<p>‘ವಿಧಾನಮಂಡಲ ಅಧಿವೇಶನಕ್ಕೆ ಎತ್ತಿನಗಾಡಿಯಲ್ಲಿ ಬಂದ ಕಾಂಗ್ರೆಸ್ ಶಾಸಕರನ್ನು ಆಡಳಿತ ಪಕ್ಷದವರು ಬಂದು ಸ್ವಾಗತಿಸುವ ಸೌಜನ್ಯ ತೋರಿಸಲಿಲ್ಲವಲ್ಲಾರೀ...’ ಅಂದಳು ಸುಮಿ.</p>.<p>‘ಆರತಿ ಎತ್ತಿ ಬರಮಾಡಿಕೊಳ್ಳಲು ಅದೇನು ಮದುವೆ ದಿಬ್ಬಣವೇ? ಹೇಳಿಕೇಳಿ ಅವರು ವಿರೋಧ ಪಕ್ಷದವರು. ಸರ್ಕಾರದ ಚಳಿ ಬಿಡಿಸಲು ಚಳವಳಿ ಮಾಡುವವರನ್ನು ಬರಮಾಡಿಕೊಂಡು ಬಾಗಿನ ಕೊಡಬೇಕಾಗಿತ್ತಾ?’ ಅಂದ ಶಂಕ್ರಿ.</p>.<p>‘ದಿನಬಳಕೆ ಪದಾರ್ಥಗಳ ಬೆಲೆ ಹೆಚ್ಚಾಗಿ ನಮ್ಮಂಥವರು ಜೀವನ ಮಾಡೋದು ಕಷ್ಟ ಆಗಿದೆ. ಸೇವ್ ಪೆಟ್ರೋಲ್, ಸೇವ್ ಪೀಪಲ್ ಎಂದು ಅವರು ನಮ್ಮ ಪರವಾಗಿ ಎತ್ತಿನಗಾಡಿ ಹೋರಾಟ ಮಾಡಿದ್ರು ಕಣ್ರೀ’.</p>.<p>‘ಹೌದು, ಪದಾರ್ಥಗಳ ಬೆಲೆ ಇಳಿಸಿ, ಪರದಾಡುತ್ತಿರುವ ಜನರನ್ನು ಉಳಿಸಿ ಅಂತ ವಿಪಕ್ಷದವರು ಸರ್ಕಾರದ ಬೆವರು ಇಳಿಸಲು ಕಲಾಪ ಕದನ ಶುರು ಮಾಡಿದ್ದಾರೆ. ಏನೇನು ಇಳಿಯುತ್ತದೋ ಕಾದು ನೋಡೋಣ...’</p>.<p>‘ಮೊದಲು ಗ್ಯಾಸ್ ಸಿಲಿಂಡರ್ ಬೆಲೆ ಇಳಿಸಿ ಅಡುಗೆಮನೆ ಕಷ್ಟ ನಿವಾರಣೆ ಮಾಡಲಿ’.</p>.<p>‘ಅದಕ್ಕೋಸ್ಕರ ಖಾಲಿ ಸಿಲಿಂಡರ್ ಪ್ರದರ್ಶಿಸಿ ಹೋರಾಟ ಮಾಡಿದರು, ಕಾಂಗ್ರೆಸ್ ನಾಯಕರು ಅಡುಗೆ ಮನೆಯಿಂದಲೇ ಟ್ವೀಟ್ ಟೀಕೆ ಮಾಡಿದ್ರು. ಈಗ ಭ್ರಷ್ಟಾಚಾರ ಇಷ್ಟಾಚಾರಗಳ ವಿರುದ್ಧ ಕಲಾಪದಲ್ಲಿ ಸರ್ಕಾರಕ್ಕೆ ಕಿಕ್ಬ್ಯಾಕ್ ನೀಡುತ್ತಾರಂತೆ’.</p>.<p>‘ಕಿಕ್ಬ್ಯಾಕ್ ಅಂದ್ರೆ ಲಂಚವೋ ತಿರುಗೇಟೊ?’</p>.<p>‘ಅವರವರ ಭಾವಕ್ಕೆ, ಅವರವರ ಅನುಭವಕ್ಕೆ ತಕ್ಕಂತೆ ಕಿಕ್ಬ್ಯಾಕ್ಗೆ ಅಪಾರ್ಥ, ಅಪಾರ ಅರ್ಥಗಳಿವೆ. ಇದೆಲ್ಲವನ್ನೂ ಕಂಟ್ರೋಲ್ ಮಾಡಬೇಕಾಗಿದ್ದ ಕಾನೂನು, ಜಾರಿಯಾಗಬೇಕಾದ ಕಡೆಗಳಲ್ಲಿ ಜಾರಿಹೋಗ್ತಿದೆಯಂತೆ. ಸರ್ಕಾರವನ್ನು ಸರಿದಾರಿಗೆ ತಂದು ಸರಿಮಾಡೋವರೆಗೂ ಹೋರಾಟ ನಿಲ್ಲಿಸುವುದಿಲ್ಲ ಅಂತ ವಿಪಕ್ಷ ನಾಯಕರು ಹೇಳಿಕೊಂಡಿದ್ದಾರೆ’.</p>.<p>‘ಏನೋ, ಒಳ್ಳೆಯದಾದರೆ ಸಾಕು. ಆಡಳಿತ- ವಿಪಕ್ಷದ ಕಲಾಪ ಕದನವು ಅಕ್ಕಪಕ್ಕದ ಮನೆಯವರಿಗೆ ಮನರಂಜನೆ ನೀಡುವ ಗಂಡಹೆಂಡ್ತಿ ಜಗಳದ ಥರ ಆಗಬಾರದಷ್ಟೇ...’ ಎಂದು ಸುಮಿ ಟಿ.ವಿ. ಆಫ್ ಮಾಡಿದಳು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ವಿಧಾನಮಂಡಲ ಅಧಿವೇಶನಕ್ಕೆ ಎತ್ತಿನಗಾಡಿಯಲ್ಲಿ ಬಂದ ಕಾಂಗ್ರೆಸ್ ಶಾಸಕರನ್ನು ಆಡಳಿತ ಪಕ್ಷದವರು ಬಂದು ಸ್ವಾಗತಿಸುವ ಸೌಜನ್ಯ ತೋರಿಸಲಿಲ್ಲವಲ್ಲಾರೀ...’ ಅಂದಳು ಸುಮಿ.</p>.<p>‘ಆರತಿ ಎತ್ತಿ ಬರಮಾಡಿಕೊಳ್ಳಲು ಅದೇನು ಮದುವೆ ದಿಬ್ಬಣವೇ? ಹೇಳಿಕೇಳಿ ಅವರು ವಿರೋಧ ಪಕ್ಷದವರು. ಸರ್ಕಾರದ ಚಳಿ ಬಿಡಿಸಲು ಚಳವಳಿ ಮಾಡುವವರನ್ನು ಬರಮಾಡಿಕೊಂಡು ಬಾಗಿನ ಕೊಡಬೇಕಾಗಿತ್ತಾ?’ ಅಂದ ಶಂಕ್ರಿ.</p>.<p>‘ದಿನಬಳಕೆ ಪದಾರ್ಥಗಳ ಬೆಲೆ ಹೆಚ್ಚಾಗಿ ನಮ್ಮಂಥವರು ಜೀವನ ಮಾಡೋದು ಕಷ್ಟ ಆಗಿದೆ. ಸೇವ್ ಪೆಟ್ರೋಲ್, ಸೇವ್ ಪೀಪಲ್ ಎಂದು ಅವರು ನಮ್ಮ ಪರವಾಗಿ ಎತ್ತಿನಗಾಡಿ ಹೋರಾಟ ಮಾಡಿದ್ರು ಕಣ್ರೀ’.</p>.<p>‘ಹೌದು, ಪದಾರ್ಥಗಳ ಬೆಲೆ ಇಳಿಸಿ, ಪರದಾಡುತ್ತಿರುವ ಜನರನ್ನು ಉಳಿಸಿ ಅಂತ ವಿಪಕ್ಷದವರು ಸರ್ಕಾರದ ಬೆವರು ಇಳಿಸಲು ಕಲಾಪ ಕದನ ಶುರು ಮಾಡಿದ್ದಾರೆ. ಏನೇನು ಇಳಿಯುತ್ತದೋ ಕಾದು ನೋಡೋಣ...’</p>.<p>‘ಮೊದಲು ಗ್ಯಾಸ್ ಸಿಲಿಂಡರ್ ಬೆಲೆ ಇಳಿಸಿ ಅಡುಗೆಮನೆ ಕಷ್ಟ ನಿವಾರಣೆ ಮಾಡಲಿ’.</p>.<p>‘ಅದಕ್ಕೋಸ್ಕರ ಖಾಲಿ ಸಿಲಿಂಡರ್ ಪ್ರದರ್ಶಿಸಿ ಹೋರಾಟ ಮಾಡಿದರು, ಕಾಂಗ್ರೆಸ್ ನಾಯಕರು ಅಡುಗೆ ಮನೆಯಿಂದಲೇ ಟ್ವೀಟ್ ಟೀಕೆ ಮಾಡಿದ್ರು. ಈಗ ಭ್ರಷ್ಟಾಚಾರ ಇಷ್ಟಾಚಾರಗಳ ವಿರುದ್ಧ ಕಲಾಪದಲ್ಲಿ ಸರ್ಕಾರಕ್ಕೆ ಕಿಕ್ಬ್ಯಾಕ್ ನೀಡುತ್ತಾರಂತೆ’.</p>.<p>‘ಕಿಕ್ಬ್ಯಾಕ್ ಅಂದ್ರೆ ಲಂಚವೋ ತಿರುಗೇಟೊ?’</p>.<p>‘ಅವರವರ ಭಾವಕ್ಕೆ, ಅವರವರ ಅನುಭವಕ್ಕೆ ತಕ್ಕಂತೆ ಕಿಕ್ಬ್ಯಾಕ್ಗೆ ಅಪಾರ್ಥ, ಅಪಾರ ಅರ್ಥಗಳಿವೆ. ಇದೆಲ್ಲವನ್ನೂ ಕಂಟ್ರೋಲ್ ಮಾಡಬೇಕಾಗಿದ್ದ ಕಾನೂನು, ಜಾರಿಯಾಗಬೇಕಾದ ಕಡೆಗಳಲ್ಲಿ ಜಾರಿಹೋಗ್ತಿದೆಯಂತೆ. ಸರ್ಕಾರವನ್ನು ಸರಿದಾರಿಗೆ ತಂದು ಸರಿಮಾಡೋವರೆಗೂ ಹೋರಾಟ ನಿಲ್ಲಿಸುವುದಿಲ್ಲ ಅಂತ ವಿಪಕ್ಷ ನಾಯಕರು ಹೇಳಿಕೊಂಡಿದ್ದಾರೆ’.</p>.<p>‘ಏನೋ, ಒಳ್ಳೆಯದಾದರೆ ಸಾಕು. ಆಡಳಿತ- ವಿಪಕ್ಷದ ಕಲಾಪ ಕದನವು ಅಕ್ಕಪಕ್ಕದ ಮನೆಯವರಿಗೆ ಮನರಂಜನೆ ನೀಡುವ ಗಂಡಹೆಂಡ್ತಿ ಜಗಳದ ಥರ ಆಗಬಾರದಷ್ಟೇ...’ ಎಂದು ಸುಮಿ ಟಿ.ವಿ. ಆಫ್ ಮಾಡಿದಳು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>