ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಸಿ ಗುಂಪಿನ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ 215 ರನ್ಗಳ ದೊಡ್ಡ ಮುನ್ನಡೆ ಪಡೆದ ಕರ್ನಾಟಕ ಎರಡನೇ ಇನಿಂಗ್ಸ್ನಲ್ಲಿ 139 ರನ್ಗಳಿಗೆ ಕುಸಿಯಿತು. ಆದರೆ, 355 ರನ್ಗಳ ಗುರಿ ನೀಡಿರುವುದರಿಂದ ಗೆಲುವಿನ ಅವಕಾಶ ಮಯಂಕ್ ಬಳಗಕ್ಕೆ ಹೆಚ್ಚಿದೆ. ಎರಡನೇ ಇನಿಂಗ್ಸ್ ಆರಂಭಿಸಿರುವ ತಮಿಳುನಾಡು ತಂಡವು ದಿನದಾಟದ ಮುಕ್ತಾಯಕ್ಕೆ 1 ವಿಕೆಟ್ಗೆ 36 ರನ್ ಗಳಿಸಿದೆ. ಗೆಲ್ಲಲು ಇನ್ನೂ 319 ರನ್ಗಳು ಬೇಕು. ನಾಲ್ಕನೇ ದಿನದ ಪಿಚ್ನಲ್ಲಿ ಇದು ಕಠಿಣ ಸವಾಲಾಗಿದೆ. ಆತಿಥೇಯರು ಡ್ರಾ ಮಾಡಿಕೊಳ್ಳಲೂ ಪ್ರಯತ್ನಿಸಬಹುದು.