಾಗಲಕೋಟೆ–8.6</p></li><li><p>ಹಾವೇರಿ-8.7</p></li><li><p>ಮೈಸೂರು-8.8</p></li><li><p>ವಿಜಯನಗರ-8.8</p></li><li><p>ಗದಗ-9</p></li><li><p>ವಿಜಯಪುರ-9.3</p></li><li><p>ಕಲಬುರಗಿ-9.4</p></li><li><p>ಮಂಡ್ಯ-9.7</p></li><li><p>ಉತ್ತರ ಕನ್ನಡ-9.8</p></li><li><p>ಕೋಲಾರ-9.9</p></li><li><p>ಕೊಪ್ಪಳ-9.9</p></li><li><p>ಚಾಮರಾಜನಗರ-10</p></li><li><p>ಶಿವಮೊಗ್ಗ-10</p></li><li><p>ಬಳ್ಳಾರಿ-10.1</p></li><li><p>ಬೆಂಗಳೂರು ದಕ್ಷಿಣ-10.1 </p></li><li><p>ಚಿತ್ರದುರ್ಗ–10.2 </p></li><li><p>ದಾವಣಗೆರೆ–10.2 </p></li><li><p>ರಾಯಚೂರು–10.2 </p></li><li><p>ಬೆಂಗಳೂರು ಗ್ರಾಮಾಂತರ–10.4 </p></li><li><p>ಬೆಂಗಳೂರು ನಗರ–10.8 </p></li><li><p>ಯಾದಗಿರಿ–11.4</p></li><li><p>ಉಡುಪಿ–14.4</p></li><li><p>ದಕ್ಷಿಣ ಕನ್ನಡ-15.5</p></li></ul>. ಬಾಗಲಕೋಟೆ ಜಿಲ್ಲೆಯ ತಾಪಮಾನದಲ್ಲಿ ಕುಸಿತ: ಆರೆಂಜ್ ಅಲರ್ಟ್.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ರಾಜ್ಯದಲ್ಲಿ ತಾಪಮಾನ ತೀವ್ರ ಕುಸಿತ ಕಂಡಿದೆ. 21 ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ 10 ಡಿಗ್ರಿ ಸೆಲ್ಸಿಯಸ್ಗಿಂತಲೂ ಕಡಿಮೆ ಇದೆ. ಬೀದರ್ನಲ್ಲಿ ಅತಿ ಕಡಿಮೆ ಅಂದರೆ 7 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. </p>.<p>ಮುಂದಿನ 5 ದಿನಗಳ ಕಾಲ ಶೀತಗಾಳಿ ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. </p>.<h2>ಶೀತ ಗಾಳಿ: ಆರೆಂಜ್ ಅಲರ್ಟ್ </h2><p>ಉತ್ತರ ಒಳನಾಡಿನ ಕೆಲವೆಡೆ ಮುಂದಿನ 48 ಗಂಟೆಗಳ ಕಾಲ ತೀವ್ರ ಸ್ವರೂಪದ ಶೀತಗಾಳಿ ಬೀಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೇಳಿದೆ.</p><p>ಇಂದು ರಾಜ್ಯದ ಉತ್ತರ ಒಳನಾಡಿನ ಬೀದರ್, ಬಾಗಲಕೋಟೆ, ವಿಜಯಪುರ ಮತ್ತು ಕಲಬುರಗಿಯಲ್ಲಿ ತೀವ್ರ ಸ್ವರೂಪದ ಶೀತ ಗಾಳಿ ಬೀಸುವ ಸಾಧ್ಯತೆಯಿದ್ದು, ಆರೆಂಜ್ ಅಲರ್ಟ್ ನೀಡಲಾಗಿದೆ. ಜನರು ಎಚ್ಚರಿಕೆ ವಹಿಸಬೇಕು ಎಂದೂ ಹೇಳಿದೆ.</p>. <p>ರಾಜ್ಯದ ವಿವಿಧ ಜಿಲ್ಲಾ ಕೇಂದ್ರಗಳಲ್ಲಿ ದಾಖಲಾದ ಕನಿಷ್ಠ ತಾಪಮಾನದ ವಿವರವನ್ನು ಹವಾಮಾನ ಇಲಾಖೆ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಹಂಚಿಕೊಂಡಿದೆ. ಅದರ ವಿವರ ಹೀಗಿದೆ.</p>.<h2>ಜಿಲ್ಲೆ –ತಾಪಮಾನ </h2> <ul><li><p>ಬೀದರ್ –7</p></li><li><p>ಚಿಕ್ಕಬಳ್ಳಾಪುರ–7.1</p></li><li><p>ಧಾರವಾಡ–7.4</p></li><li><p>ತುಮಕೂರು–7.4</p></li><li><p>ಚಿಕ್ಕಮಗಳೂರು–7.6</p></li><li><p>ಬೆಳಗಾವಿ– 7.8</p></li><li><p>ಹಾಸನ–8.3</p></li><li><p>ಕೊಡಗು–8.5</p></li><li><p>ಬಾಗಲಕೋಟೆ–8.6</p></li><li><p>ಹಾವೇರಿ-8.7</p></li><li><p>ಮೈಸೂರು-8.8</p></li><li><p>ವಿಜಯನಗರ-8.8</p></li><li><p>ಗದಗ-9</p></li><li><p>ವಿಜಯಪುರ-9.3</p></li><li><p>ಕಲಬುರಗಿ-9.4</p></li><li><p>ಮಂಡ್ಯ-9.7</p></li><li><p>ಉತ್ತರ ಕನ್ನಡ-9.8</p></li><li><p>ಕೋಲಾರ-9.9</p></li><li><p>ಕೊಪ್ಪಳ-9.9</p></li><li><p>ಚಾಮರಾಜನಗರ-10</p></li><li><p>ಶಿವಮೊಗ್ಗ-10</p></li><li><p>ಬಳ್ಳಾರಿ-10.1</p></li><li><p>ಬೆಂಗಳೂರು ದಕ್ಷಿಣ-10.1 </p></li><li><p>ಚಿತ್ರದುರ್ಗ–10.2 </p></li><li><p>ದಾವಣಗೆರೆ–10.2 </p></li><li><p>ರಾಯಚೂರು–10.2 </p></li><li><p>ಬೆಂಗಳೂರು ಗ್ರಾಮಾಂತರ–10.4 </p></li><li><p>ಬೆಂಗಳೂರು ನಗರ–10.8 </p></li><li><p>ಯಾದಗಿರಿ–11.4</p></li><li><p>ಉಡುಪಿ–14.4</p></li><li><p>ದಕ್ಷಿಣ ಕನ್ನಡ-15.5</p></li></ul>. ಬಾಗಲಕೋಟೆ ಜಿಲ್ಲೆಯ ತಾಪಮಾನದಲ್ಲಿ ಕುಸಿತ: ಆರೆಂಜ್ ಅಲರ್ಟ್.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>