<p><strong>ಇಸ್ಲಾಮಾಬಾದ್:</strong> ‘ಶಾಂತಿ ಮಾರ್ಗ ಹಿಡಿಯಿರಿ ಇಲ್ಲವೇ ಅರಾಜಕತೆಯ ಅವ್ಯವಸ್ಥೆ ಅನುಭವಿಸಿ’ ಎಂದು ಅಫ್ಗಾನಿಸ್ತಾನಕ್ಕೆ ಪಾಕಿಸ್ತಾನದ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಸೈಯದ್ ಆಸಿಂ ಮುನೀರ್ ಶನಿವಾರ ಎಚ್ಚರಿಕೆ ನೀಡಿದರು.</p>.<p>ಖೈಬರ್ ಪಖ್ತುಂಖ್ವಾದಲ್ಲಿ ನಡೆದ ಪಾಕಿಸ್ತಾನ ಮಿಲಿಟರಿ ಅಕಾಡೆಮಿಯ ಆರ್ಮಿ ಕೆಡೆಟ್ಗಳ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ‘ಉಗ್ರರು ಅಫ್ಗಾನಿಸ್ತಾನದಲ್ಲಿ ನಿಂತು ಪಾಕಿಸ್ತಾನದ ಮೇಲೆ ದಾಳಿ ನಡೆಸುವುದರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಿ’ ಎಂದು ತಾಕೀತು ಮಾಡಿದರು.</p>.<p>ಅಫ್ಗನ್ನಲ್ಲಿನ ಉಗ್ರರ ಸೇನಾ ನೆಲೆಗಳ ಮೇಲೆ ಪಾಕಿಸ್ತಾನ ಶುಕ್ರವಾರ ತಡರಾತ್ರಿ ದಾಳಿ ನಡೆಸಿದೆ. ಈ ಬೆನ್ನಲ್ಲೇ ಮುನೀರ್ ಈ ಹೇಳಿಕೆ ನೀಡಿದರು.</p>.<p><strong>ಶಾಂತಿ ಮಾತುಕತೆ: </strong>ಪಾಕಿಸ್ತಾನ–ಅಫ್ಗಾನಿಸ್ತಾನ ನಡುವಣ ಸೇನಾ ಸಂಘರ್ಷದಿಂದಾಗಿ ಉಭಯ ದೇಶಗಳ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಘರ್ಷ ನಿಲ್ಲಿಸಲು ಕತಾರ್ ಸರ್ಕಾರವು ನಿರಂತರವಾಗಿ ಯತ್ನಿಸುತ್ತಿದೆ.</p>.<p>ಈ ಮಧ್ಯೆ ಪಾಕಿಸ್ತಾನ ರಕ್ಷಣಾ ಸಚಿವ ಖ್ವಾಜಾ ಆಸೀಫ್ ನೇತೃತ್ವದ ನಿಯೋಗವು ಅಫ್ಗಾನಿಸ್ತಾನದ ಪ್ರತಿನಿಧಿಗಳೊಂದಿಗೆ ದೋಹಾದಲ್ಲಿ ಮಾತುಕತೆ ನಡೆಸಲಿದೆ ಎಂದು ಪಾಕಿಸ್ತಾನ ಸರ್ಕಾರವು ಶನಿವಾರ ತಿಳಿಸಿದೆ.</p>.<p><strong>ಪಾಕ್ ಸೇನೆಯಿಂದ 1200 ಬಾರಿ ಗಡಿ ಉಲ್ಲಂಘನೆ </strong></p><p><strong>ನವದೆಹಲಿ:</strong> ಕಳೆದ ನಾಲ್ಕು ವರ್ಷಗಳಲ್ಲಿ ಪಾಕಿಸ್ತಾನ ಸೇನೆಯು 1200 ಬಾರಿ ಅಫ್ಗಾನಿಸ್ತಾನದ ಗಡಿಯನ್ನು ಮತ್ತು 710 ಬಾರಿ ವಾಯುಮಾರ್ಗವನ್ನು ಉಲ್ಲಂಘಿಸಿದೆ ಎಂದು ಅಫ್ಗನ್ ಮೂಲಗಳು ತಿಳಿಸಿವೆ. ಅಷ್ಟೇ ಅಲ್ಲದೆ ಈ ನಾಲ್ಕು ವರ್ಷಗಳಲ್ಲಿ ನಡೆದ ದಾಳಿಗಳಲ್ಲಿ 102 ನಾಗರಿಕರು ಮತ್ತು ಅಫ್ಗನ್ ಬಾರ್ಡರ್ ಗಾರ್ಡ್ಸ್ ಹತ್ಯೆಯಾಗಿದ್ದಾರೆ. 139 ಮಂದಿ ಗಾಯಗೊಂಡಿದ್ದಾರೆ. ಅಸಂಖ್ಯಾತ ಮನೆಗಳು ಮತ್ತು ಅಂಗಡಿಗಳು ನಾಶವಾಗಿವೆ ಎಂದು ತಿಳಿಸಿವೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಇಸ್ಲಾಮಾಬಾದ್:</strong> ‘ಶಾಂತಿ ಮಾರ್ಗ ಹಿಡಿಯಿರಿ ಇಲ್ಲವೇ ಅರಾಜಕತೆಯ ಅವ್ಯವಸ್ಥೆ ಅನುಭವಿಸಿ’ ಎಂದು ಅಫ್ಗಾನಿಸ್ತಾನಕ್ಕೆ ಪಾಕಿಸ್ತಾನದ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಸೈಯದ್ ಆಸಿಂ ಮುನೀರ್ ಶನಿವಾರ ಎಚ್ಚರಿಕೆ ನೀಡಿದರು.</p>.<p>ಖೈಬರ್ ಪಖ್ತುಂಖ್ವಾದಲ್ಲಿ ನಡೆದ ಪಾಕಿಸ್ತಾನ ಮಿಲಿಟರಿ ಅಕಾಡೆಮಿಯ ಆರ್ಮಿ ಕೆಡೆಟ್ಗಳ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ‘ಉಗ್ರರು ಅಫ್ಗಾನಿಸ್ತಾನದಲ್ಲಿ ನಿಂತು ಪಾಕಿಸ್ತಾನದ ಮೇಲೆ ದಾಳಿ ನಡೆಸುವುದರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಿ’ ಎಂದು ತಾಕೀತು ಮಾಡಿದರು.</p>.<p>ಅಫ್ಗನ್ನಲ್ಲಿನ ಉಗ್ರರ ಸೇನಾ ನೆಲೆಗಳ ಮೇಲೆ ಪಾಕಿಸ್ತಾನ ಶುಕ್ರವಾರ ತಡರಾತ್ರಿ ದಾಳಿ ನಡೆಸಿದೆ. ಈ ಬೆನ್ನಲ್ಲೇ ಮುನೀರ್ ಈ ಹೇಳಿಕೆ ನೀಡಿದರು.</p>.<p><strong>ಶಾಂತಿ ಮಾತುಕತೆ: </strong>ಪಾಕಿಸ್ತಾನ–ಅಫ್ಗಾನಿಸ್ತಾನ ನಡುವಣ ಸೇನಾ ಸಂಘರ್ಷದಿಂದಾಗಿ ಉಭಯ ದೇಶಗಳ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಘರ್ಷ ನಿಲ್ಲಿಸಲು ಕತಾರ್ ಸರ್ಕಾರವು ನಿರಂತರವಾಗಿ ಯತ್ನಿಸುತ್ತಿದೆ.</p>.<p>ಈ ಮಧ್ಯೆ ಪಾಕಿಸ್ತಾನ ರಕ್ಷಣಾ ಸಚಿವ ಖ್ವಾಜಾ ಆಸೀಫ್ ನೇತೃತ್ವದ ನಿಯೋಗವು ಅಫ್ಗಾನಿಸ್ತಾನದ ಪ್ರತಿನಿಧಿಗಳೊಂದಿಗೆ ದೋಹಾದಲ್ಲಿ ಮಾತುಕತೆ ನಡೆಸಲಿದೆ ಎಂದು ಪಾಕಿಸ್ತಾನ ಸರ್ಕಾರವು ಶನಿವಾರ ತಿಳಿಸಿದೆ.</p>.<p><strong>ಪಾಕ್ ಸೇನೆಯಿಂದ 1200 ಬಾರಿ ಗಡಿ ಉಲ್ಲಂಘನೆ </strong></p><p><strong>ನವದೆಹಲಿ:</strong> ಕಳೆದ ನಾಲ್ಕು ವರ್ಷಗಳಲ್ಲಿ ಪಾಕಿಸ್ತಾನ ಸೇನೆಯು 1200 ಬಾರಿ ಅಫ್ಗಾನಿಸ್ತಾನದ ಗಡಿಯನ್ನು ಮತ್ತು 710 ಬಾರಿ ವಾಯುಮಾರ್ಗವನ್ನು ಉಲ್ಲಂಘಿಸಿದೆ ಎಂದು ಅಫ್ಗನ್ ಮೂಲಗಳು ತಿಳಿಸಿವೆ. ಅಷ್ಟೇ ಅಲ್ಲದೆ ಈ ನಾಲ್ಕು ವರ್ಷಗಳಲ್ಲಿ ನಡೆದ ದಾಳಿಗಳಲ್ಲಿ 102 ನಾಗರಿಕರು ಮತ್ತು ಅಫ್ಗನ್ ಬಾರ್ಡರ್ ಗಾರ್ಡ್ಸ್ ಹತ್ಯೆಯಾಗಿದ್ದಾರೆ. 139 ಮಂದಿ ಗಾಯಗೊಂಡಿದ್ದಾರೆ. ಅಸಂಖ್ಯಾತ ಮನೆಗಳು ಮತ್ತು ಅಂಗಡಿಗಳು ನಾಶವಾಗಿವೆ ಎಂದು ತಿಳಿಸಿವೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>