<p><strong>ಸುವರ್ಣ ವಿಧಾನಸೌಧ (ಬೆಳಗಾವಿ):</strong> ವಿಧಾನ ಪರಿಷತ್ ಸಭಾಪತಿ ಅವರ ವಿರುದ್ಧ, ಸದಸ್ಯ ಎಂ.ನಾಗರಾಜ್ ಯಾದವ್ ಅವರು ಮಾಧ್ಯಮಗಳ ಎದುರು ಮಾಡಿರುವ ಆರೋಪಗಳ ಕುರಿತು ಬುಧವಾರದ ಕಲಾಪದ ವೇಳೆ ವ್ಯಾಪಕ ಚರ್ಚೆ ನಡೆಯಿತು.</p><p>ಸಭಾಪತಿ ಅವರ ಪೀಠಕ್ಕೆ ಎಲ್ಲರೂ ಗೌರವ ಸಲ್ಲಿಸಬೇಕು ಎಂಬುದರ ಜತೆಗೆ, ಅವರ ವಿರುದ್ಧ ದೂರು ಮತ್ತು ಆರೋಪಗಳು ಇದ್ದರೆ ಅವನ್ನು ಸದನದ ನಿಯಮಾನುಸಾರವೇ ದಾಖಲಿಸಬೇಕು ಎಂಬ ಒತ್ತಾಯವೂ ವ್ಯಕ್ತವಾಯಿತು.</p><p>ನಾಗರಾಜ್ ಯಾದವ್ ಅವರ ನಡೆಯ ಬಗ್ಗೆ ಸಭಾಪತಿ, ಸಭಾನಾಯಕ ಮತ್ತು ವಿರೋಧ ಪಕ್ಷದ ನಾಯಕ ಅವರು ಕುಳಿತು ಚರ್ಚಿಸಿ, ಕ್ರಮ ತೆಗೆದುಕೊಳ್ಳಬೇಕು ಎಂದು ಸಭಾಪತಿ ಪೀಠದಲ್ಲಿದ್ದ ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ಅವರು ಸೂಚಿಸಿದರು.</p><p>ಅದಕ್ಕೂ ಮುನ್ನ ಜೆಡಿಎಸ್ ಸದಸ್ಯ ಎಸ್.ಎಲ್.ಭೋಜೇಗೌಡ, ‘ಸಭಾಪತಿ ಅವರು ಭ್ರಷ್ಟಾಚಾರ ನಡೆಸಿದ್ದಾರೆ, ಪಕ್ಷಾತೀತವಾಗಿ ಇರಬೇಕು ಎಂಬುದಕ್ಕೆ ವ್ಯತಿರಿಕ್ತವಾಗಿ ನಡೆದುಕೊಂಡಿದ್ದಾರೆ, ಸಭಾಪತಿ ನಾಲಾಯಕ್ ಎಂದೆಲ್ಲಾ ನಾಗರಾಜ್ ಯಾದವ್ ಅವರು ಆರೋಪಿಸಿದ್ದಾರೆ. ಈ ಬಗ್ಗೆ ಅವರಿಂದ ವಿವರಣೆ ಪಡೆಯಬೇಕು. ಇಂತಹ ನಡೆಗೆ ಕಡಿವಾಣ ಹಾಕಬೇಕು’ ಎಂದು ವಿಷಯ ಪ್ರಸ್ತಾಪಿಸಿದರು.</p><p>ಕಾಂಗ್ರೆಸ್ನ ಬಿ.ಕೆ.ಹರಿಪ್ರಸಾದ್, ‘ಇಂತಹ ಒಂದು ಅನಗತ್ಯ ಪರಂಪರೆಯನ್ನು ಆರಂಭಿಸಿದ್ದು ವಿರೋಧ ಪಕ್ಷದವರು. ವಿಧಾನಸಭಾಧ್ಯಕ್ಷರ ವಿರುದ್ಧ, ಮಾಜಿ ಸಭಾಧ್ಯಕ್ಷರು ಸುದ್ದಿಗೋಷ್ಠಿ ನಡೆಸಿ ಆರೋಪಗಳನ್ನು ಮಾಡಿದರು. ಅದನ್ನೇ ಈ ಸದನದ ಸದಸ್ಯರೂ ಮಾಡಿದ್ದಾರೆ. ಎರಡನ್ನೂ ಒಪ್ಪಿಕೊಳ್ಳಬೇಕಾಗಿಲ್ಲ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸುವರ್ಣ ವಿಧಾನಸೌಧ (ಬೆಳಗಾವಿ):</strong> ವಿಧಾನ ಪರಿಷತ್ ಸಭಾಪತಿ ಅವರ ವಿರುದ್ಧ, ಸದಸ್ಯ ಎಂ.ನಾಗರಾಜ್ ಯಾದವ್ ಅವರು ಮಾಧ್ಯಮಗಳ ಎದುರು ಮಾಡಿರುವ ಆರೋಪಗಳ ಕುರಿತು ಬುಧವಾರದ ಕಲಾಪದ ವೇಳೆ ವ್ಯಾಪಕ ಚರ್ಚೆ ನಡೆಯಿತು.</p><p>ಸಭಾಪತಿ ಅವರ ಪೀಠಕ್ಕೆ ಎಲ್ಲರೂ ಗೌರವ ಸಲ್ಲಿಸಬೇಕು ಎಂಬುದರ ಜತೆಗೆ, ಅವರ ವಿರುದ್ಧ ದೂರು ಮತ್ತು ಆರೋಪಗಳು ಇದ್ದರೆ ಅವನ್ನು ಸದನದ ನಿಯಮಾನುಸಾರವೇ ದಾಖಲಿಸಬೇಕು ಎಂಬ ಒತ್ತಾಯವೂ ವ್ಯಕ್ತವಾಯಿತು.</p><p>ನಾಗರಾಜ್ ಯಾದವ್ ಅವರ ನಡೆಯ ಬಗ್ಗೆ ಸಭಾಪತಿ, ಸಭಾನಾಯಕ ಮತ್ತು ವಿರೋಧ ಪಕ್ಷದ ನಾಯಕ ಅವರು ಕುಳಿತು ಚರ್ಚಿಸಿ, ಕ್ರಮ ತೆಗೆದುಕೊಳ್ಳಬೇಕು ಎಂದು ಸಭಾಪತಿ ಪೀಠದಲ್ಲಿದ್ದ ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ಅವರು ಸೂಚಿಸಿದರು.</p><p>ಅದಕ್ಕೂ ಮುನ್ನ ಜೆಡಿಎಸ್ ಸದಸ್ಯ ಎಸ್.ಎಲ್.ಭೋಜೇಗೌಡ, ‘ಸಭಾಪತಿ ಅವರು ಭ್ರಷ್ಟಾಚಾರ ನಡೆಸಿದ್ದಾರೆ, ಪಕ್ಷಾತೀತವಾಗಿ ಇರಬೇಕು ಎಂಬುದಕ್ಕೆ ವ್ಯತಿರಿಕ್ತವಾಗಿ ನಡೆದುಕೊಂಡಿದ್ದಾರೆ, ಸಭಾಪತಿ ನಾಲಾಯಕ್ ಎಂದೆಲ್ಲಾ ನಾಗರಾಜ್ ಯಾದವ್ ಅವರು ಆರೋಪಿಸಿದ್ದಾರೆ. ಈ ಬಗ್ಗೆ ಅವರಿಂದ ವಿವರಣೆ ಪಡೆಯಬೇಕು. ಇಂತಹ ನಡೆಗೆ ಕಡಿವಾಣ ಹಾಕಬೇಕು’ ಎಂದು ವಿಷಯ ಪ್ರಸ್ತಾಪಿಸಿದರು.</p><p>ಕಾಂಗ್ರೆಸ್ನ ಬಿ.ಕೆ.ಹರಿಪ್ರಸಾದ್, ‘ಇಂತಹ ಒಂದು ಅನಗತ್ಯ ಪರಂಪರೆಯನ್ನು ಆರಂಭಿಸಿದ್ದು ವಿರೋಧ ಪಕ್ಷದವರು. ವಿಧಾನಸಭಾಧ್ಯಕ್ಷರ ವಿರುದ್ಧ, ಮಾಜಿ ಸಭಾಧ್ಯಕ್ಷರು ಸುದ್ದಿಗೋಷ್ಠಿ ನಡೆಸಿ ಆರೋಪಗಳನ್ನು ಮಾಡಿದರು. ಅದನ್ನೇ ಈ ಸದನದ ಸದಸ್ಯರೂ ಮಾಡಿದ್ದಾರೆ. ಎರಡನ್ನೂ ಒಪ್ಪಿಕೊಳ್ಳಬೇಕಾಗಿಲ್ಲ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>