<h2>ಹುಬ್ಬಳ್ಳಿ: ಚರ್ಚ್ನಲ್ಲಿ ಬಾಂಬ್ ಸ್ಫೋಟ</h2>.<p>ಹುಬ್ಬಳ್ಳಿ, ಜುಲೈ 8– ಶಹರದ ಡೌನ್ಚಾಳ ಪ್ರದೇಶದ ಸೇಂಟ್ ಜಾನ್ಸ್ ಲೂಥರಾನ್ ಚರ್ಚ್ನಲ್ಲಿ ಇಂದು ನಸುಕಿನ ಜಾವ ಬಾಂಬ್ ಸ್ಫೋಟ ಸಂಭವಿಸಿದ್ದರಿಂದ ಹಿಂಸಾಚಾರ ಭುಗಿಲೆದ್ದು, ಬಸ್ಸುಗಳಿಗೆ ಬೆಂಕಿ ಮತ್ತು ಕಲ್ಲು ತೂರಾಟ ಘಟನೆಗಳು ನಡೆದಿವೆ.</p>.<p>ಹಿಂಸಾಚಾರದಲ್ಲಿ ಸಾರಿಗೆ ಸಂಸ್ಥೆಯ 5 ಬಸ್ಸು, 4 ಕಾರು, 6 ಲಾರಿ ಸೇರಿದಂತೆ ಒಟ್ಟು 15 ವಾಹನಗಳು ಹಾನಿಗೀಡಾಗಿದ್ದು, ಬಸ್ಸಿನ ಚಾಲಕ, ನಿರ್ವಾಹಕ ಸೇರಿ ಕನಿಷ್ಠ 10 ಮಂದಿ ಗಾಯಗೊಂಡಿದ್ದಾರೆ.</p>.<p>ಸಾರಿಗೆ ಸಂಸ್ಥೆಯ ಎರಡು ಬಸ್ಸುಗಳಿಗೆ ಬೆಂಕಿ ಹಚ್ಚಲಾಗಿದ್ದು, ಇತರ ಬಸ್ಸುಗಳು, ಭೂಸೇನಾ ನಿಗಮದ ಟ್ರಕ್, ಕಾರುಗಳು ಸೇರಿದಂತೆ ಇತರ 13 ವಾಹನಗಳಿಗೆ ಕಲ್ಲೆಸೆದು ಗಾಜುಗಳನ್ನು ಪುಡಿ ಪುಡಿ ಮಾಡಲಾಗಿದೆ.</p>.<h2>ಕಳ್ಳಂಬೆಳ್ಳ ಬಳಿ ಅಪಘಾತ: ನಾಲ್ಕು ಸಾವು</h2>.<p><strong>ತುಮಕೂರು, ಜುಲೈ 8</strong>– ಕಳ್ಳಂಬೆಳ್ಳ ಬಳಿಯ ಜುಂಜುರಾಯನಹಳ್ಳಿ ಗೇಟ್ ಬಳಿ ಇಂದು ಮುಂಜಾನೆ ಸಂಭವಿಸಿದ ರಸ್ತೆ ಅಪಘಾತದಲ್ಲಿ 4 ಮಂದಿ ಮೃತಪಟ್ಟು, ಇತರ ನಾಲ್ವರು ತೀವ್ರವಾಗಿ ಗಾಯಗೊಂಡಿದ್ದಾರೆ.</p>.<p>ಅಪಘಾತದಲ್ಲಿ ಹುಳಿಯಾರ್ನ ಗೋವಿಂದಪ್ಪ (24), ಶಂಕರಪ್ಪ (26), ಎಲೆಯೂರಿನ ತಿಪ್ಪೇಸ್ವಾಮಿ (24) ಮತ್ತು ಮಾದನಹಳ್ಳಿಯ ಏಕಾಂತಪ್ಪ (22) ಎಂಬುವರು ಸ್ಥಳದಲ್ಲೇ ಮೃತಪಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<h2>ಹುಬ್ಬಳ್ಳಿ: ಚರ್ಚ್ನಲ್ಲಿ ಬಾಂಬ್ ಸ್ಫೋಟ</h2>.<p>ಹುಬ್ಬಳ್ಳಿ, ಜುಲೈ 8– ಶಹರದ ಡೌನ್ಚಾಳ ಪ್ರದೇಶದ ಸೇಂಟ್ ಜಾನ್ಸ್ ಲೂಥರಾನ್ ಚರ್ಚ್ನಲ್ಲಿ ಇಂದು ನಸುಕಿನ ಜಾವ ಬಾಂಬ್ ಸ್ಫೋಟ ಸಂಭವಿಸಿದ್ದರಿಂದ ಹಿಂಸಾಚಾರ ಭುಗಿಲೆದ್ದು, ಬಸ್ಸುಗಳಿಗೆ ಬೆಂಕಿ ಮತ್ತು ಕಲ್ಲು ತೂರಾಟ ಘಟನೆಗಳು ನಡೆದಿವೆ.</p>.<p>ಹಿಂಸಾಚಾರದಲ್ಲಿ ಸಾರಿಗೆ ಸಂಸ್ಥೆಯ 5 ಬಸ್ಸು, 4 ಕಾರು, 6 ಲಾರಿ ಸೇರಿದಂತೆ ಒಟ್ಟು 15 ವಾಹನಗಳು ಹಾನಿಗೀಡಾಗಿದ್ದು, ಬಸ್ಸಿನ ಚಾಲಕ, ನಿರ್ವಾಹಕ ಸೇರಿ ಕನಿಷ್ಠ 10 ಮಂದಿ ಗಾಯಗೊಂಡಿದ್ದಾರೆ.</p>.<p>ಸಾರಿಗೆ ಸಂಸ್ಥೆಯ ಎರಡು ಬಸ್ಸುಗಳಿಗೆ ಬೆಂಕಿ ಹಚ್ಚಲಾಗಿದ್ದು, ಇತರ ಬಸ್ಸುಗಳು, ಭೂಸೇನಾ ನಿಗಮದ ಟ್ರಕ್, ಕಾರುಗಳು ಸೇರಿದಂತೆ ಇತರ 13 ವಾಹನಗಳಿಗೆ ಕಲ್ಲೆಸೆದು ಗಾಜುಗಳನ್ನು ಪುಡಿ ಪುಡಿ ಮಾಡಲಾಗಿದೆ.</p>.<h2>ಕಳ್ಳಂಬೆಳ್ಳ ಬಳಿ ಅಪಘಾತ: ನಾಲ್ಕು ಸಾವು</h2>.<p><strong>ತುಮಕೂರು, ಜುಲೈ 8</strong>– ಕಳ್ಳಂಬೆಳ್ಳ ಬಳಿಯ ಜುಂಜುರಾಯನಹಳ್ಳಿ ಗೇಟ್ ಬಳಿ ಇಂದು ಮುಂಜಾನೆ ಸಂಭವಿಸಿದ ರಸ್ತೆ ಅಪಘಾತದಲ್ಲಿ 4 ಮಂದಿ ಮೃತಪಟ್ಟು, ಇತರ ನಾಲ್ವರು ತೀವ್ರವಾಗಿ ಗಾಯಗೊಂಡಿದ್ದಾರೆ.</p>.<p>ಅಪಘಾತದಲ್ಲಿ ಹುಳಿಯಾರ್ನ ಗೋವಿಂದಪ್ಪ (24), ಶಂಕರಪ್ಪ (26), ಎಲೆಯೂರಿನ ತಿಪ್ಪೇಸ್ವಾಮಿ (24) ಮತ್ತು ಮಾದನಹಳ್ಳಿಯ ಏಕಾಂತಪ್ಪ (22) ಎಂಬುವರು ಸ್ಥಳದಲ್ಲೇ ಮೃತಪಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>