<p><strong>ಬಿಳಿ ನವಿಲಿಗೆ ಮರಿ ಮೃಗಾಲಯದಲ್ಲಿ ಸಂಭ್ರಮ<br />ಮೈಸೂರು, ಸೆ. 23–</strong> ಮೈಸೂರು ಮೃಗಾಲಯದಲ್ಲಿ ಈಗ ಹಕ್ಕಿಗಳ ಸಂಭ್ರಮ, ನಾಟ್ಯ ವೈಭವ.</p>.<p>ಮೊನ್ನೆ ಎಂಟು ಹಕ್ಕಿಮರಿಗಳು ಹುಟ್ಟಿ ಈ ವೈಭವವನ್ನು ಹೆಚ್ಚಿಸಿವೆ. ಬಿಳಿ ನವಿಲಿನ ಮೊಟ್ಟೆಗಳು ಒಡೆದು ಮೂರು ಮರಿಗಳು ಹೊರಬಂದಿವೆ. ಕಂದು ಬಣ್ಣದ ಪೆಲಿಕನ್ನ ಒಂದು ಮರಿ ಇದೇ ಹೊತ್ತಿಗೆ ಹೊರಬಂದಿದೆ. ಗಿನಿಕೋಳಿಯ ನಾಲ್ಕು ಮೊಟ್ಟೆಗಳು ಮರಿಗಳಾಗಿವೆ.</p>.<p>ಬಿಳಿ ನವಿಲಿನ ಮರಿಗಳು ಸುಲಭವಾಗಿ ಹೊರಬಂದಿಲ್ಲ. 28 ದಿನಗಳ ಕಾಲ ತಾಯಿ ನವಿಲು ಕಾವು ಕೊಟ್ಟಿದ್ದು ಕಾರಣವಾಗಿ ಈ ಮರಿಗಳು ಹೊರಬಂದಿವೆ. ಒಂದು ದಶಕದ ಕಾಲ ಈ ಮೃಗಾಲಯದಲ್ಲಿ ಬಿಳಿ ನವಿಲು ಮೊಟ್ಟೆಗಳು ಮರಿಯಾದ ಉದಾಹರಣೆಗಳೇ ಇಲ್ಲ. ಹೀಗಾಗಿ ಈ ಬಿಳಿ ನವಿಲ ಮರಿಗಳಿಂದಾಗಿ ಮೃಗಾಲಯ ಸಂಭ್ರಮಿಸುತ್ತಿದೆ. ಇದೇ ರೀತಿ ಮೃಗಾಲಯದಲ್ಲಿ ಕಂದು ಬಣ್ಣದ ಪೆಲಿಕನ್ ಮರಿ ಹುಟ್ಟಿರುವುದು ಕೂಡಾ ಮೊದಲ ಬಾರಿಗೆ.</p>.<p><strong>ಕಾಶ್ಮೀರ ವಿವಾದ ಪರಿಹಾರ ಅಮೆರಿಕ ಮಧ್ಯಸ್ಥಿಕೆ ಇಲ್ಲ</strong></p>.<p><strong>ನ್ಯೂಯಾರ್ಕ್, ಸೆ. 23 (ಯುಎನ್ಐ, ಪಿಟಿಐ)–</strong> ಕಾಶ್ಮೀರ ವಿಷಯದಲ್ಲಿ ಭಾರತ ದೇಶವು ಪಾಕಿಸ್ತಾನದೊಂದಿಗೆ ಹೊಂದಿರುವ ಭಿನ್ನಾಭಿಪ್ರಾಯದ ಬಗ್ಗೆ ಅಮೆರಿಕ ಮಧ್ಯ ಪ್ರವೇಶಿಸುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರು ಆಶ್ವಾಸನೆ ನೀಡಿದ್ದಾರೆ.</p>.<p>ಪ್ರಧಾನಿ ಗುಜ್ರಾಲ್ ಅವರ ಜತೆ ನಿನ್ನೆ ನಡೆದ ಭೇಟಿ ಸಮಯದಲ್ಲಿ ಕ್ಲಿಂಟನ್ ಅವರು ಈ ಆಶ್ವಾಸನೆ ನೀಡಿದರು. ಈ ಆಶ್ವಾಸನೆ ನೀಡುವ ಮೂಲಕ ಕಾಶ್ಮೀರ ವಿಚಾರದಲ್ಲಿ ಅಮೆರಿಕ ಮಧ್ಯಪ್ರವೇಶದ ಭಾರತದ ಭೀತಿಯನ್ನು ಅವರು ಹೋಗಲಾಡಿಸಿದರು. ಕಾಶ್ಮೀರ ವಿಷಯವನ್ನು ಚರ್ಚಿಸಲಾಯಿತೇ ಎಂಬ ಪ್ರಶ್ನೆಗೆ ವಿದೇಶಾಂಗ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು, ‘ಇಬ್ಬರೂ ನಾಯಕರಿಗೆ ಇಂತಹ ಸೂಕ್ಷ್ಮ ವಿಷಯದ ಬಗ್ಗೆ ಅರಿವಿದೆ’ ಎಂದು ಉತ್ತರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಿಳಿ ನವಿಲಿಗೆ ಮರಿ ಮೃಗಾಲಯದಲ್ಲಿ ಸಂಭ್ರಮ<br />ಮೈಸೂರು, ಸೆ. 23–</strong> ಮೈಸೂರು ಮೃಗಾಲಯದಲ್ಲಿ ಈಗ ಹಕ್ಕಿಗಳ ಸಂಭ್ರಮ, ನಾಟ್ಯ ವೈಭವ.</p>.<p>ಮೊನ್ನೆ ಎಂಟು ಹಕ್ಕಿಮರಿಗಳು ಹುಟ್ಟಿ ಈ ವೈಭವವನ್ನು ಹೆಚ್ಚಿಸಿವೆ. ಬಿಳಿ ನವಿಲಿನ ಮೊಟ್ಟೆಗಳು ಒಡೆದು ಮೂರು ಮರಿಗಳು ಹೊರಬಂದಿವೆ. ಕಂದು ಬಣ್ಣದ ಪೆಲಿಕನ್ನ ಒಂದು ಮರಿ ಇದೇ ಹೊತ್ತಿಗೆ ಹೊರಬಂದಿದೆ. ಗಿನಿಕೋಳಿಯ ನಾಲ್ಕು ಮೊಟ್ಟೆಗಳು ಮರಿಗಳಾಗಿವೆ.</p>.<p>ಬಿಳಿ ನವಿಲಿನ ಮರಿಗಳು ಸುಲಭವಾಗಿ ಹೊರಬಂದಿಲ್ಲ. 28 ದಿನಗಳ ಕಾಲ ತಾಯಿ ನವಿಲು ಕಾವು ಕೊಟ್ಟಿದ್ದು ಕಾರಣವಾಗಿ ಈ ಮರಿಗಳು ಹೊರಬಂದಿವೆ. ಒಂದು ದಶಕದ ಕಾಲ ಈ ಮೃಗಾಲಯದಲ್ಲಿ ಬಿಳಿ ನವಿಲು ಮೊಟ್ಟೆಗಳು ಮರಿಯಾದ ಉದಾಹರಣೆಗಳೇ ಇಲ್ಲ. ಹೀಗಾಗಿ ಈ ಬಿಳಿ ನವಿಲ ಮರಿಗಳಿಂದಾಗಿ ಮೃಗಾಲಯ ಸಂಭ್ರಮಿಸುತ್ತಿದೆ. ಇದೇ ರೀತಿ ಮೃಗಾಲಯದಲ್ಲಿ ಕಂದು ಬಣ್ಣದ ಪೆಲಿಕನ್ ಮರಿ ಹುಟ್ಟಿರುವುದು ಕೂಡಾ ಮೊದಲ ಬಾರಿಗೆ.</p>.<p><strong>ಕಾಶ್ಮೀರ ವಿವಾದ ಪರಿಹಾರ ಅಮೆರಿಕ ಮಧ್ಯಸ್ಥಿಕೆ ಇಲ್ಲ</strong></p>.<p><strong>ನ್ಯೂಯಾರ್ಕ್, ಸೆ. 23 (ಯುಎನ್ಐ, ಪಿಟಿಐ)–</strong> ಕಾಶ್ಮೀರ ವಿಷಯದಲ್ಲಿ ಭಾರತ ದೇಶವು ಪಾಕಿಸ್ತಾನದೊಂದಿಗೆ ಹೊಂದಿರುವ ಭಿನ್ನಾಭಿಪ್ರಾಯದ ಬಗ್ಗೆ ಅಮೆರಿಕ ಮಧ್ಯ ಪ್ರವೇಶಿಸುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರು ಆಶ್ವಾಸನೆ ನೀಡಿದ್ದಾರೆ.</p>.<p>ಪ್ರಧಾನಿ ಗುಜ್ರಾಲ್ ಅವರ ಜತೆ ನಿನ್ನೆ ನಡೆದ ಭೇಟಿ ಸಮಯದಲ್ಲಿ ಕ್ಲಿಂಟನ್ ಅವರು ಈ ಆಶ್ವಾಸನೆ ನೀಡಿದರು. ಈ ಆಶ್ವಾಸನೆ ನೀಡುವ ಮೂಲಕ ಕಾಶ್ಮೀರ ವಿಚಾರದಲ್ಲಿ ಅಮೆರಿಕ ಮಧ್ಯಪ್ರವೇಶದ ಭಾರತದ ಭೀತಿಯನ್ನು ಅವರು ಹೋಗಲಾಡಿಸಿದರು. ಕಾಶ್ಮೀರ ವಿಷಯವನ್ನು ಚರ್ಚಿಸಲಾಯಿತೇ ಎಂಬ ಪ್ರಶ್ನೆಗೆ ವಿದೇಶಾಂಗ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು, ‘ಇಬ್ಬರೂ ನಾಯಕರಿಗೆ ಇಂತಹ ಸೂಕ್ಷ್ಮ ವಿಷಯದ ಬಗ್ಗೆ ಅರಿವಿದೆ’ ಎಂದು ಉತ್ತರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>