ಅವರು ತಮಗುಂಟಾದ ನಿರಾಶೆಯನ್ನು ವರದಿಗಾರರ ಜೊತೆ ಮಾತನಾಡುತ್ತಾ ಸ್ಪಷ್ಟಪಡಿಸಿದ್ದಾರೆ. ಪೂರ್ವ ಪಾಕಿಸ್ತಾನದಲ್ಲಿನ ವಿಷಮ ಪರಿಸ್ಥಿತಿ ಹಾಗೂ ಅಲ್ಲಿನ ಜನರ ವೇದನೆ ಬಗ್ಗೆ ಈಜಿಪ್ಟಿನ ವಲಯಗಳಲ್ಲಿ ಅರಿವುಂಟು ಮಾಡಲು ಶ್ರೀ ಜೈಪ್ರಕಾಶರಿಗೆ ಸಾಧ್ಯವಾಯಿತೇ ಎಂಬುದನ್ನು ಕಾದು ನೋಡಬೇಕಾಗಿದೆ. ಅವರು ಈಜಿಪ್ಟಿನ ಪತ್ರಿಕೋದ್ಯಮಿಗಳು ಮತ್ತು ಬುದ್ಧಿಜೀವಿಗಳ ಜೊತೆ ಮಾತನಾಡಿ ಪೂರ್ವ ಪಾಕಿಸ್ತಾನದ ಬಿಕ್ಕಟ್ಟನ್ನು ವಿವರಿಸಿದರು. ಆದರೆ, ಪೂರ್ವ ಪಾಕಿಸ್ತಾನದ ಪರಿಸ್ಥಿತಿಯನ್ನು ಜನತೆಗೆ ತಿಳಿಸಲು ಈಜಿಪ್ಟಿನ ವರದಿಗಾರರು ಇಚ್ಛಿಸಿಲ್ಲ.