‘ಕೆಲವು ದಿನಗಳ ಹಿಂದೆ ಐಸಿಸಿ ನಿಯೋಗವು ಭೇಟಿ ನೀಡಿ ಕ್ರೀಡಾಂಗಣ ಪರಿಶೀಲನೆ ಮಾಡಿತ್ತು. ಇದೀಗ ಕೆಲವು ನವೀಕರಣ ಕಾರ್ಯವನ್ನು ಆರಂಭಿಸಲಾಗಿದೆ. ಕೆಲವು ಸ್ಟ್ಯಾಂಡ್ಗಳ ಮೇಲ್ಚಾವಣಿಗೆ ಹೊಸ ಶೀಟ್ಗಳನ್ನು ಅಳವಡಿಸಲಾಗುತ್ತಿದೆ. ಹಾಳಾಗಿರುವ ಆಸನಗಳನ್ನು ತೆಗೆದು ಹಾಕಿ ಹೊಸದನ್ನು ಹಾಕಲಾಗುತ್ತಿದೆ. ಪ್ರೇಕ್ಷಕರಿಗಾಗಿ ಶೌಚಾಲಯಗಳ ನವೀಕರಣ ಕೂಡ ನಡೆಯುತ್ತಿದೆ‘ ಎಂದು ಕೆಎಸ್ಸಿಎ ಅಧ್ಯಕ್ಷ ರಘುರಾಮ್ ಭಟ್ ತಿಳಿಸಿದರು.