<p><strong>ನವದೆಹಲಿ: </strong>ಭಾರತದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರು ಕಪಿಲ್ ದೇವ್ ಅವರಂತಾಗಲೂ ಇನ್ನೂ ಬಹಳಷ್ಟು ಶ್ರಮಪಡಬೇಕು. ಸದ್ಯ ಅವರು ಕಪಿಲ್ ಅವರಿಗೆ ಯಾವ ತರಹದಿಂದಲೂ ಹೋಲಿಕೆ ಅಲ್ಲ. ಆದರೆ ಜಸ್ಪ್ರೀತ್ ಬೂಮ್ರಾ ಅವರು ವಿಶ್ವದರ್ಜೆಯ ಬೌಲರ್ ಆಗುವ ಹಾದಿಯಲ್ಲಿದ್ದಾರೆ ಎಂದು ಪಾಕಿಸ್ತಾನದ ಹಿರಿಯ ಕ್ರಿಕೆಟಿಗ ಅಬ್ದುಲ್ ರಜಾಕ್ ಹೇಳಿದ್ದಾರೆ.</p>.<p>ಈಚೆಗೆ ತಾವು ಬೂಮ್ರಾ ಅವರನ್ನು ‘ಬೇಬಿ ಬೌಲರ್’ ಎಂದು ಕರೆದಿದ್ದರ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ನನ್ನ ಹೇಳಿಕೆಯನ್ನು ತಪ್ಪಾಗಿ ಉಲ್ಲೇಖಿಸಲಾಗಿದೆ’ ಎಂದಿದ್ದಾರೆ.</p>.<p>‘ಪಾಂಡ್ಯ ಉತ್ತಮ ಆಟಗಾರ. ಅವರು ಇನ್ನೂ ಒಳ್ಳೆಯ ಆಲ್ರೌಂಡರ್ ಆಗುವ ಸಾಮರ್ಥ್ಯ ಹೊಂದಿದ್ದಾರೆ. ಅವರು ಕಠಿಣ ಶ್ರಮಪಡಬೇಕು. ಆಟಕ್ಕಾಗಿ ಹೆಚ್ಚು ಸಮಯ ಮೀಸಲಿಡಬೇಕು. ಇಲ್ಲದಿದ್ದರೆ ಲಯ ಕಂಡುಕೊಳ್ಳುವುದು ಅಸಾಧ್ಯ. ಆಗ ಎಲ್ಲವೂ ಕೈತಪ್ಪಿ ಹೋಗುತ್ತವೆ’ ಎಂದು ರಜಾಕ್ ಹೇಳಿದ್ದಾರೆ.</p>.<p>‘ಪಾಂಡ್ಯ ಮಾನಸಿಕವಾಗಿ ಮತ್ತು ದೈಹಿಕವಾಗಿ ಇನ್ನಷ್ಟು ಫಿಟ್ನೆಸ್ ಸಾಧಿಸಬೇಕು.ತಮ್ಮ ವೃತ್ತಿಯ ಆರಂಭದ ವರ್ಷಗಳಲ್ಲಿಯೇ ಅವರು ದೊಡ್ಡಮಟ್ಟದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಇಂತಹದನ್ನು ತಪ್ಪಿಸಬೇಕು. ಕೆಲವೊಮ್ಮ ಮನುಷ್ಯನಿಗೆ ಬಹಳಷ್ಟು ಹಣ ಲಭಿಸಿದಾಗ ಆರಾಮವಾಗಿರುವುದರೆಡೆಗೆ ಮನಸ್ಸು ಎಳೆಯುತ್ತದೆ. ಇದು ಎಲ್ಲ ಆಟಗಾರರಿಗೂ ಅನ್ವಯಿಸುತ್ತದೆ. ಮೊಹಮ್ಮದ್ ಆಮೀರ್ ಕಠಿಣ ಶ್ರಮ ಪಡಲಿಲ್ಲ. ಆದ್ದರಿಂದ ಅವರ ಆಟವು ಕಳೆಗುಂದಿತು’ ಎಂದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ: </strong>ಭಾರತದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರು ಕಪಿಲ್ ದೇವ್ ಅವರಂತಾಗಲೂ ಇನ್ನೂ ಬಹಳಷ್ಟು ಶ್ರಮಪಡಬೇಕು. ಸದ್ಯ ಅವರು ಕಪಿಲ್ ಅವರಿಗೆ ಯಾವ ತರಹದಿಂದಲೂ ಹೋಲಿಕೆ ಅಲ್ಲ. ಆದರೆ ಜಸ್ಪ್ರೀತ್ ಬೂಮ್ರಾ ಅವರು ವಿಶ್ವದರ್ಜೆಯ ಬೌಲರ್ ಆಗುವ ಹಾದಿಯಲ್ಲಿದ್ದಾರೆ ಎಂದು ಪಾಕಿಸ್ತಾನದ ಹಿರಿಯ ಕ್ರಿಕೆಟಿಗ ಅಬ್ದುಲ್ ರಜಾಕ್ ಹೇಳಿದ್ದಾರೆ.</p>.<p>ಈಚೆಗೆ ತಾವು ಬೂಮ್ರಾ ಅವರನ್ನು ‘ಬೇಬಿ ಬೌಲರ್’ ಎಂದು ಕರೆದಿದ್ದರ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ನನ್ನ ಹೇಳಿಕೆಯನ್ನು ತಪ್ಪಾಗಿ ಉಲ್ಲೇಖಿಸಲಾಗಿದೆ’ ಎಂದಿದ್ದಾರೆ.</p>.<p>‘ಪಾಂಡ್ಯ ಉತ್ತಮ ಆಟಗಾರ. ಅವರು ಇನ್ನೂ ಒಳ್ಳೆಯ ಆಲ್ರೌಂಡರ್ ಆಗುವ ಸಾಮರ್ಥ್ಯ ಹೊಂದಿದ್ದಾರೆ. ಅವರು ಕಠಿಣ ಶ್ರಮಪಡಬೇಕು. ಆಟಕ್ಕಾಗಿ ಹೆಚ್ಚು ಸಮಯ ಮೀಸಲಿಡಬೇಕು. ಇಲ್ಲದಿದ್ದರೆ ಲಯ ಕಂಡುಕೊಳ್ಳುವುದು ಅಸಾಧ್ಯ. ಆಗ ಎಲ್ಲವೂ ಕೈತಪ್ಪಿ ಹೋಗುತ್ತವೆ’ ಎಂದು ರಜಾಕ್ ಹೇಳಿದ್ದಾರೆ.</p>.<p>‘ಪಾಂಡ್ಯ ಮಾನಸಿಕವಾಗಿ ಮತ್ತು ದೈಹಿಕವಾಗಿ ಇನ್ನಷ್ಟು ಫಿಟ್ನೆಸ್ ಸಾಧಿಸಬೇಕು.ತಮ್ಮ ವೃತ್ತಿಯ ಆರಂಭದ ವರ್ಷಗಳಲ್ಲಿಯೇ ಅವರು ದೊಡ್ಡಮಟ್ಟದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಇಂತಹದನ್ನು ತಪ್ಪಿಸಬೇಕು. ಕೆಲವೊಮ್ಮ ಮನುಷ್ಯನಿಗೆ ಬಹಳಷ್ಟು ಹಣ ಲಭಿಸಿದಾಗ ಆರಾಮವಾಗಿರುವುದರೆಡೆಗೆ ಮನಸ್ಸು ಎಳೆಯುತ್ತದೆ. ಇದು ಎಲ್ಲ ಆಟಗಾರರಿಗೂ ಅನ್ವಯಿಸುತ್ತದೆ. ಮೊಹಮ್ಮದ್ ಆಮೀರ್ ಕಠಿಣ ಶ್ರಮ ಪಡಲಿಲ್ಲ. ಆದ್ದರಿಂದ ಅವರ ಆಟವು ಕಳೆಗುಂದಿತು’ ಎಂದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>