ಕೆಲವೇ ದಿನಗಳ ಹಿಂದೆಯಷ್ಟೇ ಇದೇ ರೆಸಾರ್ಟ್ನಲ್ಲಿ ‘ಮೈತ್ರಿ’ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹಾಗೂ ಅವರ ಪುತ್ರ, ಶಾಸಕ ಯತೀಂದ್ರ ಎರಡು ದಿನ ವಾಸ್ತವ್ಯ ಹೂಡಿದ್ದರು. ಬಳಿಕ ರಾಜ್ಯದಲ್ಲಿ ‘ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಲೇ’ ಎಂಬ ಕೂಗು ಕಾಂಗ್ರೆಸ್ ಶಾಸಕರ ವಲಯದಿಂದ ಕೇಳಿಬಂದಿತ್ತು. ಈಗ ಅದೇ ರೆಸಾರ್ಟ್ನಲ್ಲಿ ಮುಖ್ಯಮಂತ್ರಿಯ ವಿಶ್ರಾಂತಿ ಕುತೂಹಲ ಮೂಡಿಸಿದೆ.