<p>ನವದೆಹಲಿ, ಜುಲೈ 14 (ಪಿಟಿಐ)– ಇನ್ನೊಬ್ಬ ಹಿರಿಯ ಜನತಾ ದಳ (ಯು) ಮುಖಂಡ ರಾಮಕೃಷ್ಣ ಹೆಗಡೆ ಅವರೂ ಪಕ್ಷ ಬಿಟ್ಟು ಹೊರ ನಡೆಯುವ ಬಗ್ಗೆ ಇಂದು ಇಂಗಿತ ವ್ಯಕ್ತಪಡಿಸಿದ್ದಾರೆ.</p>.<p>ಪಕ್ಷದಲ್ಲಿನ ಬೆಳವಣಿಗೆಗಳನ್ನು ಕೇಂದ್ರ ಸಚಿವ ರಾಂ ವಿಲಾಸ್ ಪಾಸ್ವಾನ್ ಅವರು ಟೀಕಿಸಿದ ಒಂದು ದಿನದ ನಂತರ ಹೆಗಡೆ ಅವರು, ಪಕ್ಷ ತ್ಯಜಿಸುವ ಬಗ್ಗೆ ಇಂದು ಇಲ್ಲಿ ಸುದ್ದಿಗಾರರಿಗೆ ಸುಳಿವು ನೀಡಿದರು.</p>.<p>‘ನಿರೀಕ್ಷಿಸಿದಂತೆ ಪಕ್ಷ ಸಕ್ರಿಯವಾಗಿಲ್ಲ. ಪಕ್ಷದ ಕಾರ್ಯವೈಖರಿಯಲ್ಲಿ ಸುಧಾರಣೆ ಕಾಣದಿದ್ದರೆ ಪ್ರತಿಯೊಬ್ಬರೂ ತಮ್ಮದೇ ಆದ ಮಾರ್ಗದಲ್ಲಿ ಹೋಗುತ್ತಾರೆ’ ಎಂದು ಹೆಗಡೆ ಅರ್ಥಗರ್ಭಿತವಾಗಿ ನುಡಿದರು.</p>.<p><strong>ಗೇರುಸೊಪ್ಪ ಮೊದಲ ಘಟಕ ಕಾರ್ಯಾರಂಭ</strong></p>.<p>ಹೊನ್ನಾವರ, ಜುಲೈ 14– ಪರಿಸರ ಸಮಸ್ಯೆಯಿಂದ ವಿಶ್ವಬ್ಯಾಂಕ್ ನೆರವು ಕೈತಪ್ಪಿಹೋಗಿದ್ದ ಗೇರುಸೊಪ್ಪ ಜಲವಿದ್ಯುತ್ ಯೋಜನೆಯ 60 ಮೆಗಾವಾಟ್ ಸಾಮರ್ಥ್ಯದ ಮೊದಲ ಘಟಕ ಇಂದು ಕಾರ್ಯಾರಂಭಿಸಿತು.</p>.<p>ಶರಾವತಿ ಕಣಿವೆಯ ಕೊನೆಯ ಹಂತದ ಈ ಗೇರುಸೊಪ್ಪ ಯೋಜನೆಯನ್ನು 531 ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ನಿರ್ಮಿಸಲಾಗಿದ್ದು, 240 ಮೆಗಾವಾಟ್ ಉತ್ಪಾದನಾ ಸಾಮರ್ಥ್ಯದ ವಿದ್ಯುತ್ ಕೇಂದ್ರದ ಮೊದಲ ಘಟಕ ಇದಾಗಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನವದೆಹಲಿ, ಜುಲೈ 14 (ಪಿಟಿಐ)– ಇನ್ನೊಬ್ಬ ಹಿರಿಯ ಜನತಾ ದಳ (ಯು) ಮುಖಂಡ ರಾಮಕೃಷ್ಣ ಹೆಗಡೆ ಅವರೂ ಪಕ್ಷ ಬಿಟ್ಟು ಹೊರ ನಡೆಯುವ ಬಗ್ಗೆ ಇಂದು ಇಂಗಿತ ವ್ಯಕ್ತಪಡಿಸಿದ್ದಾರೆ.</p>.<p>ಪಕ್ಷದಲ್ಲಿನ ಬೆಳವಣಿಗೆಗಳನ್ನು ಕೇಂದ್ರ ಸಚಿವ ರಾಂ ವಿಲಾಸ್ ಪಾಸ್ವಾನ್ ಅವರು ಟೀಕಿಸಿದ ಒಂದು ದಿನದ ನಂತರ ಹೆಗಡೆ ಅವರು, ಪಕ್ಷ ತ್ಯಜಿಸುವ ಬಗ್ಗೆ ಇಂದು ಇಲ್ಲಿ ಸುದ್ದಿಗಾರರಿಗೆ ಸುಳಿವು ನೀಡಿದರು.</p>.<p>‘ನಿರೀಕ್ಷಿಸಿದಂತೆ ಪಕ್ಷ ಸಕ್ರಿಯವಾಗಿಲ್ಲ. ಪಕ್ಷದ ಕಾರ್ಯವೈಖರಿಯಲ್ಲಿ ಸುಧಾರಣೆ ಕಾಣದಿದ್ದರೆ ಪ್ರತಿಯೊಬ್ಬರೂ ತಮ್ಮದೇ ಆದ ಮಾರ್ಗದಲ್ಲಿ ಹೋಗುತ್ತಾರೆ’ ಎಂದು ಹೆಗಡೆ ಅರ್ಥಗರ್ಭಿತವಾಗಿ ನುಡಿದರು.</p>.<p><strong>ಗೇರುಸೊಪ್ಪ ಮೊದಲ ಘಟಕ ಕಾರ್ಯಾರಂಭ</strong></p>.<p>ಹೊನ್ನಾವರ, ಜುಲೈ 14– ಪರಿಸರ ಸಮಸ್ಯೆಯಿಂದ ವಿಶ್ವಬ್ಯಾಂಕ್ ನೆರವು ಕೈತಪ್ಪಿಹೋಗಿದ್ದ ಗೇರುಸೊಪ್ಪ ಜಲವಿದ್ಯುತ್ ಯೋಜನೆಯ 60 ಮೆಗಾವಾಟ್ ಸಾಮರ್ಥ್ಯದ ಮೊದಲ ಘಟಕ ಇಂದು ಕಾರ್ಯಾರಂಭಿಸಿತು.</p>.<p>ಶರಾವತಿ ಕಣಿವೆಯ ಕೊನೆಯ ಹಂತದ ಈ ಗೇರುಸೊಪ್ಪ ಯೋಜನೆಯನ್ನು 531 ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ನಿರ್ಮಿಸಲಾಗಿದ್ದು, 240 ಮೆಗಾವಾಟ್ ಉತ್ಪಾದನಾ ಸಾಮರ್ಥ್ಯದ ವಿದ್ಯುತ್ ಕೇಂದ್ರದ ಮೊದಲ ಘಟಕ ಇದಾಗಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>