ಭಾರ್ಗವ್ ಮೆರಾಯ್ ಮತ್ತು ರುಜುಲ್ ಭಟ್ ಮೂರನೇ ವಿಕೆಟ್ಗೆ 134 ರನ್ಗಳನ್ನು ಸೇರಿಸಿ ತಂಡವನ್ನು ಇನಿಂಗ್ಸ್ ಸೋಲಿನ ಆತಂಕದಿಂದ ಪಾರು ಮಾಡಿದರು. 49ನೇ ಓವರ್ನಲ್ಲಿ ಈ ಜೊತೆಯಾಟವನ್ನು ಮುರಿದ ರೋನಿತ್ ಮೋರೆ ಕರ್ನಾಟಕ ಪಾಳಯದಲ್ಲಿ ಸಂಭ್ರಮ ಮೂಡಿಸಿದರು. ಭಾರ್ಗವ್ ಮೆರಾಯ್ (74; 130 ಎ, 8 ಬೌಂ) ಔಟಾದ ನಂತರವೂ ರುಜುಲ್ ಭಟ್ (82; 220ಎ, 8 ಬೌಂ) ಅವರ ಬ್ಯಾಟಿಂಗ್ ವೈಭವ ಮುಂದುವರಿಯಿತು. ನಾಲ್ಕನೇ ವಿಕೆಟ್ಗೆ ಅವರೊಂದಿಗೆ 47 ರನ್ ಸೇರಿಸಿದ ಮನ್ಪ್ರೀತ್ ಜುನೇಜ ಕ್ರೀಸ್ನಲ್ಲಿದ್ದಾರೆ.