<p><strong>ಕಠ್ಮಂಡು</strong>: ದೇಶದಲ್ಲಿ ಆರ್ಥಿಕ ಸ್ಥಿರತೆ ಮರುಸ್ಥಾಪನೆ ಹಾಗೂ ಉದ್ಯೋಗ ಸೃಷ್ಟಿಯ ಭರವಸೆಯೊಂದಿಗೆ ಕಳೆದ ವರ್ಷ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ಕೆ.ಪಿ.ಶರ್ಮಾ ಓಲಿ ಅವರು, ಸಾಮಾಜಿಕ ಜಾಲತಾಣಗಳ ಮೇಲೆ ಹೇರಿದ ನಿಷೇಧ ಖಂಡಿಸಿ ಭುಗಿಲೆದ್ದ ಆಕ್ರೋಶಕ್ಕೆ ಗುರಿಯಾಗಿ, ಮಂಗಳವಾರ ಹಠಾತ್ ರಾಜೀನಾಮೆ ನೀಡಿದ್ದಾರೆ.</p><p>ದೇಶದಲ್ಲಿನ ಬಡತನ ಹಾಗೂ ಭ್ರಷ್ಟಾಚಾರದ ವಿರುದ್ಧ ಹೋರಾಡುವುದಾಗಿ ಓಲಿ ಶಪಥ ಮಾಡಿದ್ದರು. ಆದರೆ, ಅವರು ಸರ್ವಾಧಿಕಾರಿಯಂತೆ ವರ್ತಿಸುತ್ತಾರೆ ಮತ್ತು ಭ್ರಷ್ಟಾಚಾರ ನಿಗ್ರಹಿಸುವಲ್ಲಿ ವಿಫಲರಾಗಿದ್ದಾರೆ ಎಂಬ ಆರೋಪಗಳಿಗೆ ಓಲಿ ಗುರಿಯಾಗಿ, ಈಗ ಅಧಿಕಾರ ಕಳೆದುಕೊಂಡಿದ್ದಾರೆ.</p><p>ಕೆ.ಪಿ.ಶರ್ಮಾ ಓಲಿ ಈ ಹಿಂದೆ ಮೂರುಬಾರಿ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದಾರೆ. ಓಲಿ ಅವರು ಚೀನಾಕ್ಕೆ ಹತ್ತಿರವಾಗಿದ್ದಾರೆ ಎಂದು ಕೆಲ ರಾಜಕೀಯ ವಿಶ್ಲೇಷಕರು ಹೇಳುತ್ತಾರೆ. ಆದರೆ, ಇದನ್ನು ಅವರು ಅಲ್ಲಗಳೆಯುತ್ತಿದ್ದರು.</p><p>‘ನನ್ನ ಆಡಳಿತ ಯಾವಾಗಲೂ ತಟಸ್ಥ ಮತ್ತು ಅಲಿಪ್ತ ನೀತಿ ಅನುಸರಿಸುತ್ತದೆ’ ಎಂದು ಅವರು 2022ರಲ್ಲಿ ರಾಯಿಟರ್ಸ್ಗೆ ನೀಡಿದ್ದ ಸಂದರ್ಶನದಲ್ಲಿ ಹೇಳಿದ್ದರು.</p><p>ಕಳೆದ ವರ್ಷ ಚುನಾವಣೆ ನಂತರ, ನೇಪಾಳಿ ಕಾಂಗ್ರೆಸ್ ಬೆಂಬಲದೊಂದಿಗೆ, ಕಮ್ಯುನಿಸ್ಟ್ ಪಾರ್ಟಿ ಆಫ್ ನೇಪಾಳ–ಯುನಿಫೈಡ್ ಮಾರ್ಕ್ಸಿಸ್ಟ್ ಲೆನಿನಿಸ್ಟ್ (ಸಿಪಿಎನ್–ಯುಎಂಎಲ್) ನೇತೃತ್ವದ ಸರ್ಕಾರ ರಚಿಸುವಲ್ಲಿ ಪ್ರಮುಖಪಾತ್ರ ವಹಿಸಿದ್ದರು. </p><p>ನೇಪಾಳ ರಾಜಕೀಯದಲ್ಲಿ ‘ಕೆಪಿ’ ಎಂದೇ ಖ್ಯಾತರಾಗಿರುವ 73 ವರ್ಷದ ಖಡ್ಗ ಪ್ರಸಾದ ಶರ್ಮಾ ಓಲಿ, ನೇರ ಮಾತಿಗೂ ಹೆಸರಾದವರು. ಸಿಪಿಎನ್–ಯುಎಂಎಲ್ ಪಕ್ಷದ ಸರ್ವೋಚ್ಚ ನಾಯಕರಾಗಿ ಹೊರಹೊಮ್ಮಿದ್ದಾರೆ. </p><p>‘ಸಿಪಿಎನ್–ಯುಎಂಎಲ್ ಎಂಬುದು ಓಲಿ ಅವರ ಪಕ್ಷ ಎಂದೇ ಪರಿಗಣಿಸುವಷ್ಟರ ಮಟ್ಟಿಗೆ ಅವರು ಪಕ್ಷವನ್ನು ಕಟ್ಟಿ, ಬೆಳೆಸಿದ್ದಾರೆ’ ಎಂದು ರಾಜಕೀಯ ಪತ್ರಕರ್ತ ಬಿನು ಸುವೇದಿ ಹೇಳುತ್ತಾರೆ.</p><p>‘ತಮ್ಮ ಮಾತೇ ಅಂತಿಮ ಎಂಬುದು ಓಲಿ ಅವರ ನಿಲುವಾಗಿತ್ತು. ಇತರರು ನೀಡುವ ಸಲಹೆಗಳನ್ನು, ಟೀಕೆಗಳನ್ನು ಓಲಿ ಸ್ವೀಕರಿಸುತ್ತಿದ್ದು ಅಪರೂಪ. ಸ್ವತಃ ಪಕ್ಷದ ಮುಖಂಡರು ನೀಡುತ್ತಿದ್ದ ಸಲಹೆಗಳನ್ನು ಸಹ ಸ್ವೀಕರಿಸುತ್ತಿರಲಿಲ್ಲ’ ಎಂದು ಸುವೇದಿ ಹೇಳಿದರು.</p><p>ಅವರ ರಾಜಕೀಯ ಜೀವನಕ್ಕೆ ಹಲವು ದಶಕಗಳ ಹೋರಾಟದ ಹಿನ್ನೆಲೆ ಇದೆ. ದೇಶದಲ್ಲಿನ ಅರಸೊತ್ತಿಗೆಯನ್ನು ಕಿತ್ತೊಗೆಯಲು 1973ರಲ್ಲಿ ಆಂದೋಲನ ಮುನ್ನಡೆಸುತ್ತಿದ್ದ ವೇಳೆ ಅವರನ್ನು ಬಂಧಿಸಲಾಯಿತು. ಆಗ ಅವರಿಗೆ 21 ವರ್ಷ.</p><p>‘ನನಗೆ ಕಠಿಣವಾದ ಜೈಲುಶಿಕ್ಷೆ ವಿಧಿಸಲಾಗಿತ್ತು. ಈ ಪೈಕಿ ನಾಲ್ಕು ವರ್ಷ ಒಬ್ಬನನ್ನೇ ಸೆರೆಮನೆಯ ಕೊಠಡಿಯೊಂದರಲ್ಲಿ ಕೂಡಿಹಾಕಲಾಗಿತ್ತು’ ಎಂದು ಅವರ ಆಯ್ದ ಭಾಷಣಗಳ ಕೃತಿಯಲ್ಲಿ ಉಲ್ಲೇಖವಿದೆ.</p><p>‘ಸರ್ವಾಧಿಕಾರ ಆಡಳಿತ ವಿರುದ್ಧ ಹೋರಾಟ ನಡೆಸಿದ್ದೇ ನಾನು ಮಾಡಿದ ಅಪರಾಧ’ ಎಂದೂ ಅವರು ಬರೆದುಕೊಂಡಿದ್ದಾರೆ.</p><p>1987ರಲ್ಲಿ ಸೆರೆವಾಸದಿಂದ ಬಿಡುಗಡೆಗೊಂಡ ನಂತರ ಅವರು ಸಿಪಿಎಂ–ಯುಎಂಎಲ್ ಸೇರಿದರು. ಪಕ್ಷದ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ ಅವರು, ಮೊದಲ ಬಾರಿಗೆ 2015ರಲ್ಲಿ ಪ್ರಧಾನಿಯಾದರು. 2018ರಲ್ಲಿ ಮತ್ತೆ ಪ್ರಧಾನಿಯಾಗಿ ಚುನಾಯಿತರಾದರು. ರಾಜಕೀಯ ಅಸ್ಥಿರತೆ ಪರಿಣಾಮ 2021ರಲ್ಲಿ ಅವರನ್ನು ಪ್ರಧಾನಿಯಾಗಿ ಪುನಃ ನೇಮಕ ಮಾಡಲಾಗಿತ್ತು.</p><p><strong>ಕಷ್ಟದ ಹಾದಿ...</strong></p><p> 1952ರಲ್ಲಿ ಜನಿಸಿರುವ ಓಲಿ ಅವರು ಬಾಲ್ಯದಲ್ಲಿ ಸಾಕಷ್ಟು ಸಂಕಷ್ಟಗಳನ್ನು ಎದುರಿಸಿದವರು. ಅವರು ನಾಲ್ಕು ವರ್ಷದವರಿದ್ಧಾಗ ಅವರ ತಾಯಿ ಸಿಡುಬು ರೋಗದಿಂದ ಮೃತಪಟ್ಟಿದ್ದರು. ನಂತರದ ದಿನಗಳಲ್ಲಿ ಕಾಣಿಸಿಕೊಂಡ ಪ್ರವಾಹದಿಂದಾಗಿ ಕುಟುಂಬವೇ ಚದುರಿ ಹೋಗಿತ್ತು. ಓಲಿ ಅವರು ತಮ್ಮ ಅಜ್ಜ–ಅಜ್ಜಿ ಅವರ ಆಶ್ರಯದಲ್ಲಿ ಬೆಳೆದರು. </p>.<div><blockquote>ಓಲಿ ನೇತೃತ್ವದ ಸರ್ಕಾರ ಹಾಗೂ ದೇಶದ ರಾಜಕೀಯ ನೇತೃತ್ವದ ಬಗ್ಗೆ ಜನರಲ್ಲಿ ವ್ಯಾಪಕ ಅಸಮಾಧಾನ ಇತ್ತು. ಇದು ನಿನ್ನೆ ಸ್ಫೋಟಗೊಂಡಿದೆ.</blockquote><span class="attribution">ಬಿಪಿನ್ ಅಧಿಕಾರಿ, ಸಂವಿಧಾನ ತಜ್ಞ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಠ್ಮಂಡು</strong>: ದೇಶದಲ್ಲಿ ಆರ್ಥಿಕ ಸ್ಥಿರತೆ ಮರುಸ್ಥಾಪನೆ ಹಾಗೂ ಉದ್ಯೋಗ ಸೃಷ್ಟಿಯ ಭರವಸೆಯೊಂದಿಗೆ ಕಳೆದ ವರ್ಷ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ಕೆ.ಪಿ.ಶರ್ಮಾ ಓಲಿ ಅವರು, ಸಾಮಾಜಿಕ ಜಾಲತಾಣಗಳ ಮೇಲೆ ಹೇರಿದ ನಿಷೇಧ ಖಂಡಿಸಿ ಭುಗಿಲೆದ್ದ ಆಕ್ರೋಶಕ್ಕೆ ಗುರಿಯಾಗಿ, ಮಂಗಳವಾರ ಹಠಾತ್ ರಾಜೀನಾಮೆ ನೀಡಿದ್ದಾರೆ.</p><p>ದೇಶದಲ್ಲಿನ ಬಡತನ ಹಾಗೂ ಭ್ರಷ್ಟಾಚಾರದ ವಿರುದ್ಧ ಹೋರಾಡುವುದಾಗಿ ಓಲಿ ಶಪಥ ಮಾಡಿದ್ದರು. ಆದರೆ, ಅವರು ಸರ್ವಾಧಿಕಾರಿಯಂತೆ ವರ್ತಿಸುತ್ತಾರೆ ಮತ್ತು ಭ್ರಷ್ಟಾಚಾರ ನಿಗ್ರಹಿಸುವಲ್ಲಿ ವಿಫಲರಾಗಿದ್ದಾರೆ ಎಂಬ ಆರೋಪಗಳಿಗೆ ಓಲಿ ಗುರಿಯಾಗಿ, ಈಗ ಅಧಿಕಾರ ಕಳೆದುಕೊಂಡಿದ್ದಾರೆ.</p><p>ಕೆ.ಪಿ.ಶರ್ಮಾ ಓಲಿ ಈ ಹಿಂದೆ ಮೂರುಬಾರಿ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದಾರೆ. ಓಲಿ ಅವರು ಚೀನಾಕ್ಕೆ ಹತ್ತಿರವಾಗಿದ್ದಾರೆ ಎಂದು ಕೆಲ ರಾಜಕೀಯ ವಿಶ್ಲೇಷಕರು ಹೇಳುತ್ತಾರೆ. ಆದರೆ, ಇದನ್ನು ಅವರು ಅಲ್ಲಗಳೆಯುತ್ತಿದ್ದರು.</p><p>‘ನನ್ನ ಆಡಳಿತ ಯಾವಾಗಲೂ ತಟಸ್ಥ ಮತ್ತು ಅಲಿಪ್ತ ನೀತಿ ಅನುಸರಿಸುತ್ತದೆ’ ಎಂದು ಅವರು 2022ರಲ್ಲಿ ರಾಯಿಟರ್ಸ್ಗೆ ನೀಡಿದ್ದ ಸಂದರ್ಶನದಲ್ಲಿ ಹೇಳಿದ್ದರು.</p><p>ಕಳೆದ ವರ್ಷ ಚುನಾವಣೆ ನಂತರ, ನೇಪಾಳಿ ಕಾಂಗ್ರೆಸ್ ಬೆಂಬಲದೊಂದಿಗೆ, ಕಮ್ಯುನಿಸ್ಟ್ ಪಾರ್ಟಿ ಆಫ್ ನೇಪಾಳ–ಯುನಿಫೈಡ್ ಮಾರ್ಕ್ಸಿಸ್ಟ್ ಲೆನಿನಿಸ್ಟ್ (ಸಿಪಿಎನ್–ಯುಎಂಎಲ್) ನೇತೃತ್ವದ ಸರ್ಕಾರ ರಚಿಸುವಲ್ಲಿ ಪ್ರಮುಖಪಾತ್ರ ವಹಿಸಿದ್ದರು. </p><p>ನೇಪಾಳ ರಾಜಕೀಯದಲ್ಲಿ ‘ಕೆಪಿ’ ಎಂದೇ ಖ್ಯಾತರಾಗಿರುವ 73 ವರ್ಷದ ಖಡ್ಗ ಪ್ರಸಾದ ಶರ್ಮಾ ಓಲಿ, ನೇರ ಮಾತಿಗೂ ಹೆಸರಾದವರು. ಸಿಪಿಎನ್–ಯುಎಂಎಲ್ ಪಕ್ಷದ ಸರ್ವೋಚ್ಚ ನಾಯಕರಾಗಿ ಹೊರಹೊಮ್ಮಿದ್ದಾರೆ. </p><p>‘ಸಿಪಿಎನ್–ಯುಎಂಎಲ್ ಎಂಬುದು ಓಲಿ ಅವರ ಪಕ್ಷ ಎಂದೇ ಪರಿಗಣಿಸುವಷ್ಟರ ಮಟ್ಟಿಗೆ ಅವರು ಪಕ್ಷವನ್ನು ಕಟ್ಟಿ, ಬೆಳೆಸಿದ್ದಾರೆ’ ಎಂದು ರಾಜಕೀಯ ಪತ್ರಕರ್ತ ಬಿನು ಸುವೇದಿ ಹೇಳುತ್ತಾರೆ.</p><p>‘ತಮ್ಮ ಮಾತೇ ಅಂತಿಮ ಎಂಬುದು ಓಲಿ ಅವರ ನಿಲುವಾಗಿತ್ತು. ಇತರರು ನೀಡುವ ಸಲಹೆಗಳನ್ನು, ಟೀಕೆಗಳನ್ನು ಓಲಿ ಸ್ವೀಕರಿಸುತ್ತಿದ್ದು ಅಪರೂಪ. ಸ್ವತಃ ಪಕ್ಷದ ಮುಖಂಡರು ನೀಡುತ್ತಿದ್ದ ಸಲಹೆಗಳನ್ನು ಸಹ ಸ್ವೀಕರಿಸುತ್ತಿರಲಿಲ್ಲ’ ಎಂದು ಸುವೇದಿ ಹೇಳಿದರು.</p><p>ಅವರ ರಾಜಕೀಯ ಜೀವನಕ್ಕೆ ಹಲವು ದಶಕಗಳ ಹೋರಾಟದ ಹಿನ್ನೆಲೆ ಇದೆ. ದೇಶದಲ್ಲಿನ ಅರಸೊತ್ತಿಗೆಯನ್ನು ಕಿತ್ತೊಗೆಯಲು 1973ರಲ್ಲಿ ಆಂದೋಲನ ಮುನ್ನಡೆಸುತ್ತಿದ್ದ ವೇಳೆ ಅವರನ್ನು ಬಂಧಿಸಲಾಯಿತು. ಆಗ ಅವರಿಗೆ 21 ವರ್ಷ.</p><p>‘ನನಗೆ ಕಠಿಣವಾದ ಜೈಲುಶಿಕ್ಷೆ ವಿಧಿಸಲಾಗಿತ್ತು. ಈ ಪೈಕಿ ನಾಲ್ಕು ವರ್ಷ ಒಬ್ಬನನ್ನೇ ಸೆರೆಮನೆಯ ಕೊಠಡಿಯೊಂದರಲ್ಲಿ ಕೂಡಿಹಾಕಲಾಗಿತ್ತು’ ಎಂದು ಅವರ ಆಯ್ದ ಭಾಷಣಗಳ ಕೃತಿಯಲ್ಲಿ ಉಲ್ಲೇಖವಿದೆ.</p><p>‘ಸರ್ವಾಧಿಕಾರ ಆಡಳಿತ ವಿರುದ್ಧ ಹೋರಾಟ ನಡೆಸಿದ್ದೇ ನಾನು ಮಾಡಿದ ಅಪರಾಧ’ ಎಂದೂ ಅವರು ಬರೆದುಕೊಂಡಿದ್ದಾರೆ.</p><p>1987ರಲ್ಲಿ ಸೆರೆವಾಸದಿಂದ ಬಿಡುಗಡೆಗೊಂಡ ನಂತರ ಅವರು ಸಿಪಿಎಂ–ಯುಎಂಎಲ್ ಸೇರಿದರು. ಪಕ್ಷದ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ ಅವರು, ಮೊದಲ ಬಾರಿಗೆ 2015ರಲ್ಲಿ ಪ್ರಧಾನಿಯಾದರು. 2018ರಲ್ಲಿ ಮತ್ತೆ ಪ್ರಧಾನಿಯಾಗಿ ಚುನಾಯಿತರಾದರು. ರಾಜಕೀಯ ಅಸ್ಥಿರತೆ ಪರಿಣಾಮ 2021ರಲ್ಲಿ ಅವರನ್ನು ಪ್ರಧಾನಿಯಾಗಿ ಪುನಃ ನೇಮಕ ಮಾಡಲಾಗಿತ್ತು.</p><p><strong>ಕಷ್ಟದ ಹಾದಿ...</strong></p><p> 1952ರಲ್ಲಿ ಜನಿಸಿರುವ ಓಲಿ ಅವರು ಬಾಲ್ಯದಲ್ಲಿ ಸಾಕಷ್ಟು ಸಂಕಷ್ಟಗಳನ್ನು ಎದುರಿಸಿದವರು. ಅವರು ನಾಲ್ಕು ವರ್ಷದವರಿದ್ಧಾಗ ಅವರ ತಾಯಿ ಸಿಡುಬು ರೋಗದಿಂದ ಮೃತಪಟ್ಟಿದ್ದರು. ನಂತರದ ದಿನಗಳಲ್ಲಿ ಕಾಣಿಸಿಕೊಂಡ ಪ್ರವಾಹದಿಂದಾಗಿ ಕುಟುಂಬವೇ ಚದುರಿ ಹೋಗಿತ್ತು. ಓಲಿ ಅವರು ತಮ್ಮ ಅಜ್ಜ–ಅಜ್ಜಿ ಅವರ ಆಶ್ರಯದಲ್ಲಿ ಬೆಳೆದರು. </p>.<div><blockquote>ಓಲಿ ನೇತೃತ್ವದ ಸರ್ಕಾರ ಹಾಗೂ ದೇಶದ ರಾಜಕೀಯ ನೇತೃತ್ವದ ಬಗ್ಗೆ ಜನರಲ್ಲಿ ವ್ಯಾಪಕ ಅಸಮಾಧಾನ ಇತ್ತು. ಇದು ನಿನ್ನೆ ಸ್ಫೋಟಗೊಂಡಿದೆ.</blockquote><span class="attribution">ಬಿಪಿನ್ ಅಧಿಕಾರಿ, ಸಂವಿಧಾನ ತಜ್ಞ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>