<blockquote>ರಾಷ್ಟ್ರೀಯ ಉಳಿತಾಯ ಮರುಕಳಿಸುವ ಠೇವಣಿ ಖಾತೆ (RD) ಎಂಬುದು ಭಾರತೀಯ ಸರ್ಕಾರದಿಂದ ನಿಯಂತ್ರಿಸಲ್ಪಡುವ ಸಣ್ಣ ಹೂಡಿಕೆದಾರರಿಗೆ ಸೂಕ್ತವಾದ ಯೋಜನೆಯಾಗಿದೆ. ಇದು ಕನಿಷ್ಠ ₹1000ದಿಂದ ಪ್ರಾರಂಭಿಸಿ, ಮಾಸಿಕ ನಿಗದಿತ ಮೊತ್ತವನ್ನು ಹೂಡಿಕೆ ಮಾಡಲು ಅವಕಾಶ ನೀಡುತ್ತದೆ.</blockquote>.<p>ರಾಷ್ಟ್ರೀಯ ಉಳಿತಾಯ ಮರುಕಳಿಸುವ ಠೇವಣಿ ಖಾತೆ (RD) ಎಂಬುದು ಭಾರತೀಯ ಸರ್ಕಾರದಿಂದ ನಿಯಂತ್ರಿಸಲ್ಪಡುವ ಸಣ್ಣ ಹೂಡಿಕೆದಾರರಿಗೆ ಸೂಕ್ತವಾದ ಯೋಜನೆಯಾಗಿದೆ. ಇದು ಕನಿಷ್ಠ ₹1000ದಿಂದ ಪ್ರಾರಂಭಿಸಿ, ಮಾಸಿಕ ನಿಗದಿತ ಮೊತ್ತವನ್ನು ಹೂಡಿಕೆ ಮಾಡಲು ಅವಕಾಶ ನೀಡುತ್ತದೆ.</p><p>5 ವರ್ಷಗಳ ಅವಧಿಗೆ ಹಣವನ್ನು ಸಂಗ್ರಹಿಸಲು ಅನುವು ಮಾಡಿಕೊಡುತ್ತದೆ. ಈ ಯೋಜನೆ ಅಡಿಯಲ್ಲಿ ಆವರ್ತ ಠೇವಣಿ ಪ್ರಯೋಜನಗಳನ್ನು ಪಡೆಯಬಹುದು. ಈ ಯೋಜನೆಯನ್ನು ಪಡೆಯಲು ಇರಬೇಕಾದ ಅರ್ಹತೆಗಳು ಹಾಗೂ ಇಡಬಹುದಾದ ಠೇವಣಿ, ಹಣ ಹಿಂಪಡೆಯಲು ಅನುಸರಿಸಬೇಕಾದ ನಿಯಮಗಳೇನು ಎಂಬ ಮಾಹಿತಿ ಇಲ್ಲಿದೆ.</p>.ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿದೆ ಆಕರ್ಷಕ ಬಡ್ಡಿ: ಹೂಡಿಕೆ ಮಾಡುವುದು ಹೇಗೆ? .<blockquote><strong>ಈ ಯೋಜನೆ ಪಡೆಯಲು ಬೇಕಾದ ಅರ್ಹತೆಗಳೇನು?</strong></blockquote>.<ul><li><p>ಭಾರತದ ನಾಗರಿಕನಾಗಿರಬೇಕು</p></li><li><p>ಖಾತೆಯ ಮಾಲೀಕತ್ವ ಒಬ್ಬ ವ್ಯಕ್ತಿಗೆ ಮಾತ್ರ ಸೀಮಿತ</p></li><li><p>ಜಂಟಿ ಖಾತೆ (ಇಬ್ಬರು ಅಥವಾ ಅದಕ್ಕಿಂತ ಹೆಚ್ಚು ವ್ಯಕ್ತಿಗಳು ಸಮಾನ ಮಾಲೀಕತ್ವದ ಹಕ್ಕುಗಳೊಂದಿಗೆ ಒಟ್ಟಾಗಿ ತೆರೆಯುವ ಮತ್ತು ನಿರ್ವಹಿಸುವ ಬ್ಯಾಂಕ್ ಖಾತೆಯಾಗಿದೆ)</p></li></ul>.<blockquote><strong>ಮುಂಗಡ ಠೇವಣಿ</strong></blockquote>.<ul><li><p>ವ್ಯಕ್ತಿಯು 5 ವರ್ಷಗಳವರೆಗಿನ ಯಾವುದೇ ಅವಧಿಗೆ ಮುಂಗಡ ಠೇವಣಿ ಮಾಡಬಹುದು.</p></li></ul>.<blockquote><strong>ಸಾಲ ಸೌಲಭ್ಯ ಪಡೆಯಬಹುದಾ?</strong></blockquote>.<ul><li><p>ಖಾತೆಯು ಕನಿಷ್ಠ ಒಂದು ವರ್ಷ ಕಾರ್ಯನಿರ್ವಹಿಸಿದ ನಂತರ, ಠೇವಣಿದಾರರು ಖಾತೆಗಳಲ್ಲಿ ಶೇ. 50ವರೆಗೆ ಸಾಲ ಸೌಲಭ್ಯವನ್ನು ಪಡೆಯಬಹುದು.</p></li><li><p>ಸಾಲವನ್ನು ಒಂದೇ ಬಾರಿಗೆ ಅಥವಾ ಸಮಾನ ಮಾಸಿಕ ಕಂತುಗಳಲ್ಲಿ ಮರುಪಾವತಿಸಬಹುದು.</p></li><li><p> ಈ ಯೋಜನೆಯ ನಿಯಮಗಳ ಪ್ರಕಾರ, ಸಾಲದ ಖಾತೆಗೆ ಅನ್ವಯವಾಗುವ ಬಡ್ಡಿದರಕ್ಕಿಂತ 2% ದರದಲ್ಲಿ ಸರಳ ಬಡ್ಡಿಯನ್ನು ಪಾವತಿಸಲಾಗುತ್ತದೆ.</p></li><li><p>ಖಾತೆಯನ್ನು ಮುಚ್ಚುವವರೆಗೆ ಸಾಲವನ್ನು ಮರುಪಾವತಿಸದಿದ್ದರೆ, ಬಾಕಿ ಇರುವ ಮೊತ್ತವನ್ನು ವಸೂಲಿ ಮಾಡಲಾಗುತ್ತದೆ.</p></li></ul>.<blockquote>ಖಾತೆಯನ್ನು ಮುಕ್ತಾಯಗೊಳಿಸುವುದು ಹೇಗೆ?</blockquote>.<ul><li><p>ಖಾತೆ ತೆರೆದ ದಿನಾಂಕದಿಂದ 3 ವರ್ಷಗಳ ನಂತರ ಆರ್ಡಿ ಖಾತೆಯನ್ನು ಅವಧಿಪೂರ್ವವಾಗಿ ಮುಚ್ಚಬಹುದು.</p></li><li><p>ಅವಧಿ ಮುಗಿಯುವ ಒಂದು ದಿನ ಮೊದಲು ಖಾತೆಯನ್ನು ಅಕಾಲಿಕವಾಗಿ ಮುಚ್ಚಿದರೆ, ಅಂಚೆ ಕಚೇರಿ ಉಳಿತಾಯ ಖಾತೆಯ ಬಡ್ಡಿದರ ಅನ್ವಯವಾಗುತ್ತದೆ.</p></li><li><p>ಮುಂಗಡ ಠೇವಣಿಗಳನ್ನು ಪಡೆದ ಅವಧಿಯವರೆಗೆ ಖಾತೆಯನ್ನು ಅಕಾಲಿಕವಾಗಿ ಮುಚ್ಚಲು ಅನುಮತಿಸಲಾಗುವುದಿಲ್ಲ.</p></li></ul>.<blockquote>ಖಾತೆಯ ಮುಕ್ತಾಯ ಅವಧಿ ಎಷ್ಟು?</blockquote>.<ul><li><p>ಖಾತೆ ಆರಂಭದ ದಿನಾಂಕದಿಂದ 5 ವರ್ಷಗಳ ಅವಧಿಯೊಳಗೆ ಖಾತೆಯನ್ನು ಮುಚ್ಚಬಹುದು.</p></li><li><p>ಸಂಬಂಧಪಟ್ಟ ಅಂಚೆ ಕಚೇರಿಯಲ್ಲಿ ಅರ್ಜಿ ಸಲ್ಲಿಸುವ ಮೂಲಕ ಖಾತೆಯನ್ನು ಇನ್ನೂ ಹೆಚ್ಚುವರಿಯಾಗಿ 5 ವರ್ಷಗಳವರೆಗೆ ವಿಸ್ತರಿಸಬಹುದು.</p></li><li><p>ಆರ್ಡಿ ಖಾತೆಯನ್ನು (ಆವರ್ತ ಠೇವಣಿ) ಮುಕ್ತಾಯ ದಿನಾಂಕದಿಂದ 5 ವರ್ಷಗಳವರೆಗೆ ಠೇವಣಿ ಇಲ್ಲದೆ ಉಳಿಸಿಕೊಳ್ಳಬಹುದು.</p></li></ul>.<blockquote>ಖಾತೆದಾರ ಮರಣ ನಂತರ..?</blockquote>.<ul><li><p>ನಾಮಿನಿ ಅಥವಾ ಹಕ್ಕುದಾರರ ಮರಣದ ನಂತರ, ಆರ್ಡಿ ಖಾತೆಯ ಉಳಿದಿರುವ ಹಣವನ್ನು ಪಡೆಯಲು ಸಂಬಂಧಪಟ್ಟ ಅಂಚೆ ಕಚೇರಿಯಲ್ಲಿ ಹಕ್ಕು ಸಲ್ಲಿಸಬಹುದು.</p></li><li><p>ಕೆಲವು ಸಂದರ್ಭಗಳಲ್ಲಿ ಠೇವಣಿದಾರರ ಕಾನೂನುಬದ್ಧ ಉತ್ತರಾಧಿಕಾರಿಗಳ ಹೆಸರಿಗೆ ಬದಲಾಯಿಸಿದ ನಂತರ ಅವರು ಆರ್ಡಿ ಖಾತೆಯನ್ನು ಮುಕ್ತಾಯಗೊಳ್ಳುವವರೆಗೆ ಮುಂದುವರಿಸಬಹುದು.</p></li></ul>.ಇಲ್ಲಿ ಠೇವಣಿ ಮಾಡಿದ್ರೆ ಶೇ 7.7 ರಷ್ಟು ಬಡ್ಡಿ ಸಿಗಲಿದೆ: ಹೂಡಿಕೆ ನಿಯಮಗಳೇನು? .<blockquote><strong>ಈ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಭಾರತೀಯ ಅಂಚೆಯ ಅಧಿಕೃತ ಅಂತರ್ಜಾಲ ತಾಣ ಅಥವಾ ಹತ್ತಿರದ ಅಂಚೆ ಕಚೇರಿಯನ್ನು ಸಂರ್ಪಕಿಸಬಹುದು.</strong></blockquote>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<blockquote>ರಾಷ್ಟ್ರೀಯ ಉಳಿತಾಯ ಮರುಕಳಿಸುವ ಠೇವಣಿ ಖಾತೆ (RD) ಎಂಬುದು ಭಾರತೀಯ ಸರ್ಕಾರದಿಂದ ನಿಯಂತ್ರಿಸಲ್ಪಡುವ ಸಣ್ಣ ಹೂಡಿಕೆದಾರರಿಗೆ ಸೂಕ್ತವಾದ ಯೋಜನೆಯಾಗಿದೆ. ಇದು ಕನಿಷ್ಠ ₹1000ದಿಂದ ಪ್ರಾರಂಭಿಸಿ, ಮಾಸಿಕ ನಿಗದಿತ ಮೊತ್ತವನ್ನು ಹೂಡಿಕೆ ಮಾಡಲು ಅವಕಾಶ ನೀಡುತ್ತದೆ.</blockquote>.<p>ರಾಷ್ಟ್ರೀಯ ಉಳಿತಾಯ ಮರುಕಳಿಸುವ ಠೇವಣಿ ಖಾತೆ (RD) ಎಂಬುದು ಭಾರತೀಯ ಸರ್ಕಾರದಿಂದ ನಿಯಂತ್ರಿಸಲ್ಪಡುವ ಸಣ್ಣ ಹೂಡಿಕೆದಾರರಿಗೆ ಸೂಕ್ತವಾದ ಯೋಜನೆಯಾಗಿದೆ. ಇದು ಕನಿಷ್ಠ ₹1000ದಿಂದ ಪ್ರಾರಂಭಿಸಿ, ಮಾಸಿಕ ನಿಗದಿತ ಮೊತ್ತವನ್ನು ಹೂಡಿಕೆ ಮಾಡಲು ಅವಕಾಶ ನೀಡುತ್ತದೆ.</p><p>5 ವರ್ಷಗಳ ಅವಧಿಗೆ ಹಣವನ್ನು ಸಂಗ್ರಹಿಸಲು ಅನುವು ಮಾಡಿಕೊಡುತ್ತದೆ. ಈ ಯೋಜನೆ ಅಡಿಯಲ್ಲಿ ಆವರ್ತ ಠೇವಣಿ ಪ್ರಯೋಜನಗಳನ್ನು ಪಡೆಯಬಹುದು. ಈ ಯೋಜನೆಯನ್ನು ಪಡೆಯಲು ಇರಬೇಕಾದ ಅರ್ಹತೆಗಳು ಹಾಗೂ ಇಡಬಹುದಾದ ಠೇವಣಿ, ಹಣ ಹಿಂಪಡೆಯಲು ಅನುಸರಿಸಬೇಕಾದ ನಿಯಮಗಳೇನು ಎಂಬ ಮಾಹಿತಿ ಇಲ್ಲಿದೆ.</p>.ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿದೆ ಆಕರ್ಷಕ ಬಡ್ಡಿ: ಹೂಡಿಕೆ ಮಾಡುವುದು ಹೇಗೆ? .<blockquote><strong>ಈ ಯೋಜನೆ ಪಡೆಯಲು ಬೇಕಾದ ಅರ್ಹತೆಗಳೇನು?</strong></blockquote>.<ul><li><p>ಭಾರತದ ನಾಗರಿಕನಾಗಿರಬೇಕು</p></li><li><p>ಖಾತೆಯ ಮಾಲೀಕತ್ವ ಒಬ್ಬ ವ್ಯಕ್ತಿಗೆ ಮಾತ್ರ ಸೀಮಿತ</p></li><li><p>ಜಂಟಿ ಖಾತೆ (ಇಬ್ಬರು ಅಥವಾ ಅದಕ್ಕಿಂತ ಹೆಚ್ಚು ವ್ಯಕ್ತಿಗಳು ಸಮಾನ ಮಾಲೀಕತ್ವದ ಹಕ್ಕುಗಳೊಂದಿಗೆ ಒಟ್ಟಾಗಿ ತೆರೆಯುವ ಮತ್ತು ನಿರ್ವಹಿಸುವ ಬ್ಯಾಂಕ್ ಖಾತೆಯಾಗಿದೆ)</p></li></ul>.<blockquote><strong>ಮುಂಗಡ ಠೇವಣಿ</strong></blockquote>.<ul><li><p>ವ್ಯಕ್ತಿಯು 5 ವರ್ಷಗಳವರೆಗಿನ ಯಾವುದೇ ಅವಧಿಗೆ ಮುಂಗಡ ಠೇವಣಿ ಮಾಡಬಹುದು.</p></li></ul>.<blockquote><strong>ಸಾಲ ಸೌಲಭ್ಯ ಪಡೆಯಬಹುದಾ?</strong></blockquote>.<ul><li><p>ಖಾತೆಯು ಕನಿಷ್ಠ ಒಂದು ವರ್ಷ ಕಾರ್ಯನಿರ್ವಹಿಸಿದ ನಂತರ, ಠೇವಣಿದಾರರು ಖಾತೆಗಳಲ್ಲಿ ಶೇ. 50ವರೆಗೆ ಸಾಲ ಸೌಲಭ್ಯವನ್ನು ಪಡೆಯಬಹುದು.</p></li><li><p>ಸಾಲವನ್ನು ಒಂದೇ ಬಾರಿಗೆ ಅಥವಾ ಸಮಾನ ಮಾಸಿಕ ಕಂತುಗಳಲ್ಲಿ ಮರುಪಾವತಿಸಬಹುದು.</p></li><li><p> ಈ ಯೋಜನೆಯ ನಿಯಮಗಳ ಪ್ರಕಾರ, ಸಾಲದ ಖಾತೆಗೆ ಅನ್ವಯವಾಗುವ ಬಡ್ಡಿದರಕ್ಕಿಂತ 2% ದರದಲ್ಲಿ ಸರಳ ಬಡ್ಡಿಯನ್ನು ಪಾವತಿಸಲಾಗುತ್ತದೆ.</p></li><li><p>ಖಾತೆಯನ್ನು ಮುಚ್ಚುವವರೆಗೆ ಸಾಲವನ್ನು ಮರುಪಾವತಿಸದಿದ್ದರೆ, ಬಾಕಿ ಇರುವ ಮೊತ್ತವನ್ನು ವಸೂಲಿ ಮಾಡಲಾಗುತ್ತದೆ.</p></li></ul>.<blockquote>ಖಾತೆಯನ್ನು ಮುಕ್ತಾಯಗೊಳಿಸುವುದು ಹೇಗೆ?</blockquote>.<ul><li><p>ಖಾತೆ ತೆರೆದ ದಿನಾಂಕದಿಂದ 3 ವರ್ಷಗಳ ನಂತರ ಆರ್ಡಿ ಖಾತೆಯನ್ನು ಅವಧಿಪೂರ್ವವಾಗಿ ಮುಚ್ಚಬಹುದು.</p></li><li><p>ಅವಧಿ ಮುಗಿಯುವ ಒಂದು ದಿನ ಮೊದಲು ಖಾತೆಯನ್ನು ಅಕಾಲಿಕವಾಗಿ ಮುಚ್ಚಿದರೆ, ಅಂಚೆ ಕಚೇರಿ ಉಳಿತಾಯ ಖಾತೆಯ ಬಡ್ಡಿದರ ಅನ್ವಯವಾಗುತ್ತದೆ.</p></li><li><p>ಮುಂಗಡ ಠೇವಣಿಗಳನ್ನು ಪಡೆದ ಅವಧಿಯವರೆಗೆ ಖಾತೆಯನ್ನು ಅಕಾಲಿಕವಾಗಿ ಮುಚ್ಚಲು ಅನುಮತಿಸಲಾಗುವುದಿಲ್ಲ.</p></li></ul>.<blockquote>ಖಾತೆಯ ಮುಕ್ತಾಯ ಅವಧಿ ಎಷ್ಟು?</blockquote>.<ul><li><p>ಖಾತೆ ಆರಂಭದ ದಿನಾಂಕದಿಂದ 5 ವರ್ಷಗಳ ಅವಧಿಯೊಳಗೆ ಖಾತೆಯನ್ನು ಮುಚ್ಚಬಹುದು.</p></li><li><p>ಸಂಬಂಧಪಟ್ಟ ಅಂಚೆ ಕಚೇರಿಯಲ್ಲಿ ಅರ್ಜಿ ಸಲ್ಲಿಸುವ ಮೂಲಕ ಖಾತೆಯನ್ನು ಇನ್ನೂ ಹೆಚ್ಚುವರಿಯಾಗಿ 5 ವರ್ಷಗಳವರೆಗೆ ವಿಸ್ತರಿಸಬಹುದು.</p></li><li><p>ಆರ್ಡಿ ಖಾತೆಯನ್ನು (ಆವರ್ತ ಠೇವಣಿ) ಮುಕ್ತಾಯ ದಿನಾಂಕದಿಂದ 5 ವರ್ಷಗಳವರೆಗೆ ಠೇವಣಿ ಇಲ್ಲದೆ ಉಳಿಸಿಕೊಳ್ಳಬಹುದು.</p></li></ul>.<blockquote>ಖಾತೆದಾರ ಮರಣ ನಂತರ..?</blockquote>.<ul><li><p>ನಾಮಿನಿ ಅಥವಾ ಹಕ್ಕುದಾರರ ಮರಣದ ನಂತರ, ಆರ್ಡಿ ಖಾತೆಯ ಉಳಿದಿರುವ ಹಣವನ್ನು ಪಡೆಯಲು ಸಂಬಂಧಪಟ್ಟ ಅಂಚೆ ಕಚೇರಿಯಲ್ಲಿ ಹಕ್ಕು ಸಲ್ಲಿಸಬಹುದು.</p></li><li><p>ಕೆಲವು ಸಂದರ್ಭಗಳಲ್ಲಿ ಠೇವಣಿದಾರರ ಕಾನೂನುಬದ್ಧ ಉತ್ತರಾಧಿಕಾರಿಗಳ ಹೆಸರಿಗೆ ಬದಲಾಯಿಸಿದ ನಂತರ ಅವರು ಆರ್ಡಿ ಖಾತೆಯನ್ನು ಮುಕ್ತಾಯಗೊಳ್ಳುವವರೆಗೆ ಮುಂದುವರಿಸಬಹುದು.</p></li></ul>.ಇಲ್ಲಿ ಠೇವಣಿ ಮಾಡಿದ್ರೆ ಶೇ 7.7 ರಷ್ಟು ಬಡ್ಡಿ ಸಿಗಲಿದೆ: ಹೂಡಿಕೆ ನಿಯಮಗಳೇನು? .<blockquote><strong>ಈ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಭಾರತೀಯ ಅಂಚೆಯ ಅಧಿಕೃತ ಅಂತರ್ಜಾಲ ತಾಣ ಅಥವಾ ಹತ್ತಿರದ ಅಂಚೆ ಕಚೇರಿಯನ್ನು ಸಂರ್ಪಕಿಸಬಹುದು.</strong></blockquote>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>