ಧಾರವಾಡ: ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ಧಾರವಾಡದ ಡಿಸಿ ಕಂಪೌಂಡ್ ಬಳಿ ಇರುವ ಗೌರಿಶಂಕರ ಹಾಸ್ಟೆಲ್ಗೆ ಇಂದು ಪರಿಶೀಲನೆಗೆ ತೆರಳಿದ್ದರು.
ಈ ವೇಳೆ ಅಡುಗೆ ಮನೆ ದ್ವಾರದಲ್ಲಿ ಶೂ ಕಳಚಿ ಒಳಗೆ ಹೋಗಿ ಹೊರಕ್ಕೆ ಬಂದಾಗ ಮಹದೇವಪ್ಪ ಅವರು ಬೆಂಗಾವಲು ಸಿಬ್ಬಂದಿಯೊಬ್ಬರಿಂದ ಶೂ ಹಾಕಿಸಿಕೊಂಡರು.
ಹಾಸ್ಟೆಲ್ ಗೆ ಭೇಟಿ ನೀಡಿದ ಮಹದೇವಪ್ಪ ಅಡುಗೆ ಮನೆಯಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಕೋಣೆಯಿಂದ ಹೊರಗೆ ಬಂದಾಗ ಶೂಗಳನ್ನು ಸಿಬ್ಬಂದಿಯೊಬ್ಬರು ಹಾಕಿದರು.
ಹಾಸ್ಟೆಲ್ ನಲ್ಲಿ ಆಹಾರ ಪೂರೈಕೆ, ಸೌಕರ್ಯಗಳ ಕುರಿತು ವಿದ್ಯಾರ್ಥಿಗಳು ಮತ್ತು ನೌಕರರಿಂದ ಸಚಿವರು ಮಾಹಿತಿ ಪಡೆದರು.