<p><strong>ನವದೆಹಲಿ</strong>: ಮುಂದಿನ ತಿಂಗಳು ಕೋಲ್ಕತ್ತದ ಈಡನ್ ಗಾರ್ಡನ್ನಲ್ಲಿ ಆಯೋಜಿಸಿರುವ ಟೆಸ್ಟ್ ಪಂದ್ಯವನ್ನು ಹೊನಲು ಬೆಳಕಿನಲ್ಲಿ ನಡೆಸಲು ಬಿಸಿಸಿಐ ಉತ್ಸುಕವಾಗಿದೆ. ಈ ಕುರಿತು ನಮ್ಮ ಅಭಿಪ್ರಾಯವನ್ನೂ ಕೋರಿದೆ ಎಂದು ಬಾಂಗ್ಲಾ ಕ್ರಿಕೆಟ್ ಸಂಸ್ಥೆ (ಬಿಸಿಬಿ) ತಿಳಿಸಿದೆ.</p>.<p>‘ಅವರು (ಬಿಸಿಸಿಐ) ಪ್ರಸ್ತಾವ ಸಲ್ಲಿಸಿದ್ದಾರೆ. ಮೂರು ದಿನಗಳ ಹಿಂದೆ ನಮಗೆ ಪತ್ರ ಕೈತಲುಪಿದೆ. ಈ ಕುರಿತು ನಮ್ಮ ತಂಡದ ಆಟಗಾರರೊಂದಿಗೆ ಚರ್ಚೆ ನಡೆಸುತ್ತೇವೆ. ಶೀಘ್ರ ಅಂತಿಮ ನಿರ್ಧಾರ ಕೈಗೊಂಡು ಬಿಸಿಸಿಐಗೆ ತಿಳಿಸುತ್ತೇವೆ’ ಎಂದು ಬಿಸಿಬಿ (ಆಪರೇಷನ್ಸ್) ಮುಖ್ಯಸ್ಥ ಅಕ್ರಂ ಖಾನ್ ತಿಳಿಸಿದ್ಧಾರೆ.</p>.<p>ಈ ಕುರಿತು ಬಿಸಿಸಿಐ ನೂತನ ಅಧ್ಯಕ್ಷ, ಕೋಲ್ಕತ್ತದ ಸೌರವ್ ಗಂಗೂಲಿ ಅವರೂ ಒಲವು ತೋರಿದ್ದಾರೆ. ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಕೂಡ ಬಹುತೇಕ ಒಪ್ಪಿಗೆ ಸೂಚಿಸಿದ್ದಾರೆಂದು ಈಚೆಗೆ ವರದಿಯಾಗಿತ್ತು.</p>.<p>‘ಇದೊಂದು ತಾಂತ್ರಿಕ ವಿಷಯವಾಗಿದೆ. ಇದಕ್ಕಾಗಿ ತಂಡವು ಪೂರ್ವಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ. ಆದ್ದರಿಂದ ನಮ್ಮ ಸದಸ್ಯರು ಮತ್ತು ಆಟಗಾರರ ಅಭಿಪ್ರಾಯ ಪಡೆಯುವುದು ಅತಿ ಮುಖ್ಯವಾಗಿದೆ. ಅವರೊಂದಿಗೆ ಮಾತನಾಡಿದ ನಂತರವಷ್ಟೇ ನಿರ್ಧಾರ ಕೈಗೊಳ್ಳಲು ಸಾಧ್ಯ’ ಎಂದು ಬಿಸಿಬಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಿಜಾಮುದ್ದೀನ್ ಚೌಧರಿ ಹೇಳಿದ್ದಾರೆ.</p>.<p>ನವೆಂಬರ್ ಮೂರರಿಂದ ಬಾಂಗ್ಲಾ ದೇಶವು ಭಾರತದ ಎದುರು ಮೂರು ಟ್ವೆಂಟಿ–20 ಪಂದ್ಯಗಳ ಸರಣಿಯೊಂದಿಗೆ ಪ್ರವಾಸ ಆರಂಭಸಿಲಿದೆ. ಮೊದಲ ಟೆಸ್ಟ್ ಪಂದ್ಯವು 14ರಿಂದ ಇಂದೋರ್ನಲ್ಲಿ, ಎರಡನೇ ಟೆಸ್ಟ್ ಕೋಲ್ಕತ್ತದಲ್ಲಿ ನವೆಂಬರ್ 22ರಿಂದ ನಡೆಯಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಮುಂದಿನ ತಿಂಗಳು ಕೋಲ್ಕತ್ತದ ಈಡನ್ ಗಾರ್ಡನ್ನಲ್ಲಿ ಆಯೋಜಿಸಿರುವ ಟೆಸ್ಟ್ ಪಂದ್ಯವನ್ನು ಹೊನಲು ಬೆಳಕಿನಲ್ಲಿ ನಡೆಸಲು ಬಿಸಿಸಿಐ ಉತ್ಸುಕವಾಗಿದೆ. ಈ ಕುರಿತು ನಮ್ಮ ಅಭಿಪ್ರಾಯವನ್ನೂ ಕೋರಿದೆ ಎಂದು ಬಾಂಗ್ಲಾ ಕ್ರಿಕೆಟ್ ಸಂಸ್ಥೆ (ಬಿಸಿಬಿ) ತಿಳಿಸಿದೆ.</p>.<p>‘ಅವರು (ಬಿಸಿಸಿಐ) ಪ್ರಸ್ತಾವ ಸಲ್ಲಿಸಿದ್ದಾರೆ. ಮೂರು ದಿನಗಳ ಹಿಂದೆ ನಮಗೆ ಪತ್ರ ಕೈತಲುಪಿದೆ. ಈ ಕುರಿತು ನಮ್ಮ ತಂಡದ ಆಟಗಾರರೊಂದಿಗೆ ಚರ್ಚೆ ನಡೆಸುತ್ತೇವೆ. ಶೀಘ್ರ ಅಂತಿಮ ನಿರ್ಧಾರ ಕೈಗೊಂಡು ಬಿಸಿಸಿಐಗೆ ತಿಳಿಸುತ್ತೇವೆ’ ಎಂದು ಬಿಸಿಬಿ (ಆಪರೇಷನ್ಸ್) ಮುಖ್ಯಸ್ಥ ಅಕ್ರಂ ಖಾನ್ ತಿಳಿಸಿದ್ಧಾರೆ.</p>.<p>ಈ ಕುರಿತು ಬಿಸಿಸಿಐ ನೂತನ ಅಧ್ಯಕ್ಷ, ಕೋಲ್ಕತ್ತದ ಸೌರವ್ ಗಂಗೂಲಿ ಅವರೂ ಒಲವು ತೋರಿದ್ದಾರೆ. ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಕೂಡ ಬಹುತೇಕ ಒಪ್ಪಿಗೆ ಸೂಚಿಸಿದ್ದಾರೆಂದು ಈಚೆಗೆ ವರದಿಯಾಗಿತ್ತು.</p>.<p>‘ಇದೊಂದು ತಾಂತ್ರಿಕ ವಿಷಯವಾಗಿದೆ. ಇದಕ್ಕಾಗಿ ತಂಡವು ಪೂರ್ವಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ. ಆದ್ದರಿಂದ ನಮ್ಮ ಸದಸ್ಯರು ಮತ್ತು ಆಟಗಾರರ ಅಭಿಪ್ರಾಯ ಪಡೆಯುವುದು ಅತಿ ಮುಖ್ಯವಾಗಿದೆ. ಅವರೊಂದಿಗೆ ಮಾತನಾಡಿದ ನಂತರವಷ್ಟೇ ನಿರ್ಧಾರ ಕೈಗೊಳ್ಳಲು ಸಾಧ್ಯ’ ಎಂದು ಬಿಸಿಬಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಿಜಾಮುದ್ದೀನ್ ಚೌಧರಿ ಹೇಳಿದ್ದಾರೆ.</p>.<p>ನವೆಂಬರ್ ಮೂರರಿಂದ ಬಾಂಗ್ಲಾ ದೇಶವು ಭಾರತದ ಎದುರು ಮೂರು ಟ್ವೆಂಟಿ–20 ಪಂದ್ಯಗಳ ಸರಣಿಯೊಂದಿಗೆ ಪ್ರವಾಸ ಆರಂಭಸಿಲಿದೆ. ಮೊದಲ ಟೆಸ್ಟ್ ಪಂದ್ಯವು 14ರಿಂದ ಇಂದೋರ್ನಲ್ಲಿ, ಎರಡನೇ ಟೆಸ್ಟ್ ಕೋಲ್ಕತ್ತದಲ್ಲಿ ನವೆಂಬರ್ 22ರಿಂದ ನಡೆಯಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>