ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುತ್ತಯ್ಯ ಮುರಳೀಧರನ್‌ಗೆ ಆ್ಯಂಜಿಯೊಪ್ಲಾಸ್ಟಿ

Last Updated 19 ಏಪ್ರಿಲ್ 2021, 2:17 IST
ಅಕ್ಷರ ಗಾತ್ರ

ಚೆನ್ನೈ: ಶ್ರೀಲಂಕಾ ಕ್ರಿಕೆಟ್‌ನ ಮಾಜಿ ಸ್ಪಿನ್ನರ್‌ ಮುತ್ತಯ್ಯ ಮುರಳೀಧರನ್ ಅವರಿಗೆ ಹೃದಯದಲ್ಲಿ ನೋವು ಕಾಣಿಸಿಕೊಂಡಿದ್ದು, ಭಾನುವಾರ ಇಲ್ಲಿಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಿಗೆ ಆ್ಯಂಜಿ ಯೊಪ್ಲಾಸ್ಟಿ ನಡೆಸಲಾಗಿದೆ.

ಮುರಳೀಧರನ್‌ ಐಪಿಎಲ್ ಫ್ರಾಂಚೈಸ್‌ ಸನ್‌ರೈಸರ್ಸ್‌ ಹೈದರಾ ಬಾದ್‌ಗೆ ಬೌಲಿಂಗ್ ಕೋಚ್ ಆಗಿದ್ದಾರೆ. ಸದ್ಯ ಅವರಿಗೆ ಸ್ಟೆಂಟ್‌ ಅಳವಡಿಸಲಾ ಗಿದ್ದು ಆಸ್ಪತ್ರೆಯಿಂದ ಮರಳಿದ ನಂತರ ತಂಡವನ್ನು
ಸೇರಿಕೊಳ್ಳಲಿದ್ದಾರೆ ಎಂದು ಇಎಸ್‌
ಪಿಎನ್‌ಕ್ರಿಕ್‌ ಇನ್ಫೊ ವರದಿ ಮಾಡಿದೆ. 43 ವರ್ಷದ ಮುರಳೀಧರನ್‌ ಶ್ರೀಲಂಕಾ ಪರ 133 ಟೆಸ್ಟ್ ಮತ್ತು 350 ಏಕದಿನ ಪಂದ್ಯಗಳನ್ನು ಆಡಿದ್ದಾರೆ.

ಟೆಸ್ಟ್‌ನಲ್ಲಿ 800 ಮತ್ತು ಏಕದಿನ ಪಂದ್ಯಗಳಲ್ಲಿ 534 ವಿಕೆಟ್ ಪಡೆದಿದ್ದಾರೆ. 12 ಟಿ20 ಪಂದ್ಯಗಳಿಂದ 13 ವಿಕೆಟ್‌ ಗಳಿಸಿದ್ದಾರೆ.

2015ರಿಂದ ಅವರು ಸನ್‌ರೈಸರ್ಸ್‌ ಹೈದರಾಬಾದ್ ತಂಡಕ್ಕೆ ಬೌಲಿಂಗ್‌ ಕೋಚ್ ಹಾಗೂ ಮೆಂಟರ್ ಆಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT