<p><strong>ಟಿಯಾನ್ ಜಿನ್:</strong> ಭಾರತ, ಚೀನಾ ಸ್ನೇಹಿತರಾಗಿರುವುದೇ ಉತ್ತಮ. ಗಡಿ ಸಮಸ್ಯೆಯು ದ್ವಿಪಕ್ಷೀಯ ಸಂಬಂಧವನ್ನು ವ್ಯಾಖ್ಯಾನಿಸಲು ಬಿಡಬಾರದು ಎಂದು ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಾನುವಾರ ಹೇಳಿದ್ದಾರೆ.</p><p>ಶಾಂಘೈ ಸಹಕಾರ ಸಂಘಟನೆಯ (ಎಸ್ಸಿಒ) ವಾರ್ಷಿಕ ಶೃಂಗಸಭೆಯು ಟಿಯಾನ್ ಜಿನ್ ನಗರದಲ್ಲಿ ಇಂದಿನಿಂದ (ಭಾನುವಾರದಿಂದ) ಆರಂಭವಾಗಿದೆ. ಈ ವೇಳೆ ಷಿ ಹಾಗೂ ಮೋದಿ ಮಾತುಕತೆ ನಡೆಸಿದ್ದಾರೆ.</p><p>ಏಷ್ಯಾದ ನೆರೆಹೊರೆಯ ರಾಷ್ಟ್ರಗಳಾಗಿರುವ ಭಾರತ ಮತ್ತು ಚೀನಾ, ಗಡಿ ಪ್ರದೇಶಗಳಲ್ಲಿ ಶಾಂತಿ ನೆಲೆಸುವುದನ್ನು ಖಾತ್ರಿಪಡಿಸಲು ಒಟ್ಟಾಗಿ ಕೆಲಸ ಮಾಡಬೇಕಿದೆ. ಗಡಿ ಸಮಸ್ಯೆಯು ಎರಡೂ ದೇಶಗಳ ನಡುವಣ ಒಟ್ಟಾರೆ ಸಂಬಂಧವನ್ನು ವ್ಯಾಖ್ಯಾನಿಸಲು ಬಿಡಬಾರದು ಎಂದು ಈ ವೇಳೆ ಮೋದಿಗೆ ಷಿ ಹೇಳಿದ್ದಾರೆ.</p><p>ಭಾರತ ಮತ್ತು ಚೀನಾ ಪಾಲುದಾರ ರಾಷ್ಟ್ರಗಳೇ ಹೊರತು ಪ್ರತಿಸ್ಪರ್ಧಿಗಳಲ್ಲ. ಎರಡೂ ದೇಶಗಳು ಪರಸ್ಪರರಿಗೆ ಬೆದರಿಕೆಯಲ್ಲ. ಅಭಿವೃದ್ಧಿಗೆ ಪೂರಕ ಅವಕಾಶಗಳಾಗಿವೆ ಎಂದು ಪ್ರತಿಪಾದಿಸಿದ್ದಾರೆ.</p><p>ಸಮಗ್ರತೆಗೆ ಬದ್ಧವಾಗಿರುವವರೆಗೆ ಭಾರತ – ಚೀನಾ ದ್ವಿಪಕ್ಷೀಯ ಸಂಬಂಧ ದೀರ್ಘಕಾಲಿನ ಹಾಗೂ ಸ್ಥಿರ ಬೆಳವಣಿಗೆ ಸಾಧಿಸಲಿದೆ ಎಂದಿದ್ದಾರೆ.</p>.ಶಾಂಘೈ ಶೃಂಗಸಭೆ: ಗಡಿ ಬಿಕ್ಕಟ್ಟಿನ ನ್ಯಾಯಯುತ ಇತ್ಯರ್ಥಕ್ಕೆ ಮೋದಿ, ಷಿ ಸಹಮತ.ಶಾಂಘೈ ಶೃಂಗಸಭೆ: ದ್ವಿಪಕ್ಷೀಯ ಸಭೆ ನಡೆಸಿದ ಮೋದಿ–ಜಿನ್ಪಿಂಗ್.<p>'ಭಾರತ, ಚೀನಾ ಉತ್ತಮ ನೆರೆಹೊರೆ ರಾಷ್ಟ್ರಗಳಾಗುವುದು, ಸೌಹಾರ್ದಯುತ ಸಂಬಂಧ ಹೊಂದಿರುವ ಸ್ನೇಹಿತರಾಗುವುದು, ಪರಸ್ಪರರ ಯಶಸ್ಸಿಗೆ ಪೂರಕ ಪಾಲುದಾರರಾಗುವುದು ಮತ್ತು ಡ್ರ್ಯಾಗನ್, ಆನೆ ಒಂದಾಗುವುದು ಸರಿಯಾದ ಆಯ್ಕೆಯಾಗಲಿದೆ' ಎಂದು ಒತ್ತಿ ಹೇಳಿದ್ದಾರೆ.</p><p>ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಆಡಳಿತವು ಆರಂಭಿಸಿರುವ ಸುಂಕ ಸಮರವು ಜಾಗತಿಕ ಆರ್ಥಿಕತೆ ಮೇಲೆ ಪರಿಣಾಮ ಉಂಟುಮಾಡಿದೆ. ಇದೇ ಹೊತ್ತಿನಲ್ಲಿ ಷಿ ಮತ್ತು ಮೋದಿ ಮಾತುಕತೆ ನಡೆಸಿರುವುದು ಮಹತ್ವ ಪಡೆದುಕೊಂಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಟಿಯಾನ್ ಜಿನ್:</strong> ಭಾರತ, ಚೀನಾ ಸ್ನೇಹಿತರಾಗಿರುವುದೇ ಉತ್ತಮ. ಗಡಿ ಸಮಸ್ಯೆಯು ದ್ವಿಪಕ್ಷೀಯ ಸಂಬಂಧವನ್ನು ವ್ಯಾಖ್ಯಾನಿಸಲು ಬಿಡಬಾರದು ಎಂದು ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಾನುವಾರ ಹೇಳಿದ್ದಾರೆ.</p><p>ಶಾಂಘೈ ಸಹಕಾರ ಸಂಘಟನೆಯ (ಎಸ್ಸಿಒ) ವಾರ್ಷಿಕ ಶೃಂಗಸಭೆಯು ಟಿಯಾನ್ ಜಿನ್ ನಗರದಲ್ಲಿ ಇಂದಿನಿಂದ (ಭಾನುವಾರದಿಂದ) ಆರಂಭವಾಗಿದೆ. ಈ ವೇಳೆ ಷಿ ಹಾಗೂ ಮೋದಿ ಮಾತುಕತೆ ನಡೆಸಿದ್ದಾರೆ.</p><p>ಏಷ್ಯಾದ ನೆರೆಹೊರೆಯ ರಾಷ್ಟ್ರಗಳಾಗಿರುವ ಭಾರತ ಮತ್ತು ಚೀನಾ, ಗಡಿ ಪ್ರದೇಶಗಳಲ್ಲಿ ಶಾಂತಿ ನೆಲೆಸುವುದನ್ನು ಖಾತ್ರಿಪಡಿಸಲು ಒಟ್ಟಾಗಿ ಕೆಲಸ ಮಾಡಬೇಕಿದೆ. ಗಡಿ ಸಮಸ್ಯೆಯು ಎರಡೂ ದೇಶಗಳ ನಡುವಣ ಒಟ್ಟಾರೆ ಸಂಬಂಧವನ್ನು ವ್ಯಾಖ್ಯಾನಿಸಲು ಬಿಡಬಾರದು ಎಂದು ಈ ವೇಳೆ ಮೋದಿಗೆ ಷಿ ಹೇಳಿದ್ದಾರೆ.</p><p>ಭಾರತ ಮತ್ತು ಚೀನಾ ಪಾಲುದಾರ ರಾಷ್ಟ್ರಗಳೇ ಹೊರತು ಪ್ರತಿಸ್ಪರ್ಧಿಗಳಲ್ಲ. ಎರಡೂ ದೇಶಗಳು ಪರಸ್ಪರರಿಗೆ ಬೆದರಿಕೆಯಲ್ಲ. ಅಭಿವೃದ್ಧಿಗೆ ಪೂರಕ ಅವಕಾಶಗಳಾಗಿವೆ ಎಂದು ಪ್ರತಿಪಾದಿಸಿದ್ದಾರೆ.</p><p>ಸಮಗ್ರತೆಗೆ ಬದ್ಧವಾಗಿರುವವರೆಗೆ ಭಾರತ – ಚೀನಾ ದ್ವಿಪಕ್ಷೀಯ ಸಂಬಂಧ ದೀರ್ಘಕಾಲಿನ ಹಾಗೂ ಸ್ಥಿರ ಬೆಳವಣಿಗೆ ಸಾಧಿಸಲಿದೆ ಎಂದಿದ್ದಾರೆ.</p>.ಶಾಂಘೈ ಶೃಂಗಸಭೆ: ಗಡಿ ಬಿಕ್ಕಟ್ಟಿನ ನ್ಯಾಯಯುತ ಇತ್ಯರ್ಥಕ್ಕೆ ಮೋದಿ, ಷಿ ಸಹಮತ.ಶಾಂಘೈ ಶೃಂಗಸಭೆ: ದ್ವಿಪಕ್ಷೀಯ ಸಭೆ ನಡೆಸಿದ ಮೋದಿ–ಜಿನ್ಪಿಂಗ್.<p>'ಭಾರತ, ಚೀನಾ ಉತ್ತಮ ನೆರೆಹೊರೆ ರಾಷ್ಟ್ರಗಳಾಗುವುದು, ಸೌಹಾರ್ದಯುತ ಸಂಬಂಧ ಹೊಂದಿರುವ ಸ್ನೇಹಿತರಾಗುವುದು, ಪರಸ್ಪರರ ಯಶಸ್ಸಿಗೆ ಪೂರಕ ಪಾಲುದಾರರಾಗುವುದು ಮತ್ತು ಡ್ರ್ಯಾಗನ್, ಆನೆ ಒಂದಾಗುವುದು ಸರಿಯಾದ ಆಯ್ಕೆಯಾಗಲಿದೆ' ಎಂದು ಒತ್ತಿ ಹೇಳಿದ್ದಾರೆ.</p><p>ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಆಡಳಿತವು ಆರಂಭಿಸಿರುವ ಸುಂಕ ಸಮರವು ಜಾಗತಿಕ ಆರ್ಥಿಕತೆ ಮೇಲೆ ಪರಿಣಾಮ ಉಂಟುಮಾಡಿದೆ. ಇದೇ ಹೊತ್ತಿನಲ್ಲಿ ಷಿ ಮತ್ತು ಮೋದಿ ಮಾತುಕತೆ ನಡೆಸಿರುವುದು ಮಹತ್ವ ಪಡೆದುಕೊಂಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>