‘ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು’
ಯಾವ ಸಮಾಜ ದೌರ್ಜನ್ಯಕ್ಕೆ ಒಳಗಾದ ಹೆಣ್ಣುಮಕ್ಕಳನ್ನು ಅರ್ಥ ಮಾಡಿಕೊಂಡಿದೆ? ಆದರದಿಂದ ಕಂಡಿದೆ? ಸ್ತ್ರೀಪರ ಸಮಾಜ ಹುಟ್ಟುವವರೆಗೂ ಇದು ಹೀಗೆಯೇ ನಡೆಯುತ್ತದೆ. ಇದನ್ನು ಅರಿತ ಹೆಣ್ಣು, ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು. ಅವಳು ಧೈರ್ಯ ತಾಳಬೇಕಾದ್ದು ಈ ಸಮಯದ ತುರ್ತು. ಜೀವ ಕಳೆದುಕೊಳ್ಳಬೇಕಾದವರು ನಾಚಿಕೆ, ಮರ್ಯಾದೆ ಇಲ್ಲದೆ ಸರೋವರದಲ್ಲಿ ಅಡಗುತ್ತಾರೆ. ಹೆಣ್ಣು ಧೈರ್ಯವಂತೆ. ಪರಿಸ್ಥಿತಿಯನ್ನು ಸ್ತಬ್ಧ ಮನಸ್ಥಿತಿಯಲ್ಲಿ ಎದುರಿಸಬೇಕು. ತನ್ನೊಳಗೇ ಚಿಂತಿಸಬೇಕು. ತನಗೆ ತಾನೇ ಸಂತೈಸಿಕೊಳ್ಳಬೇಕು. ದುರ್ಬಲ ಗೊಳಿಸುವ ಸಮಾಜದ ಬಗ್ಗೆ ನಿರ್ಲಿಪ್ತವಾಗಿರಬೇಕಾದ ಸಧ್ಯಸ್ಥಿತಿ ಅವಳದು. ...ಇದು ಸುಲಭವಲ್ಲ, ನಿಜ. ಆದರೆ ಹೆಣ್ಣಿನ ಬದುಕೇ ಸುಲಭವಲ್ಲವಲ್ಲ? -ವೈದೇಹಿ, ಸಾಹಿತಿ