<p><strong>ಬೆಂಗಳೂರು:</strong> ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ರಾಜ್ಯ ಸರ್ಕಾರ ಒದಗಿಸಿದ ಒಟ್ಟು ಅನುದಾನದಲ್ಲಿ, ವಿವಿಧ ಇಲಾಖೆಗಳು ಏಪ್ರಿಲ್ನಿಂದ ನವೆಂಬರ್ ಅಂತ್ಯದವರೆಗಿನ ಎಂಟು ತಿಂಗಳ ಅವಧಿಯಲ್ಲಿ ಶೇ 50ರಷ್ಟನ್ನು ವೆಚ್ಚ ಮಾಡಿವೆ.</p>.<p>ಬಜೆಟ್ನಲ್ಲಿ 47 ಇಲಾಖೆಗಳಿಗೆ ₹ 4,09,549.24 ಕೋಟಿ ಹಂಚಿಕೆ ಮಾಡಲಾಗಿದೆ. ಸರ್ಕಾರದ ಖಜಾನೆಯ ಲೆಕ್ಕದ ಪ್ರಕಾರ ನ. 30ರವರೆಗೆ ₹ 2,05,831.71 ಕೋಟಿ ಬಳಕೆ ಆಗಿದೆ. </p>.<p>ಈ ಪೈಕಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಪಶು ಸಂಗೋಪನೆ, ಇಂಧನ, ಕಂದಾಯ, ಕೈಗಾರಿಕೆ, ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆಯು ತಮ್ಮ ಪಾಲಿನ ಅನುದಾನದಲ್ಲಿ ಶೇ 60ಕ್ಕೂ ಹೆಚ್ಚು ಮೊತ್ತವನ್ನು ಬಳಕೆ ಮಾಡಿವೆ.</p>.<p>ಯೋಜನೆ, ಸಾಂಖ್ಯಿಕ, ವಿಜ್ಞಾನ, ತಂತ್ರಜ್ಞಾನ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ, ಕಾರ್ಮಿಕ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್, ಕೈಮಗ್ಗ ಮತ್ತು ಜವಳಿ, ಸಣ್ಣ ನೀರಾವರಿ, ಮೀನುಗಾರಿಕೆ ಇಲಾಖೆಗಳಿಗೆ ಒದಗಿಸಿದ ಅನುದಾನದಲ್ಲಿ ಶೇ 30ಕ್ಕೂ ಕಡಿಮೆ ಮೊತ್ತವನ್ನು ವೆಚ್ಚ ಮಾಡಿವೆ.</p>.<p>ಆರ್ಥಿಕ ವರ್ಷ ಅಂತ್ಯವಾಗಲು ಇನ್ನೂ ನಾಲ್ಕು ತಿಂಗಳು (ಡಿಸೆಂಬರ್ನಿಂದ ಮಾರ್ಚ್ವರೆಗೆ) ಬಾಕಿ ಉಳಿದಿದೆ. ಉಳಿದಿರುವ ಶೇ 50 ರಷ್ಟು ಅನುದಾನವನ್ನು ಆಡಳಿತ ಇಲಾಖೆಗಳು ಮುಂದಿನ ಅವಧಿಯಲ್ಲಿ ಬಳಸಿಕೊಳ್ಳಲು ಕ್ರಮ ತೆಗೆದುಕೊಳ್ಳಲಿದೆ ಎಂದು ಆರ್ಥಿಕ ಇಲಾಖೆಯನ್ನೂ ನಿಭಾಯಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.</p>.<p>2025–26 ನೇ ಸಾಲಿನಲ್ಲಿ ವಿವಿಧ ಇಲಾಖೆಗಳಿಗೆ ನಿಗದಿಪಡಿಸಿದ ಅನುದಾನದಲ್ಲಿ ನ. 30 ರ ಅಂತ್ಯಕ್ಕೆ ಸರಾಸರಿ ಅರ್ಧದಷ್ಟು ವೆಚ್ಚವಾಗಿದೆ. ಆಯವ್ಯಯದಲ್ಲಿ ವಿವಿಧ ಯೋಜನೆಗಳಿಗೆ ಹಂಚಿಕೆ ಮಾಡಿರುವ ಅನುದಾನವನ್ನು ಪ್ರಸಕ್ತ ಸಾಲಿನಲ್ಲಿಯೇ ಬಳಕೆ ಮಾಡುವಂತೆ ಸೂಚನೆ ನೀಡಲಾಗಿದೆ ಎಂದೂ ಅವರು ಹೇಳಿದ್ದಾರೆ.</p>. <p><strong>‘ಗ್ಯಾರಂಟಿ’ಗಳಿಗೆ ₹ 26,334 ಕೋಟಿ ವೆಚ್ಚ</strong></p><p>ರಾಜ್ಯ ತನ್ನ ಮಹತ್ವಾಕಾಂಕ್ಷಿ‘ಪಂಚ ಗ್ಯಾರಂಟಿ ’ಯೋಜನೆಗಳಿಗೆ ಪ್ರಸಕ್ತ ಸಾಲಿನ ಬಜೆಟ್ನಲ್ಲಿ ₹ 51,034 ಕೋಟಿ ಒದಗಿಸಿದೆ. ಅಲ್ಲದೆ, ಕಳೆದ ಆರ್ಥಿಕ ವರ್ಷದಲ್ಲಿ (2024–25) ಗ್ಯಾರಂಟಿ ಯೋಜನೆಗಳಿಗೆ ಹಂಚಿಕೆ ಮಾಡಿದ್ದ ಅನುದಾನದಲ್ಲಿ ವೆಚ್ಚವಾಗದೆ ಉಳಿಕೆಯಾಗಿದ್ದ ₹ 5,521 ಕೋಟಿಯನ್ನು 2025–26ನೇ ಸಾಲಿನಲ್ಲಿ ಪಾವತಿಸಲು ಆರ್ಥಿಕ ಇಲಾಖೆಗೆ ವರ್ಗಾಯಿಸಲಾಗಿದೆ. ಈ ಮೊತ್ತವೂ ಸೇರಿ ಗ್ಯಾರಂಟಿ ಯೋಜನೆಗಳಿಗೆ ಲಭ್ಯವಿದ್ದ ಅನುದಾನದಲ್ಲಿ ಖಜಾನೆಯ ಲೆಕ್ಕದ ಪ್ರಕಾರ ನ. 30ರವರೆಗೆ ₹ 26,334 ಕೋಟಿ ವೆಚ್ಚ ಆಗಿದೆ. ಫಲಾನುಭವಿಗಳ ಸಂಖ್ಯೆಗೆ ಅನುಗುಣವಾಗಿ ಅನುದಾನ ಬಿಡುಗಡೆ ಮಾಡಲಾಗುತ್ತದೆ ಎಂದು ಆರ್ಥಿಕ ಇಲಾಖೆಯ ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ರಾಜ್ಯ ಸರ್ಕಾರ ಒದಗಿಸಿದ ಒಟ್ಟು ಅನುದಾನದಲ್ಲಿ, ವಿವಿಧ ಇಲಾಖೆಗಳು ಏಪ್ರಿಲ್ನಿಂದ ನವೆಂಬರ್ ಅಂತ್ಯದವರೆಗಿನ ಎಂಟು ತಿಂಗಳ ಅವಧಿಯಲ್ಲಿ ಶೇ 50ರಷ್ಟನ್ನು ವೆಚ್ಚ ಮಾಡಿವೆ.</p>.<p>ಬಜೆಟ್ನಲ್ಲಿ 47 ಇಲಾಖೆಗಳಿಗೆ ₹ 4,09,549.24 ಕೋಟಿ ಹಂಚಿಕೆ ಮಾಡಲಾಗಿದೆ. ಸರ್ಕಾರದ ಖಜಾನೆಯ ಲೆಕ್ಕದ ಪ್ರಕಾರ ನ. 30ರವರೆಗೆ ₹ 2,05,831.71 ಕೋಟಿ ಬಳಕೆ ಆಗಿದೆ. </p>.<p>ಈ ಪೈಕಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಪಶು ಸಂಗೋಪನೆ, ಇಂಧನ, ಕಂದಾಯ, ಕೈಗಾರಿಕೆ, ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆಯು ತಮ್ಮ ಪಾಲಿನ ಅನುದಾನದಲ್ಲಿ ಶೇ 60ಕ್ಕೂ ಹೆಚ್ಚು ಮೊತ್ತವನ್ನು ಬಳಕೆ ಮಾಡಿವೆ.</p>.<p>ಯೋಜನೆ, ಸಾಂಖ್ಯಿಕ, ವಿಜ್ಞಾನ, ತಂತ್ರಜ್ಞಾನ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ, ಕಾರ್ಮಿಕ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್, ಕೈಮಗ್ಗ ಮತ್ತು ಜವಳಿ, ಸಣ್ಣ ನೀರಾವರಿ, ಮೀನುಗಾರಿಕೆ ಇಲಾಖೆಗಳಿಗೆ ಒದಗಿಸಿದ ಅನುದಾನದಲ್ಲಿ ಶೇ 30ಕ್ಕೂ ಕಡಿಮೆ ಮೊತ್ತವನ್ನು ವೆಚ್ಚ ಮಾಡಿವೆ.</p>.<p>ಆರ್ಥಿಕ ವರ್ಷ ಅಂತ್ಯವಾಗಲು ಇನ್ನೂ ನಾಲ್ಕು ತಿಂಗಳು (ಡಿಸೆಂಬರ್ನಿಂದ ಮಾರ್ಚ್ವರೆಗೆ) ಬಾಕಿ ಉಳಿದಿದೆ. ಉಳಿದಿರುವ ಶೇ 50 ರಷ್ಟು ಅನುದಾನವನ್ನು ಆಡಳಿತ ಇಲಾಖೆಗಳು ಮುಂದಿನ ಅವಧಿಯಲ್ಲಿ ಬಳಸಿಕೊಳ್ಳಲು ಕ್ರಮ ತೆಗೆದುಕೊಳ್ಳಲಿದೆ ಎಂದು ಆರ್ಥಿಕ ಇಲಾಖೆಯನ್ನೂ ನಿಭಾಯಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.</p>.<p>2025–26 ನೇ ಸಾಲಿನಲ್ಲಿ ವಿವಿಧ ಇಲಾಖೆಗಳಿಗೆ ನಿಗದಿಪಡಿಸಿದ ಅನುದಾನದಲ್ಲಿ ನ. 30 ರ ಅಂತ್ಯಕ್ಕೆ ಸರಾಸರಿ ಅರ್ಧದಷ್ಟು ವೆಚ್ಚವಾಗಿದೆ. ಆಯವ್ಯಯದಲ್ಲಿ ವಿವಿಧ ಯೋಜನೆಗಳಿಗೆ ಹಂಚಿಕೆ ಮಾಡಿರುವ ಅನುದಾನವನ್ನು ಪ್ರಸಕ್ತ ಸಾಲಿನಲ್ಲಿಯೇ ಬಳಕೆ ಮಾಡುವಂತೆ ಸೂಚನೆ ನೀಡಲಾಗಿದೆ ಎಂದೂ ಅವರು ಹೇಳಿದ್ದಾರೆ.</p>. <p><strong>‘ಗ್ಯಾರಂಟಿ’ಗಳಿಗೆ ₹ 26,334 ಕೋಟಿ ವೆಚ್ಚ</strong></p><p>ರಾಜ್ಯ ತನ್ನ ಮಹತ್ವಾಕಾಂಕ್ಷಿ‘ಪಂಚ ಗ್ಯಾರಂಟಿ ’ಯೋಜನೆಗಳಿಗೆ ಪ್ರಸಕ್ತ ಸಾಲಿನ ಬಜೆಟ್ನಲ್ಲಿ ₹ 51,034 ಕೋಟಿ ಒದಗಿಸಿದೆ. ಅಲ್ಲದೆ, ಕಳೆದ ಆರ್ಥಿಕ ವರ್ಷದಲ್ಲಿ (2024–25) ಗ್ಯಾರಂಟಿ ಯೋಜನೆಗಳಿಗೆ ಹಂಚಿಕೆ ಮಾಡಿದ್ದ ಅನುದಾನದಲ್ಲಿ ವೆಚ್ಚವಾಗದೆ ಉಳಿಕೆಯಾಗಿದ್ದ ₹ 5,521 ಕೋಟಿಯನ್ನು 2025–26ನೇ ಸಾಲಿನಲ್ಲಿ ಪಾವತಿಸಲು ಆರ್ಥಿಕ ಇಲಾಖೆಗೆ ವರ್ಗಾಯಿಸಲಾಗಿದೆ. ಈ ಮೊತ್ತವೂ ಸೇರಿ ಗ್ಯಾರಂಟಿ ಯೋಜನೆಗಳಿಗೆ ಲಭ್ಯವಿದ್ದ ಅನುದಾನದಲ್ಲಿ ಖಜಾನೆಯ ಲೆಕ್ಕದ ಪ್ರಕಾರ ನ. 30ರವರೆಗೆ ₹ 26,334 ಕೋಟಿ ವೆಚ್ಚ ಆಗಿದೆ. ಫಲಾನುಭವಿಗಳ ಸಂಖ್ಯೆಗೆ ಅನುಗುಣವಾಗಿ ಅನುದಾನ ಬಿಡುಗಡೆ ಮಾಡಲಾಗುತ್ತದೆ ಎಂದು ಆರ್ಥಿಕ ಇಲಾಖೆಯ ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>