<p><strong>ಟಿಬೆಟ್ ಜನತೆಯ ವಿರುದ್ಧ ಕತ್ತಿ ಎತ್ತಿದ್ದು ಅನ್ಯಾಯ</strong></p><p><strong>ನವದೆಹಲಿ, ನ. 9–</strong> ಟಿಬೆಟ್ನಲ್ಲಿ ಚೀಣಾ ಕೈಗೊಂಡಿರುವ ಕ್ರಮವನ್ನು ಸರದಾರ್ ವಲ್ಲಭಭಾಯ್ ಪಟೇಲರು ಇಂದು ಟೀಕಿಸಿದರು. ಪರಂಪರಾನುಗತವಾಗಿ ಶಾಂತಿಪ್ರಿಯರಾದ ಟಿಬೆಟ್ ಜನತೆಯ ವಿರುದ್ಧ ಕತ್ತಿ ಎತ್ತಿದ್ದು ಅನ್ಯಾಯವೆಂದರು.</p><p>ಮುಂದುವರಿದು, ಚೀಣಾ ಭಾರತದ ಸಲಹೆಯನ್ನು ಕೇಳಿದ್ದರೆ ಬಲಪ್ರಯೋಗ ತ್ಯಜಿಸಬಹುದಾಗಿತ್ತು ಎಂದರು. ಟಿಬೆಟ್ಟಿನಲ್ಲಿ ವಿದೇಶೀಯರ ಸಂಚು ಸಾಗಿತ್ತೆಂದು, ಚೀಣಾ ತನ್ನ ಕೃತಿ ಸಮರ್ಥನೆಗೆ ನೀಡಿರುವ ವಾದ ಆಧಾರರಹಿತವೆಂದರು.</p><p>**************</p><p><strong>ಶ್ರೀನಗರದಲ್ಲಿ ಡಾ. ಪ್ರಸಾದ್</strong></p><p><strong>ಶ್ರೀನಗರ, ನ. 9–</strong> ಭಾರತ ರಾಷ್ಟ್ರಾಧ್ಯಕ್ಷ ರಾದ ಡಾ. ರಾಜೇಂದ್ರ ಪ್ರಸಾದರು ಪರಿವಾರ ಸಮೇತ ಇಂದು ಶ್ರೀನಗರಕ್ಕೆ ಆಗಮಿಸಿದರು. ಪ್ರಸಾದರು ರಾಷ್ಟ್ರಾಧ್ಯಕ್ಷರಾಗಿ ಅಧಿಕಾರ ವಹಿಸಿದ ಮೇಲೆ ಶ್ರೀನಗರಕ್ಕೆ ಭೇಟಿ ಕೊಟ್ಟುದು ಇದೇ ಮೊದಲನೆ ಸಾರಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಟಿಬೆಟ್ ಜನತೆಯ ವಿರುದ್ಧ ಕತ್ತಿ ಎತ್ತಿದ್ದು ಅನ್ಯಾಯ</strong></p><p><strong>ನವದೆಹಲಿ, ನ. 9–</strong> ಟಿಬೆಟ್ನಲ್ಲಿ ಚೀಣಾ ಕೈಗೊಂಡಿರುವ ಕ್ರಮವನ್ನು ಸರದಾರ್ ವಲ್ಲಭಭಾಯ್ ಪಟೇಲರು ಇಂದು ಟೀಕಿಸಿದರು. ಪರಂಪರಾನುಗತವಾಗಿ ಶಾಂತಿಪ್ರಿಯರಾದ ಟಿಬೆಟ್ ಜನತೆಯ ವಿರುದ್ಧ ಕತ್ತಿ ಎತ್ತಿದ್ದು ಅನ್ಯಾಯವೆಂದರು.</p><p>ಮುಂದುವರಿದು, ಚೀಣಾ ಭಾರತದ ಸಲಹೆಯನ್ನು ಕೇಳಿದ್ದರೆ ಬಲಪ್ರಯೋಗ ತ್ಯಜಿಸಬಹುದಾಗಿತ್ತು ಎಂದರು. ಟಿಬೆಟ್ಟಿನಲ್ಲಿ ವಿದೇಶೀಯರ ಸಂಚು ಸಾಗಿತ್ತೆಂದು, ಚೀಣಾ ತನ್ನ ಕೃತಿ ಸಮರ್ಥನೆಗೆ ನೀಡಿರುವ ವಾದ ಆಧಾರರಹಿತವೆಂದರು.</p><p>**************</p><p><strong>ಶ್ರೀನಗರದಲ್ಲಿ ಡಾ. ಪ್ರಸಾದ್</strong></p><p><strong>ಶ್ರೀನಗರ, ನ. 9–</strong> ಭಾರತ ರಾಷ್ಟ್ರಾಧ್ಯಕ್ಷ ರಾದ ಡಾ. ರಾಜೇಂದ್ರ ಪ್ರಸಾದರು ಪರಿವಾರ ಸಮೇತ ಇಂದು ಶ್ರೀನಗರಕ್ಕೆ ಆಗಮಿಸಿದರು. ಪ್ರಸಾದರು ರಾಷ್ಟ್ರಾಧ್ಯಕ್ಷರಾಗಿ ಅಧಿಕಾರ ವಹಿಸಿದ ಮೇಲೆ ಶ್ರೀನಗರಕ್ಕೆ ಭೇಟಿ ಕೊಟ್ಟುದು ಇದೇ ಮೊದಲನೆ ಸಾರಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>