ಭಾನುವಾರ, 26 ಅಕ್ಟೋಬರ್ 2025
×
ADVERTISEMENT
ADVERTISEMENT

ಹೊನ್ನಾವರ | ವನ್ಯಧಾಮದಲ್ಲಿ ಗಣಿಗಾರಿಕೆಗೆ ಯತ್ನ: ಶರಾವತಿ ನದಿ ತೀರದಲ್ಲಿ ಆತಂಕ

ಉಮೇಶ ಭಟ್ಟ ಪಿಎಚ್‌
Published : 25 ಅಕ್ಟೋಬರ್ 2025, 23:30 IST
Last Updated : 25 ಅಕ್ಟೋಬರ್ 2025, 23:30 IST
ಫಾಲೋ ಮಾಡಿ
Comments
ಮಾರ್ಗಸೂಚಿ ಬದಲು:
ಅಲ್ಯುಮಿನಿಯಂ ಉತ್ಪಾದನೆಗೆ ಪ್ರಮುಖ ಕಚ್ಚಾ ವಸ್ತುವಾಗಿರುವ ಬಾಕ್ಸೈಟ್‌ಗೆ ಉದ್ಯಮ ವಲಯದಲ್ಲಿ ಬೇಡಿಕೆಯಿದೆ. ಅಲ್ಯುಮಿನಿಯಂ ಪ್ರಮಾಣ ನಿಟ್ಟಡಗಿ ಪ್ರದೇಶದಲ್ಲಿ ಹೆಚ್ಚಿರುವ ಮಾಹಿತಿ ಆಧರಿಸಿ ಸಮೀಕ್ಷೆಗೆ ಅನುಮತಿ ನೀಡುವಂತೆ ಸಂಸ್ಥೆಯು ಕೇಂದ್ರ ಪರಿಸರ ಸಚಿವಾಲಯಕ್ಕೆ ಮನವಿ ಸಲ್ಲಿಸಿದೆ. ಇದನ್ನು ಪರಿಗಣಿಸಿರುವ ಕೇಂದ್ರ ಸರ್ಕಾರವು, ವರದಿ ನೀಡುವಂತೆ ಅರಣ್ಯ ಇಲಾಖೆಗೆ ಸೂಚನೆ ನೀಡಿದೆ. ಹೊನ್ನಾವರ ವಿಭಾಗದ ಅಧಿಕಾರಿಗಳು ಸ್ಥಳ ಪರಿಶೀಲಿಸಿ, ವರದಿ ನೀಡಲು ಸಿದ್ಧತೆ ಮಾಡಿಕೊಂಡಿ‌ದ್ದಾರೆ.
ಸಾಗರ ವನ್ಯಧಾಮಕ್ಕೆ ಅಪಾಯ:
ಭಟ್ಕಳ ತಾಲ್ಲೂಕಿನ ಮಂಕಿಯಿಂದ ಹೊನ್ನಾವರ ತಾಲ್ಲೂಕಿನ ಕಾಸರಕೋಡಿನವರೆಗಿನ 7.5 ಕಿ.ಮೀ. ಉದ್ದದ ವ್ಯಾಪ್ತಿಯಲ್ಲಿ ಕಡಲತೀರ, ಇದರ ಸುತ್ತಮುತ್ತಲಿನ 835.02 ಹೆಕ್ಟೇರ್ ಅರಣ್ಯಪ್ರದೇಶ ಹಾಗೂ ಅರಬ್ಬೀ ಸಮುದ್ರದ 6 ಕಿ.ಮೀ. ಜಲ ಪ್ರದೇಶದಲ್ಲಿನ 5124.302 ಹೆಕ್ಟೇರ್ ಪ್ರದೇಶ ಒಳಗೊಂಡು ಅಪ್ಸರಕೊಂಡ–ಮುಗಳಿ ಸಾಗರ ವನ್ಯಜೀವಿ ಧಾಮವನ್ನು ಘೋಷಿಸಲಾಗಿದೆ. ವಿಭಿನ್ನ ಮೀನುಗಳು, ಸಮುದ್ರ ಸೌತೆ, ಡಾಲ್ಫಿನ್ ಸಹಿತ ಅಪರೂಪದ ಜಲಚರಗಳ ಸಂರಕ್ಷಣೆ ಹಾಗೂ ಸಂವರ್ಧನೆಗೆ ಸಹಾಯಕವಾಗಲೆಂದು ಘೋಷಿಸಲಾದ ಈ ವನ್ಯಧಾಮದಿಂದ ಕೇವಲ 5 ಕಿ.ಮಿ ದೂರದಲ್ಲಿ ನಿಟ್ಟಡಗಿ ಅರಣ್ಯ ಪ್ರದೇಶವಿದೆ. ಈ ಕಾರಣದಿಂದಲೇ ಗಣಿ ಯೋಜನೆಗೆ ಇಲ್ಲಿ ಬಲವಾದ ವಿರೋಧ ವ್ಯಕ್ತವಾಗುತ್ತಿದೆ.
ಮುಖ್ಯಾಂಶಗಳು
ಹೊನ್ನಾವರ ತಾಲ್ಲೂಕಿನಲ್ಲಿ ಬಾಕ್ಸೈಟ್‌ ಖನಿಜ ಶೋಧನೆಗೆ ಮಹಾರಾಷ್ಟ್ರ ಕಂಪನಿಯಿಂದ ಬೇಡಿಕೆ ಬಂದಿದೆ. ಸದ್ಯದಲ್ಲೇ ಸ್ಥಳಕ್ಕೆ ಭೇಟಿ ನೀಡಿ ಸಮಗ್ರ ವರದಿ ಸಲ್ಲಿಸುತ್ತೇನೆ
ಸಿ.ಕೆ.ಯೋಗೀಶ, ಉಪ ಅರಣ್ಯ ಸಂರಕ್ಷಣಾಧಿಕಾರಿ, ಹೊನ್ನಾವರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT