ಕುಷ್ಟಗಿಯ ನಿಡಶೇಷಿ ಕೆರೆಯಿಂದ ಪ್ರಾರಂಭವಾದ ಜಲಚಳವಳಿ, ಯಲಬುರ್ಗಾ ತಾಲ್ಲೂಕಿನ ಕಲ್ಲಭಾವಿ ಕೆರೆ, ಕೊಪ್ಪಳದ ಹಿರೇಹಳ್ಳ, ತಾವರಗೆರೆಯ ಅಯ್ಯನಕೆರೆ, ಗಂಗಾವತಿಯ ದುರ್ಗಮ್ಮನ ಹಳ್ಳದ ಹೂಳೆತ್ತುವ ಕ್ರಿಯೆಯ ಮೂಲಕ ರಾಜ್ಯದ ಜನರ ಗಮನ ಸೆಳೆದಿದೆ.ಕೊಪ್ಪಳದ ಈ ಜಲ ಕಾರ್ಯವು ರಾಜ್ಯದ ಇತರ ಜಿಲ್ಲೆಗಳ ಜನರಿಗೂ ಮಾದರಿಯಾಗಿದೆ.