<p>ಭಾರತವು ಕೃಷಿ ಪ್ರಧಾನ ದೇಶವಾಗಿದೆ. ಸರ್ಕಾರವು ರೈತರಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳಲ್ಲಿ ಪಾರಂಪರಿಕ ಕೃಷಿ ವಿಕಾಸ ಯೋಜನೆಯೂ ಒಂದು. ರೈತರ ಜೀವನ ಮಟ್ಟವನ್ನು ಸುಧಾರಿಸುವ ಹಾಗೂ ಪರಿಸರ ಸಮತೋಲನೆಯನ್ನು ಕಾಪಾಡುವ ಉದ್ದೇಶದಿಂದ ಈ ಯೋಜನೆಯನ್ನು 2015ರಲ್ಲಿ ಆರಂಭಿಸಲಾಯಿತು.</p>.ಅಂತ್ಯಸಂಸ್ಕಾರ ಪರಿಹಾರ ಯೋಜನೆ: ಯಾರೆಲ್ಲ ಅರ್ಹರು? ಹೀಗೆ ಅರ್ಜಿ ಸಲ್ಲಿಸಿ .<p><strong>ಯೋಜನೆಯ ಉದ್ದೇಶಗಳೇನು ?</strong></p><ul><li><p>ಮಣ್ಣಿನ ಆರೋಗ್ಯ ಹಾಗೂ ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಣೆ ಮಾಡುವುದು.</p></li><li><p>ನೈಸರ್ಗಿಕ ಕೃಷಿ ಪದ್ಧತಿಯನ್ನು ಉತ್ತೇಜಿಸುವುದು.</p></li><li><p>ರಾಸಾಯನಿಕಗಳ ಅವಲಂಬನೆ ಕಡಿಮೆ ಮಾಡಿ, ನೈಸರ್ಗಿಕ ವಿಧಾನದ ಮೂಲಕ ಕೃಷಿ ಮಾಡುವುದನ್ನು ರೈತರಿಗೆ ತಿಳಿಸಿಕೊಡುವುದು. </p></li><li><p>ಕಡಿಮೆ ಬಂಡವಾಳದಿಂದ ಹೆಚ್ಚು ಲಾಭ ಗಳಿಕೆ ಮಾಡುವುದು. </p></li><li><p>ರಾಸಾಯನಿಕ ರಹಿತ ಹಾಗೂ ಆರೋಗ್ಯಕರ ಆಹಾರದ ಉತ್ಪಾದನೆ ಮಾಡುವುದು. </p></li><li><p>ರೈತ ಸಂಘಗಳನ್ನು ಬೆಂಬಲಿಸುವುದು.</p></li><li><p>ಮಾರುಕಟ್ಟೆಗಳೊಂದಿಗೆ ನೇರವಾಗಿ ರೈತರು ಸಂಪರ್ಕ ಸಾಧಿಸಲು ವೇದಿಕೆ ಕಲ್ಪಿಸುವುದು. </p></li></ul><p> <strong>ಯೋಜನೆಯ ಪ್ರಯೋಜನಗಳು:</strong></p><ul><li><p>ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳುವ ರೈತರಿಗೆ 3 ವರ್ಷಕ್ಕೆ ಪ್ರತಿ ಹೆಕ್ಟೇರ್ಗೆ ₹31,500 ನೆರವು ದೊರೆಯಲಿದೆ. ಈ ಕೆಳಗಿನಂತೆ ಹಣವನ್ನು ವಿಂಗಡಣೆ ಮಾಡಿದೆ.</p></li><li><p>ಕೃಷಿ ಭೂಮಿಗೆ ಬೇಕಾದ ಸಾವಯವ ಪರಿಕರಗಳಿಗಾಗಿ ₹15,000 ಸಿಗಲಿದೆ. </p></li><li><p>ಮಾರುಕಟ್ಟೆ, ಪ್ಯಾಕೇಜಿಂಗ್ ಹಾಗೂ ಬ್ರ್ಯಾಂಡಿಂಗ್ಗಾಗಿ ₹4,500 ಸಿಗಲಿದೆ.</p></li><li><p>ಪ್ರಮಾಣೀಕರಣಕ್ಕಾಗಿ ₹3,000 ಸಿಗಲಿದೆ.</p></li><li><p>ರೈತರಿಗೆ ತರಬೇತಿ ಹಾಗೂ ಅವರ ಸಾಮರ್ಥ್ಯ ವೃದ್ಧಿಗಾಗಿ ₹9,000 ಸಿಗಲಿದೆ.</p></li></ul><p> <strong>ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?</strong></p><ul><li><p>ಅನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲಾಖೆಯ ಅಧಿಕೃತ ಅಂತರ್ಜಾಲ ತಾಣಕ್ಕೆ ಭೇಟಿ ನೀಡಿ. <a href="https://jaivikkheti.in/">https://jaivikkheti.in</a></p></li></ul>.ನರೇಗಾ, ಪಿಎಂ ಕಿಸಾನ್ ಹಣ ‘ಹೋಲ್ಡ್’: ಬ್ಯಾಂಕ್ ಮುಂಭಾಗ ರೈತರ ಪ್ರತಿಭಟನೆ.<p><strong>ಅಗತ್ಯವಿರುವ ದಾಖಲೆಗಳು:</strong></p><ul><li><p>ಭೂ ದಾಖಲೆಗಳು</p></li><li><p>ಆಧಾರ್ ಸಂಖ್ಯೆ</p></li><li><p>ಜಾತಿ ಪ್ರಮಾಣಪತ್ರ (ಎಸ್ಸಿ, ಎಸ್ಟಿ ಹಾಗೂ ಒಬಿಸಿ ಗೆ ಮಾತ್ರ)</p></li><li><p>ಬ್ಯಾಂಕ್ ವಿವರಗಳು</p></li><li><p>ಡಿಪಿಆರ್</p></li><li><p>ಫೋನ್ ವಿವರಗಳು</p></li><li><p>ಛಾಯಾಚಿತ್ರಗಳು</p></li></ul>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಭಾರತವು ಕೃಷಿ ಪ್ರಧಾನ ದೇಶವಾಗಿದೆ. ಸರ್ಕಾರವು ರೈತರಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳಲ್ಲಿ ಪಾರಂಪರಿಕ ಕೃಷಿ ವಿಕಾಸ ಯೋಜನೆಯೂ ಒಂದು. ರೈತರ ಜೀವನ ಮಟ್ಟವನ್ನು ಸುಧಾರಿಸುವ ಹಾಗೂ ಪರಿಸರ ಸಮತೋಲನೆಯನ್ನು ಕಾಪಾಡುವ ಉದ್ದೇಶದಿಂದ ಈ ಯೋಜನೆಯನ್ನು 2015ರಲ್ಲಿ ಆರಂಭಿಸಲಾಯಿತು.</p>.ಅಂತ್ಯಸಂಸ್ಕಾರ ಪರಿಹಾರ ಯೋಜನೆ: ಯಾರೆಲ್ಲ ಅರ್ಹರು? ಹೀಗೆ ಅರ್ಜಿ ಸಲ್ಲಿಸಿ .<p><strong>ಯೋಜನೆಯ ಉದ್ದೇಶಗಳೇನು ?</strong></p><ul><li><p>ಮಣ್ಣಿನ ಆರೋಗ್ಯ ಹಾಗೂ ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಣೆ ಮಾಡುವುದು.</p></li><li><p>ನೈಸರ್ಗಿಕ ಕೃಷಿ ಪದ್ಧತಿಯನ್ನು ಉತ್ತೇಜಿಸುವುದು.</p></li><li><p>ರಾಸಾಯನಿಕಗಳ ಅವಲಂಬನೆ ಕಡಿಮೆ ಮಾಡಿ, ನೈಸರ್ಗಿಕ ವಿಧಾನದ ಮೂಲಕ ಕೃಷಿ ಮಾಡುವುದನ್ನು ರೈತರಿಗೆ ತಿಳಿಸಿಕೊಡುವುದು. </p></li><li><p>ಕಡಿಮೆ ಬಂಡವಾಳದಿಂದ ಹೆಚ್ಚು ಲಾಭ ಗಳಿಕೆ ಮಾಡುವುದು. </p></li><li><p>ರಾಸಾಯನಿಕ ರಹಿತ ಹಾಗೂ ಆರೋಗ್ಯಕರ ಆಹಾರದ ಉತ್ಪಾದನೆ ಮಾಡುವುದು. </p></li><li><p>ರೈತ ಸಂಘಗಳನ್ನು ಬೆಂಬಲಿಸುವುದು.</p></li><li><p>ಮಾರುಕಟ್ಟೆಗಳೊಂದಿಗೆ ನೇರವಾಗಿ ರೈತರು ಸಂಪರ್ಕ ಸಾಧಿಸಲು ವೇದಿಕೆ ಕಲ್ಪಿಸುವುದು. </p></li></ul><p> <strong>ಯೋಜನೆಯ ಪ್ರಯೋಜನಗಳು:</strong></p><ul><li><p>ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳುವ ರೈತರಿಗೆ 3 ವರ್ಷಕ್ಕೆ ಪ್ರತಿ ಹೆಕ್ಟೇರ್ಗೆ ₹31,500 ನೆರವು ದೊರೆಯಲಿದೆ. ಈ ಕೆಳಗಿನಂತೆ ಹಣವನ್ನು ವಿಂಗಡಣೆ ಮಾಡಿದೆ.</p></li><li><p>ಕೃಷಿ ಭೂಮಿಗೆ ಬೇಕಾದ ಸಾವಯವ ಪರಿಕರಗಳಿಗಾಗಿ ₹15,000 ಸಿಗಲಿದೆ. </p></li><li><p>ಮಾರುಕಟ್ಟೆ, ಪ್ಯಾಕೇಜಿಂಗ್ ಹಾಗೂ ಬ್ರ್ಯಾಂಡಿಂಗ್ಗಾಗಿ ₹4,500 ಸಿಗಲಿದೆ.</p></li><li><p>ಪ್ರಮಾಣೀಕರಣಕ್ಕಾಗಿ ₹3,000 ಸಿಗಲಿದೆ.</p></li><li><p>ರೈತರಿಗೆ ತರಬೇತಿ ಹಾಗೂ ಅವರ ಸಾಮರ್ಥ್ಯ ವೃದ್ಧಿಗಾಗಿ ₹9,000 ಸಿಗಲಿದೆ.</p></li></ul><p> <strong>ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?</strong></p><ul><li><p>ಅನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲಾಖೆಯ ಅಧಿಕೃತ ಅಂತರ್ಜಾಲ ತಾಣಕ್ಕೆ ಭೇಟಿ ನೀಡಿ. <a href="https://jaivikkheti.in/">https://jaivikkheti.in</a></p></li></ul>.ನರೇಗಾ, ಪಿಎಂ ಕಿಸಾನ್ ಹಣ ‘ಹೋಲ್ಡ್’: ಬ್ಯಾಂಕ್ ಮುಂಭಾಗ ರೈತರ ಪ್ರತಿಭಟನೆ.<p><strong>ಅಗತ್ಯವಿರುವ ದಾಖಲೆಗಳು:</strong></p><ul><li><p>ಭೂ ದಾಖಲೆಗಳು</p></li><li><p>ಆಧಾರ್ ಸಂಖ್ಯೆ</p></li><li><p>ಜಾತಿ ಪ್ರಮಾಣಪತ್ರ (ಎಸ್ಸಿ, ಎಸ್ಟಿ ಹಾಗೂ ಒಬಿಸಿ ಗೆ ಮಾತ್ರ)</p></li><li><p>ಬ್ಯಾಂಕ್ ವಿವರಗಳು</p></li><li><p>ಡಿಪಿಆರ್</p></li><li><p>ಫೋನ್ ವಿವರಗಳು</p></li><li><p>ಛಾಯಾಚಿತ್ರಗಳು</p></li></ul>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>