<p><strong>ಬೆಂಗಳೂರು</strong>: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಇಂಗ್ಲೆಂಡ್ನ ರೀಸ್ ಟಾಪ್ಲಿ ಮತ್ತು ವಿಲ್ ಜ್ಯಾಕ್ಸ್ ಅವರನ್ನು ಖರೀದಿಸಿತು.</p>.<p>ಅಲ್ಲದೇ ಕರ್ನಾಟಕದ ಆಟಗಾರ ಮನೋಜ್ ಬಾಂಢಗೆ ಅವರನ್ನೂ ಸೇರ್ಪಡೆ ಮಾಡಿಕೊಂಡಿತು.</p>.<p>ವಿಲ್ ಜ್ಯಾಕ್ಸ್ ಅವರಿಗೆ ₹ 3.2 ಕೋಟಿ, ಟಾಪ್ಲಿಗೆ ₹ 1.2 ಕೋಟಿ ಮೌಲ್ಯ ನೀಡಿತು. ವಿಲ್ ಜ್ಯಾಕ್ಸ್ ಅವರ ಮೂಲಬೆಲೆ ₹ 1.5 ಕೋಟಿಯಾಗಿತ್ತು. ಟಾಪ್ಲಿ ಅವರಿಗೆ ₹ 75 ಲಕ್ಷ ಮೂಲಬೆಲೆ ನಿಗದಿ ಮಾಡಲಾಗಿತ್ತು.</p>.<p>ರಾಜನ್ ಕುಮಾರ್ (₹ 70 ಲಕ್ಷ), ಅವಿನಾಶ್ ಸಿಂಗ್ (₹ 60 ಲಕ್ಷ), ಮನೋಜ್ ಬಾಂಢಗೆ (₹ 20 ಲಕ್ಷ ) ಮತ್ತು ಹಿಮಾಂಶು ಶರ್ಮಾ (₹ 20 ಲಕ್ಷ) ಅವರನ್ನು ಸೇರ್ಪಡೆ ಮಾಡಿಕೊಂಡಿತು.</p>.<p>ಹರಾಜು ಪ್ರಕ್ರಿಯೆಯ ಆರಂಭದಿಂದಲೂ ಆರ್ಸಿಬಿ ತಂಡವು ಬಹಳ ಎಚ್ಚರಿಕೆಯಿಂದ ಹಣ ಖರ್ಚು ಮಾಡಿತು. ದೊಡ್ಡಮಟ್ಟದ ಹೂಡಿಕೆಗೆ ಮುಂದಾಗಲಿಲ್ಲ.</p>.<p>ಕರ್ನಾಟಕದ ಮನೀಷ್ ಪಾಂಡೆ ಅಥವಾ ಮಯಂಕ್ ಅಗರವಾಲ್ ಅವರ ಖರೀದಿಯಲ್ಲಿಯೂ ಹೆಚ್ಚು ಹಣ ಹೂಡಲು ಮುಂದಾಗಲಿಲ್ಲ. ಇದರಿಂದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಆರ್ಸಿಬಿ ಕುರಿತ ವ್ಯಂಗ್ಯ ಟ್ವೀಟ್ಗಳು ಮತ್ತು ಮಿಮ್ಗಳು ಹರಿದಾಡಿದವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಇಂಗ್ಲೆಂಡ್ನ ರೀಸ್ ಟಾಪ್ಲಿ ಮತ್ತು ವಿಲ್ ಜ್ಯಾಕ್ಸ್ ಅವರನ್ನು ಖರೀದಿಸಿತು.</p>.<p>ಅಲ್ಲದೇ ಕರ್ನಾಟಕದ ಆಟಗಾರ ಮನೋಜ್ ಬಾಂಢಗೆ ಅವರನ್ನೂ ಸೇರ್ಪಡೆ ಮಾಡಿಕೊಂಡಿತು.</p>.<p>ವಿಲ್ ಜ್ಯಾಕ್ಸ್ ಅವರಿಗೆ ₹ 3.2 ಕೋಟಿ, ಟಾಪ್ಲಿಗೆ ₹ 1.2 ಕೋಟಿ ಮೌಲ್ಯ ನೀಡಿತು. ವಿಲ್ ಜ್ಯಾಕ್ಸ್ ಅವರ ಮೂಲಬೆಲೆ ₹ 1.5 ಕೋಟಿಯಾಗಿತ್ತು. ಟಾಪ್ಲಿ ಅವರಿಗೆ ₹ 75 ಲಕ್ಷ ಮೂಲಬೆಲೆ ನಿಗದಿ ಮಾಡಲಾಗಿತ್ತು.</p>.<p>ರಾಜನ್ ಕುಮಾರ್ (₹ 70 ಲಕ್ಷ), ಅವಿನಾಶ್ ಸಿಂಗ್ (₹ 60 ಲಕ್ಷ), ಮನೋಜ್ ಬಾಂಢಗೆ (₹ 20 ಲಕ್ಷ ) ಮತ್ತು ಹಿಮಾಂಶು ಶರ್ಮಾ (₹ 20 ಲಕ್ಷ) ಅವರನ್ನು ಸೇರ್ಪಡೆ ಮಾಡಿಕೊಂಡಿತು.</p>.<p>ಹರಾಜು ಪ್ರಕ್ರಿಯೆಯ ಆರಂಭದಿಂದಲೂ ಆರ್ಸಿಬಿ ತಂಡವು ಬಹಳ ಎಚ್ಚರಿಕೆಯಿಂದ ಹಣ ಖರ್ಚು ಮಾಡಿತು. ದೊಡ್ಡಮಟ್ಟದ ಹೂಡಿಕೆಗೆ ಮುಂದಾಗಲಿಲ್ಲ.</p>.<p>ಕರ್ನಾಟಕದ ಮನೀಷ್ ಪಾಂಡೆ ಅಥವಾ ಮಯಂಕ್ ಅಗರವಾಲ್ ಅವರ ಖರೀದಿಯಲ್ಲಿಯೂ ಹೆಚ್ಚು ಹಣ ಹೂಡಲು ಮುಂದಾಗಲಿಲ್ಲ. ಇದರಿಂದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಆರ್ಸಿಬಿ ಕುರಿತ ವ್ಯಂಗ್ಯ ಟ್ವೀಟ್ಗಳು ಮತ್ತು ಮಿಮ್ಗಳು ಹರಿದಾಡಿದವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>