<p>ಕೇಂದ್ರ ಸರ್ಕಾರವು ದೇಶದ ರೈತರ ಆರ್ಥಿಕ ಸ್ಥಿತಿಗತಿಯನ್ನು ಉತ್ತಮ ಪಡಿಸಲು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಯ ಮೂಲಕ ರೈತರಿಗೆ ವಾರ್ಷಿಕವಾಗಿ ₹6 ಸಾವಿರ ಪ್ರೋತ್ಸಾಹ ಧನವನ್ನು ನೀಡಲಾಗುತ್ತದೆ. ಪ್ರತಿ 4 ತಿಂಗಳಿಗೊಮ್ಮೆ ₹2 ಸಾವಿರದಂತೆ ರೈತನ ಬ್ಯಾಂಕ್ ಖಾತೆಗೆ ಹಣವನ್ನು ಜಮೆ ಮಾಡಲಾಗುತ್ತದೆ. </p><p>2018ರ ಡಿ.1ರಂದು ಯೋಜನೆಯು ಆರಂಭವಾಯಿತು. ದೇಶದ ಎಲ್ಲಾ ರೈತರು ಈ ಯೋಜನೆಯನ್ನು ಪಡೆಯಬಹುದು. ಭೂಮಿ ಹೊಂದಿರುವ ಎಲ್ಲಾ ಭೂ ಹಿಡುವಳಿದಾರ ಕುಟುಂಬಗಳು ಈ ಯೋಜನೆ ಪಡೆಯಲು ಅರ್ಹರಾಗಿರುತ್ತಾರೆ. ಯೋಜನೆಯನ್ನು ಪಡೆಯಲು ಇರಬೇಕಾದ ಅರ್ಹತೆಗಳು ಯಾವುವು? ಅರ್ಜಿಯನ್ನು ಸಲ್ಲಿಸುವುದು ಹೇಗೆ? ಎಂಬ ಮಾಹಿತಿ ಇಲ್ಲಿದೆ. </p><p><strong>ಅಗತ್ಯ ದಾಖಲೆಗಳು ಯಾವುವು? </strong></p><ul><li><p>ಆಧಾರ್ ಕಾರ್ಡ್</p></li><li><p>ಭೂ ಹಿಡುವಳಿ ಪತ್ರಗಳು</p></li><li><p>ಬ್ಯಾಂಕ್ ಉಳಿತಾಯ ಖಾತೆ</p></li></ul><p><strong>ಯಾರು ಈ ಯೋಜನೆಗೆ ಅನರ್ಹರು?</strong> </p><ul><li><p>ಅರ್ಜಿದಾರರ ಕುಟುಂಬದಲ್ಲಿ ಯಾರೊಬ್ಬರೂ ಸಾಂವಿಧಾನಿಕ ಹುದ್ದೆಯಲ್ಲಿ ಇರಬಾರದು.</p></li><li><p>ಸೇವೆಯಲ್ಲಿರುವ ಅಥವಾ ನಿವೃತ್ತರಾಗಿರುವ ಸರ್ಕಾರಿ ಉದ್ಯೋಗಿಗಳು ಈ ಯೋಜನೆಯನ್ನು ಪಡೆಯಲು ಅನರ್ಹರು. </p></li></ul>.<p><strong>ಅರ್ಜಿ ಸಲ್ಲಿಸುವುದು ಹೇಗೆ?</strong></p>.ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿದೆ ಆಕರ್ಷಕ ಬಡ್ಡಿ: ಹೂಡಿಕೆ ಮಾಡುವುದು ಹೇಗೆ? .<p><strong>ಮೊದಲು ಯೋಜನೆ ಅಧಿಕೃತ ಅಂತರ್ಜಾಲ ತಾಣವಾದ 'https://pmkisan.gov.in/' ಭೇಟಿ ನೀಡಿ</strong></p>.<p><strong>ತೆರೆದ ವೆಬ್ ಪುಟವನ್ನು ಕೆಳಕ್ಕೆ ಸ್ಕ್ರಾಲ್ ಮಾಡಿ. ನಂತರ 'Farmers Corner' ಕಾಣುತ್ತದೆ. ಅಲ್ಲಿ 'New Farmers Registration' ಆಯ್ಕೆ ಮಾಡಿ.</strong></p>. <p><strong>'New Farmers Registration form' ಪುಟ ತೆರೆಯುತ್ತದೆ. ಅಲ್ಲಿ ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆಯನ್ನು ನಮೂದಿಸಿ 'Otp' ಯನ್ನು ಪಡೆಯಿರಿ.</strong> </p>.<p><strong>ನಂತರ ದಾಖಲೆಗಳನ್ನು ಸೇರಿಸುವ ಪುಟ ತೆರೆಯುತ್ತದೆ. ಅಲ್ಲಿ ಕೇಳಲಾಗುವ ಎಲ್ಲಾ ಮಾಹಿತಿ ಹಾಗೂ ದಾಖಲೆಗಳ ಫೋಟೋಗಳನ್ನು ಅಪ್ಲೋಡ್ ಮಾಡಿ ಸೇವ್ ಮಾಡಬೇಕು.</strong> </p>.<p><strong>ಸೇವ್ ನಂತರ ನಿಮ್ಮ ಅರ್ಜಿಯು ಸ್ಪೀಕಾಸರವಾಗಿರುತ್ತದೆ. ಯೋಜನೆಗೆ ಸಂಬಂಧಿಸಿದ ಸ್ಟೇಟಸ್ ನೋಡಲು ಆಧಾರ್ ಸಂಖ್ಯೆಯನ್ನು ನಮೂದಿಸಿ ನೋಡಬಹುದಾಗಿದೆ.</strong> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕೇಂದ್ರ ಸರ್ಕಾರವು ದೇಶದ ರೈತರ ಆರ್ಥಿಕ ಸ್ಥಿತಿಗತಿಯನ್ನು ಉತ್ತಮ ಪಡಿಸಲು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಯ ಮೂಲಕ ರೈತರಿಗೆ ವಾರ್ಷಿಕವಾಗಿ ₹6 ಸಾವಿರ ಪ್ರೋತ್ಸಾಹ ಧನವನ್ನು ನೀಡಲಾಗುತ್ತದೆ. ಪ್ರತಿ 4 ತಿಂಗಳಿಗೊಮ್ಮೆ ₹2 ಸಾವಿರದಂತೆ ರೈತನ ಬ್ಯಾಂಕ್ ಖಾತೆಗೆ ಹಣವನ್ನು ಜಮೆ ಮಾಡಲಾಗುತ್ತದೆ. </p><p>2018ರ ಡಿ.1ರಂದು ಯೋಜನೆಯು ಆರಂಭವಾಯಿತು. ದೇಶದ ಎಲ್ಲಾ ರೈತರು ಈ ಯೋಜನೆಯನ್ನು ಪಡೆಯಬಹುದು. ಭೂಮಿ ಹೊಂದಿರುವ ಎಲ್ಲಾ ಭೂ ಹಿಡುವಳಿದಾರ ಕುಟುಂಬಗಳು ಈ ಯೋಜನೆ ಪಡೆಯಲು ಅರ್ಹರಾಗಿರುತ್ತಾರೆ. ಯೋಜನೆಯನ್ನು ಪಡೆಯಲು ಇರಬೇಕಾದ ಅರ್ಹತೆಗಳು ಯಾವುವು? ಅರ್ಜಿಯನ್ನು ಸಲ್ಲಿಸುವುದು ಹೇಗೆ? ಎಂಬ ಮಾಹಿತಿ ಇಲ್ಲಿದೆ. </p><p><strong>ಅಗತ್ಯ ದಾಖಲೆಗಳು ಯಾವುವು? </strong></p><ul><li><p>ಆಧಾರ್ ಕಾರ್ಡ್</p></li><li><p>ಭೂ ಹಿಡುವಳಿ ಪತ್ರಗಳು</p></li><li><p>ಬ್ಯಾಂಕ್ ಉಳಿತಾಯ ಖಾತೆ</p></li></ul><p><strong>ಯಾರು ಈ ಯೋಜನೆಗೆ ಅನರ್ಹರು?</strong> </p><ul><li><p>ಅರ್ಜಿದಾರರ ಕುಟುಂಬದಲ್ಲಿ ಯಾರೊಬ್ಬರೂ ಸಾಂವಿಧಾನಿಕ ಹುದ್ದೆಯಲ್ಲಿ ಇರಬಾರದು.</p></li><li><p>ಸೇವೆಯಲ್ಲಿರುವ ಅಥವಾ ನಿವೃತ್ತರಾಗಿರುವ ಸರ್ಕಾರಿ ಉದ್ಯೋಗಿಗಳು ಈ ಯೋಜನೆಯನ್ನು ಪಡೆಯಲು ಅನರ್ಹರು. </p></li></ul>.<p><strong>ಅರ್ಜಿ ಸಲ್ಲಿಸುವುದು ಹೇಗೆ?</strong></p>.ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿದೆ ಆಕರ್ಷಕ ಬಡ್ಡಿ: ಹೂಡಿಕೆ ಮಾಡುವುದು ಹೇಗೆ? .<p><strong>ಮೊದಲು ಯೋಜನೆ ಅಧಿಕೃತ ಅಂತರ್ಜಾಲ ತಾಣವಾದ 'https://pmkisan.gov.in/' ಭೇಟಿ ನೀಡಿ</strong></p>.<p><strong>ತೆರೆದ ವೆಬ್ ಪುಟವನ್ನು ಕೆಳಕ್ಕೆ ಸ್ಕ್ರಾಲ್ ಮಾಡಿ. ನಂತರ 'Farmers Corner' ಕಾಣುತ್ತದೆ. ಅಲ್ಲಿ 'New Farmers Registration' ಆಯ್ಕೆ ಮಾಡಿ.</strong></p>. <p><strong>'New Farmers Registration form' ಪುಟ ತೆರೆಯುತ್ತದೆ. ಅಲ್ಲಿ ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆಯನ್ನು ನಮೂದಿಸಿ 'Otp' ಯನ್ನು ಪಡೆಯಿರಿ.</strong> </p>.<p><strong>ನಂತರ ದಾಖಲೆಗಳನ್ನು ಸೇರಿಸುವ ಪುಟ ತೆರೆಯುತ್ತದೆ. ಅಲ್ಲಿ ಕೇಳಲಾಗುವ ಎಲ್ಲಾ ಮಾಹಿತಿ ಹಾಗೂ ದಾಖಲೆಗಳ ಫೋಟೋಗಳನ್ನು ಅಪ್ಲೋಡ್ ಮಾಡಿ ಸೇವ್ ಮಾಡಬೇಕು.</strong> </p>.<p><strong>ಸೇವ್ ನಂತರ ನಿಮ್ಮ ಅರ್ಜಿಯು ಸ್ಪೀಕಾಸರವಾಗಿರುತ್ತದೆ. ಯೋಜನೆಗೆ ಸಂಬಂಧಿಸಿದ ಸ್ಟೇಟಸ್ ನೋಡಲು ಆಧಾರ್ ಸಂಖ್ಯೆಯನ್ನು ನಮೂದಿಸಿ ನೋಡಬಹುದಾಗಿದೆ.</strong> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>