<p><strong>ಢಾಕಾ, ಬಾಂಗ್ಲಾದೇಶ</strong>: ಸೂಫಿ ಅನುಯಾಯಿಗಳನ್ನು ನಾಸ್ತಿಕರು ಎಂದು ಘೋಷಿಸಬೇಕು ಎಂದು ಒತ್ತಾಯಿಸಿ ಶನಿವಾರ ಢಾಕಾದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪ್ರತಿಭಟನೆ ನಡೆಸಿದರು. </p>.<p>19ನೇ ಶತಮಾನದಲ್ಲಿ ಭಾರತದಲ್ಲಿ ಹುಟ್ಟಿಕೊಂಡ ಸೂಫಿ ಪಂಥದ ಅನುಯಾಯಿಗಳಾದ ಅಹಮದೀಯ ಸಮುದಾಯವು ಮುಸಲ್ಮಾನ ಬಾಹುಳ್ಯ ಹೊಂದಿದ್ದ ಬಾಂಗ್ಲಾದೇಶದಲ್ಲಿ ದೀರ್ಘಕಾಲದಿಂದಲೂ ಕಿರುಕುಳ ಅನುಭವಿಸುತ್ತಿದೆ. ಶೇಕ್ ಹಸೀನಾ ಅವರನ್ನು ಬಾಂಗ್ಲಾದೇಶದ ಪ್ರಧಾನಿ ಹುದ್ದೆಯಿಂದ ಪದಚ್ಯುತಗೊಳಿಸಿದ ಬಳಿಕ ಈ ಸಮುದಾಯಗಳ ಮೇಲೆ ಗುಂಪು ದಾಳಿಗಳು ಹೆಚ್ಚಾಗಿವೆ.</p>.<p class="title">ಢಾಕಾದಲ್ಲಿ ನಡೆದ ಸಮಾವೇಶದಲ್ಲಿ ಭಾರತ, ಪಾಕಿಸ್ತಾನ, ಸೌದಿ ಅರೇಬಿಯಾ, ಈಜಿಪ್ಟ್ನ ಧಾರ್ಮಿಕ ಪ್ರವಚನಕಾರರು ಹಾಗೂ ರಾಜಕಾರಣಿಗಳು ಭಾಗವಹಿಸಿದ್ದರು.</p>.<p class="title">ಕೆಲವು ಪ್ರತಿಭಟನಕಾರರು ಧರಿಸಿದ್ದ ಟೀ ಶರ್ಟ್ಗಳಲ್ಲಿ ‘ಅಹಮದೀಯರನ್ನು ಕಾಫಿರರು ಎಂದು ಘೋಷಿಸಬೇಕು’ ಎಂದು ಬರಹಗಳನ್ನು ಹಾಕಲಾಗಿತ್ತು. ಈ ಪಂಥದ ವಿರುದ್ಧ ಕಾನೂನು ಜಾರಿಗೊಳಿಸಬೇಕು ಎಂದು ಬ್ಯಾನರ್ಗಳನ್ನು ಹಾಕಿದ್ದರು.</p>.<p class="title">ಕಟ್ಟರ್ ಇಸ್ಲಾಮಿಕ್ ಧರ್ಮಪ್ರಚಾರಕರು ‘ಅಹಮದೀಯ’ರನ್ನು ಧರ್ಮನಿಂದಕರು ಎಂದೇ ಭಾವಿಸುತ್ತಾರೆ. </p>.<p class="title">‘ಅಹಮದೀಯರು ನಮಗಿಂತಲೂ ಸಂಪೂರ್ಣವಾಗಿ ಭಿನ್ನತೆ ಹೊಂದಿದ್ದಾರೆ. ಎಂದಿಗೂ ಅವರು ನಮ್ಮವರಲ್ಲ. ಬೇರೆ ಧರ್ಮೀಯರಂತೆ ನಮ್ಮ ದೇಶದಲ್ಲಿ ಬದುಕುತ್ತಿದ್ದಾರೆ. ಅವರೂ ಎಂದಿಗೂ ಮುಸಲ್ಮಾನರಲ್ಲ’ ಎಂದು ಪ್ರತಿಭಟನಕಾರ ಮೊಹಮ್ಮದ್ ಮಮುನ್ ಶೇಕ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಢಾಕಾ, ಬಾಂಗ್ಲಾದೇಶ</strong>: ಸೂಫಿ ಅನುಯಾಯಿಗಳನ್ನು ನಾಸ್ತಿಕರು ಎಂದು ಘೋಷಿಸಬೇಕು ಎಂದು ಒತ್ತಾಯಿಸಿ ಶನಿವಾರ ಢಾಕಾದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪ್ರತಿಭಟನೆ ನಡೆಸಿದರು. </p>.<p>19ನೇ ಶತಮಾನದಲ್ಲಿ ಭಾರತದಲ್ಲಿ ಹುಟ್ಟಿಕೊಂಡ ಸೂಫಿ ಪಂಥದ ಅನುಯಾಯಿಗಳಾದ ಅಹಮದೀಯ ಸಮುದಾಯವು ಮುಸಲ್ಮಾನ ಬಾಹುಳ್ಯ ಹೊಂದಿದ್ದ ಬಾಂಗ್ಲಾದೇಶದಲ್ಲಿ ದೀರ್ಘಕಾಲದಿಂದಲೂ ಕಿರುಕುಳ ಅನುಭವಿಸುತ್ತಿದೆ. ಶೇಕ್ ಹಸೀನಾ ಅವರನ್ನು ಬಾಂಗ್ಲಾದೇಶದ ಪ್ರಧಾನಿ ಹುದ್ದೆಯಿಂದ ಪದಚ್ಯುತಗೊಳಿಸಿದ ಬಳಿಕ ಈ ಸಮುದಾಯಗಳ ಮೇಲೆ ಗುಂಪು ದಾಳಿಗಳು ಹೆಚ್ಚಾಗಿವೆ.</p>.<p class="title">ಢಾಕಾದಲ್ಲಿ ನಡೆದ ಸಮಾವೇಶದಲ್ಲಿ ಭಾರತ, ಪಾಕಿಸ್ತಾನ, ಸೌದಿ ಅರೇಬಿಯಾ, ಈಜಿಪ್ಟ್ನ ಧಾರ್ಮಿಕ ಪ್ರವಚನಕಾರರು ಹಾಗೂ ರಾಜಕಾರಣಿಗಳು ಭಾಗವಹಿಸಿದ್ದರು.</p>.<p class="title">ಕೆಲವು ಪ್ರತಿಭಟನಕಾರರು ಧರಿಸಿದ್ದ ಟೀ ಶರ್ಟ್ಗಳಲ್ಲಿ ‘ಅಹಮದೀಯರನ್ನು ಕಾಫಿರರು ಎಂದು ಘೋಷಿಸಬೇಕು’ ಎಂದು ಬರಹಗಳನ್ನು ಹಾಕಲಾಗಿತ್ತು. ಈ ಪಂಥದ ವಿರುದ್ಧ ಕಾನೂನು ಜಾರಿಗೊಳಿಸಬೇಕು ಎಂದು ಬ್ಯಾನರ್ಗಳನ್ನು ಹಾಕಿದ್ದರು.</p>.<p class="title">ಕಟ್ಟರ್ ಇಸ್ಲಾಮಿಕ್ ಧರ್ಮಪ್ರಚಾರಕರು ‘ಅಹಮದೀಯ’ರನ್ನು ಧರ್ಮನಿಂದಕರು ಎಂದೇ ಭಾವಿಸುತ್ತಾರೆ. </p>.<p class="title">‘ಅಹಮದೀಯರು ನಮಗಿಂತಲೂ ಸಂಪೂರ್ಣವಾಗಿ ಭಿನ್ನತೆ ಹೊಂದಿದ್ದಾರೆ. ಎಂದಿಗೂ ಅವರು ನಮ್ಮವರಲ್ಲ. ಬೇರೆ ಧರ್ಮೀಯರಂತೆ ನಮ್ಮ ದೇಶದಲ್ಲಿ ಬದುಕುತ್ತಿದ್ದಾರೆ. ಅವರೂ ಎಂದಿಗೂ ಮುಸಲ್ಮಾನರಲ್ಲ’ ಎಂದು ಪ್ರತಿಭಟನಕಾರ ಮೊಹಮ್ಮದ್ ಮಮುನ್ ಶೇಕ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>