ಜಾನಪದ ಲೋಕದ ಬಳಿ ಮದುವೆ ಸಿದ್ಧತೆ ಕಾರ್ಯಗಳನ್ನು ಮಂಗಳವಾರ ಪರಿಶೀಲಿಸಿ ಅವರು ಮಾತನಾಡಿದರು. ‘ನಮ್ಮ ಕುಟುಂಬಕ್ಕೆ ಹಾಸನ ಜಿಲ್ಲೆ ಜನ್ಮ ಕೊಟ್ಟಿದೆಯಾದರೂ ನಮಗೆ ರಾಜಕೀಯ ಜನ್ಮ ಕೊಟ್ಟಿದ್ದು ರಾಮನಗರ. ರೇವಣ್ಣ, ಪ್ರಜ್ವಲ್ ಹಾಸನಕ್ಕೆ ಸೀಮಿತವಾಗಿದ್ದಾರೆ. ನಾನು ರಾಮನಗರದಿಂದಲೇ ಮುಖ್ಯಮಂತ್ರಿ ಹಾಗೂ ನಂತರ ಪ್ರಧಾನಿ ಆದವನು. ಕುಮಾರಸ್ವಾಮಿ ಇಲ್ಲಿಂದಲೇ ಮುಖ್ಯಮಂತ್ರಿ ಆದವರು. ಹೀಗಾಗಿ ಜನರು ಬಯಸಿದರೆ ನಿಖಿಲ್ ಸ್ಪರ್ಧಿಸುವುದರಲ್ಲಿ ತಪ್ಪೇನಿಲ್ಲ. ಮಂಡ್ಯಕ್ಕೆ ಅವರು ಆಕಸ್ಮಿಕವಾಗಿ ಹೋದರೆ ಹೊರತು ಅಲ್ಲಿ ಬೆಳೆಯಲು ಅಲ್ಲ. ಮತ್ತೆ ಅವರು ಅಲ್ಲಿ ಸ್ಪರ್ಧಿಸುವುದಿಲ್ಲ’ ಎಂದರು.