<p><strong>ಬೆಂಗಳೂರು</strong>: ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿಯ ಕ್ವಾರ್ಟರ್ಫೈನಲ್ ಪಂದ್ಯಗಳು ಬುಧವಾರ ಬೆಂಗಳೂರಿನಲ್ಲಿ ನಡೆಯಲಿವೆ. </p>.<p>ಆಲೂರಿನಲ್ಲಿರುವ ಕೆಎಸ್ಸಿಎ ಕ್ರೀಡಾಂಗಣದಲ್ಲಿ ಎರಡು ಮತ್ತು ಇನ್ನುಳಿದ ಎರಡು ಪಂದ್ಯಗಳು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿವೆ. </p>.<p>ಭಾರತ ತಂಡದ ಆಟಗಾರರಾದ ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಅಜಿಂಕ್ಯ ರಹಾನೆ, ಶಿವಂ ದುಬೆ, ಶಾರ್ದೂಲ್ ಠಾಕೂರ್ ಅವರು ಇರುವ ಮುಂಬೈ ತಂಡವು ಆಲೂರಿನ ಕ್ರೀಡಾಂಗಣದಲ್ಲಿ ವಿದರ್ಭ ತಂಡವನ್ನು ಎದುರಿಸಲಿದೆ. </p>.<p>ವಿದರ್ಭ ತಂಡದಲ್ಲಿ ಕರ್ನಾಟಕದ ಕರುಣ್ ನಾಯರ್ ಅವರು ಆಡು್ತಿದ್ಆರೆ. ವೇಗಿ ಉಮೇಶ್ ಯಾದವ್, ಜಿತೇಶ್ ಶರ್ಮಾ, ಶುಭಂ ದುಬೆ ಅವರು ತಂಡದಲ್ಲಿರುವ ಪ್ರಮುಖರಾಗಿದ್ದಾರೆ. </p>.<p>ಇದೇ ಕ್ರೀಡಾಂಗಣದಲ್ಲಿ ನಡೆಯುವ ಇನ್ನೊಂದು ಪಂದ್ಯದಲ್ಲಿ ಮಧ್ಯಪ್ರದೇಶ ಹಾಗೂ ಸೌರಾಷ್ಟ್ರ ಮುಖಾಮುಖಿಯಾಗಲಿವೆ. </p>.<p>ಕಳೆದ ಬಾರಿಯ ರನ್ನರ್ಸ್ ಅಪ್ ಬರೋಡಾ ತಂಡವು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬಂಗಾಳ ಎದುರು ಆಡಲಿದೆ. ಇನ್ನೊಂದು ಪಂದ್ಯದಲ್ಲಿ ಡೆಲ್ಲಿಮತ್ತು ಉತ್ತರಪ್ರದೇಶ ತಂಡಗಳು ಸೆಣಸಲಿವೆ. </p>.<p><strong>ಕ್ವಾರ್ಟರ್ಫೈನಲ್ ಪಂದ್ಯಗಳು ಇಂದು</strong></p>.<p>ಮಧ್ಯಪ್ರದೇಶ–ಸೌರಾಷ್ಟ್ರ (ಬೆಳಿಗ್ಗೆ 9ರಿಂದ)</p>.<p>ಮುಂಬೈ–ವಿದರ್ಭ (ಮಧ್ಯಾಹ್ನ 1.30ರಿಂದ)</p>.<p><strong>ಸ್ಥಳ:</strong> ಕೆಎಸ್ಸಿಎ ಕ್ರೀಡಾಂಗಣ, ಅಲೂರು</p>.<p>ಬರೋಡಾ–ಬಂಗಾಳ (ಬೆಳಿಗ್ಗೆ 11)</p>.<p>ಡೆಲ್ಲಿ–ಉತ್ತರಪ್ರದೇಶ (ಮಧ್ಯಾಹ್ನ 1.30)</p>.<p><strong>ಸ್ಥಳ:</strong> ಚಿನ್ನಸ್ವಾಮಿ ಕ್ರೀಡಾಂಗಣ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿಯ ಕ್ವಾರ್ಟರ್ಫೈನಲ್ ಪಂದ್ಯಗಳು ಬುಧವಾರ ಬೆಂಗಳೂರಿನಲ್ಲಿ ನಡೆಯಲಿವೆ. </p>.<p>ಆಲೂರಿನಲ್ಲಿರುವ ಕೆಎಸ್ಸಿಎ ಕ್ರೀಡಾಂಗಣದಲ್ಲಿ ಎರಡು ಮತ್ತು ಇನ್ನುಳಿದ ಎರಡು ಪಂದ್ಯಗಳು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿವೆ. </p>.<p>ಭಾರತ ತಂಡದ ಆಟಗಾರರಾದ ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಅಜಿಂಕ್ಯ ರಹಾನೆ, ಶಿವಂ ದುಬೆ, ಶಾರ್ದೂಲ್ ಠಾಕೂರ್ ಅವರು ಇರುವ ಮುಂಬೈ ತಂಡವು ಆಲೂರಿನ ಕ್ರೀಡಾಂಗಣದಲ್ಲಿ ವಿದರ್ಭ ತಂಡವನ್ನು ಎದುರಿಸಲಿದೆ. </p>.<p>ವಿದರ್ಭ ತಂಡದಲ್ಲಿ ಕರ್ನಾಟಕದ ಕರುಣ್ ನಾಯರ್ ಅವರು ಆಡು್ತಿದ್ಆರೆ. ವೇಗಿ ಉಮೇಶ್ ಯಾದವ್, ಜಿತೇಶ್ ಶರ್ಮಾ, ಶುಭಂ ದುಬೆ ಅವರು ತಂಡದಲ್ಲಿರುವ ಪ್ರಮುಖರಾಗಿದ್ದಾರೆ. </p>.<p>ಇದೇ ಕ್ರೀಡಾಂಗಣದಲ್ಲಿ ನಡೆಯುವ ಇನ್ನೊಂದು ಪಂದ್ಯದಲ್ಲಿ ಮಧ್ಯಪ್ರದೇಶ ಹಾಗೂ ಸೌರಾಷ್ಟ್ರ ಮುಖಾಮುಖಿಯಾಗಲಿವೆ. </p>.<p>ಕಳೆದ ಬಾರಿಯ ರನ್ನರ್ಸ್ ಅಪ್ ಬರೋಡಾ ತಂಡವು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬಂಗಾಳ ಎದುರು ಆಡಲಿದೆ. ಇನ್ನೊಂದು ಪಂದ್ಯದಲ್ಲಿ ಡೆಲ್ಲಿಮತ್ತು ಉತ್ತರಪ್ರದೇಶ ತಂಡಗಳು ಸೆಣಸಲಿವೆ. </p>.<p><strong>ಕ್ವಾರ್ಟರ್ಫೈನಲ್ ಪಂದ್ಯಗಳು ಇಂದು</strong></p>.<p>ಮಧ್ಯಪ್ರದೇಶ–ಸೌರಾಷ್ಟ್ರ (ಬೆಳಿಗ್ಗೆ 9ರಿಂದ)</p>.<p>ಮುಂಬೈ–ವಿದರ್ಭ (ಮಧ್ಯಾಹ್ನ 1.30ರಿಂದ)</p>.<p><strong>ಸ್ಥಳ:</strong> ಕೆಎಸ್ಸಿಎ ಕ್ರೀಡಾಂಗಣ, ಅಲೂರು</p>.<p>ಬರೋಡಾ–ಬಂಗಾಳ (ಬೆಳಿಗ್ಗೆ 11)</p>.<p>ಡೆಲ್ಲಿ–ಉತ್ತರಪ್ರದೇಶ (ಮಧ್ಯಾಹ್ನ 1.30)</p>.<p><strong>ಸ್ಥಳ:</strong> ಚಿನ್ನಸ್ವಾಮಿ ಕ್ರೀಡಾಂಗಣ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>