<p><strong>ಭದ್ರಾವತಿ ವಿಶೇಷ ಉಕ್ಕು ಘಟಕ ಆರಂಭದಲ್ಲೇ ಲಾಭ ಗಳಿಸುವ ನಿರೀಕ್ಷೆ</strong></p>.<p><strong>ಬೆಂಗಳೂರು, ಏ. 5–</strong> ನಿರ್ಮಾಣ ಕೆಲಸ ಮುಗಿಯುತ್ತಾ ಬಂದಿರುವ 30 ಕೋಟಿ ರೂಪಾಯಿಗಳ ವೆಚ್ಚದ ಭದ್ರಾವತಿಯ ವಿಶೇಷ ಉಕ್ಕು ತಯಾರಿಕಾ ವಿಸ್ತರಣಾ ವಿಭಾಗವು ಉತ್ಪಾದನೆಯ ಪ್ರಥಮ ವರ್ಷದಲ್ಲೇ ಲಾಭ ಸಂಪಾದಿಸಿ ‘ವಿಶ್ವ ವಿಕ್ರಮ’ ಸ್ಥಾಪಿಸಲಿದೆ ಎಂಬ ಭರವಸೆಯನ್ನು ಕೈಗಾರಿಕಾ ಸಚಿವ ಶ್ರೀ ಎಂ.ರಾಜಶೇಖರಮೂರ್ತಿ ಇಲ್ಲಿ ವ್ಯಕ್ತಪಡಿಸಿದರು.</p>.<p>‘20 ಕೋಟಿ ರೂಪಾಯಿಗಳ ಯಂತ್ರೋಪಕರಣಗಳು ಸ್ಥಾಪನೆಯಾಗಿವೆ’ಎಂದು ಸರ್ಕಾರ ನಡೆಸುತ್ತಿರುವ ಈ ಕಾರ್ಖಾನೆಯ ಅಧ್ಯಕ್ಷರೂ ಆಗಿರುವ ಶ್ರೀ ರಾಜಶೇಖರಮೂರ್ತಿ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.</p>.<p><strong>ಇನ್ನು ಮುಂದೆ ತಿಂಗಳ ಮೊದಲ ಭಾನುವಾರ ಲಾಟರಿ ಟಿಕೆಟ್ ಡ್ರಾ</strong></p>.<p><strong>ಬೆಂಗಳೂರು, ಏ. 5–</strong> ಇನ್ನು ಮುಂದೆ ಪ್ರತೀ ತಿಂಗಳ ಮೊದಲ ಭಾನುವಾರ ರಾಜ್ಯದ ಲಾಟರಿ ಟಿಕೆಟ್ ಎತ್ತಲಾಗುವುದು. ಈ ಮಧ್ಯೆ ಎರಡು ವಾರಗಳಿಗೊಮ್ಮೆ<br />ಲಾಟರಿ ಎತ್ತುವ ಬಗ್ಗೆ ಸರ್ಕಾರ ಆಲೋಚಿಸುತ್ತಿದೆಯೆಂದು ಅರ್ಥಸಚಿವ ಶ್ರೀ ರಾಮಕೃಷ್ಣ ಹೆಗಡೆಯವರು ಈಚೆಗೆ ತಿಳಿಸಿದರು.</p>.<p>ಪ್ರಥಮ ಬಹುಮಾನಗಳ ಜೊತೆಗೆ ಐದು ಲಕ್ಷ ರೂಪಾಯಿಯ ಒಂದು ವಿಶೇಷ ಬಹುಮಾನ ಇರುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭದ್ರಾವತಿ ವಿಶೇಷ ಉಕ್ಕು ಘಟಕ ಆರಂಭದಲ್ಲೇ ಲಾಭ ಗಳಿಸುವ ನಿರೀಕ್ಷೆ</strong></p>.<p><strong>ಬೆಂಗಳೂರು, ಏ. 5–</strong> ನಿರ್ಮಾಣ ಕೆಲಸ ಮುಗಿಯುತ್ತಾ ಬಂದಿರುವ 30 ಕೋಟಿ ರೂಪಾಯಿಗಳ ವೆಚ್ಚದ ಭದ್ರಾವತಿಯ ವಿಶೇಷ ಉಕ್ಕು ತಯಾರಿಕಾ ವಿಸ್ತರಣಾ ವಿಭಾಗವು ಉತ್ಪಾದನೆಯ ಪ್ರಥಮ ವರ್ಷದಲ್ಲೇ ಲಾಭ ಸಂಪಾದಿಸಿ ‘ವಿಶ್ವ ವಿಕ್ರಮ’ ಸ್ಥಾಪಿಸಲಿದೆ ಎಂಬ ಭರವಸೆಯನ್ನು ಕೈಗಾರಿಕಾ ಸಚಿವ ಶ್ರೀ ಎಂ.ರಾಜಶೇಖರಮೂರ್ತಿ ಇಲ್ಲಿ ವ್ಯಕ್ತಪಡಿಸಿದರು.</p>.<p>‘20 ಕೋಟಿ ರೂಪಾಯಿಗಳ ಯಂತ್ರೋಪಕರಣಗಳು ಸ್ಥಾಪನೆಯಾಗಿವೆ’ಎಂದು ಸರ್ಕಾರ ನಡೆಸುತ್ತಿರುವ ಈ ಕಾರ್ಖಾನೆಯ ಅಧ್ಯಕ್ಷರೂ ಆಗಿರುವ ಶ್ರೀ ರಾಜಶೇಖರಮೂರ್ತಿ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.</p>.<p><strong>ಇನ್ನು ಮುಂದೆ ತಿಂಗಳ ಮೊದಲ ಭಾನುವಾರ ಲಾಟರಿ ಟಿಕೆಟ್ ಡ್ರಾ</strong></p>.<p><strong>ಬೆಂಗಳೂರು, ಏ. 5–</strong> ಇನ್ನು ಮುಂದೆ ಪ್ರತೀ ತಿಂಗಳ ಮೊದಲ ಭಾನುವಾರ ರಾಜ್ಯದ ಲಾಟರಿ ಟಿಕೆಟ್ ಎತ್ತಲಾಗುವುದು. ಈ ಮಧ್ಯೆ ಎರಡು ವಾರಗಳಿಗೊಮ್ಮೆ<br />ಲಾಟರಿ ಎತ್ತುವ ಬಗ್ಗೆ ಸರ್ಕಾರ ಆಲೋಚಿಸುತ್ತಿದೆಯೆಂದು ಅರ್ಥಸಚಿವ ಶ್ರೀ ರಾಮಕೃಷ್ಣ ಹೆಗಡೆಯವರು ಈಚೆಗೆ ತಿಳಿಸಿದರು.</p>.<p>ಪ್ರಥಮ ಬಹುಮಾನಗಳ ಜೊತೆಗೆ ಐದು ಲಕ್ಷ ರೂಪಾಯಿಯ ಒಂದು ವಿಶೇಷ ಬಹುಮಾನ ಇರುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>