<p><strong>ಬೆಂಗಳೂರು</strong>: ‘ಆಸ್ಟ್ರೇಲಿಯಾ ತಂಡವನ್ನು ಅದರ ತವರಿನಲ್ಲಿ ಎದುರಿಸುವುದರಿಂದ ನಾವು ಆಟದಲ್ಲಿ ಸುಧಾರಿಸಬೇಕಾಗಿರುವುದು ಎಲ್ಲೆಲ್ಲಿ ಎಂಬುದನ್ನು ತಿಳಿದುಕೊಳ್ಳಲು ನೆರವಾಗಲಿದೆ. ಮುಂದಿನ ತಿಂಗಳ ಏಷ್ಯಾ ಕಪ್ಗೆ ಸಿದ್ಧತೆಗೂ ನಮಗೆ ಅನುಕೂಲವಾಗಲಿದೆ’ ಎಂದು ಭಾರತ ಹಾಕಿ ತಂಡದ ನಾಯಕ ಹರ್ಮನ್ಪ್ರೀತ್ ಸಿಂಗ್ ಶುಕ್ರವಾರ ತಿಳಿಸಿದರು.</p>.<p>ನಾಲ್ಕು ಪಂದ್ಯಗಳ ಸರಣಿಯನ್ನು ಆಡಲು ಭಾರತ ತಂಡ ಶುಕ್ರವಾರ ಬೆಳಗಿನ ಜಾವ ಆಸ್ಟ್ರೇಲಿಯಾಕ್ಕೆ ಪಯಣಿಸಿತು. ಪಂದ್ಯಗಳು ಪರ್ತ್ ಹಾಕಿ ಕ್ರೀಡಾಂಗಣದಲ್ಲಿ ಆಗಸ್ಟ್ 15, 16, 19 ಮತ್ತು 21ರಂದು ಪಂದ್ಯಗಳು ನಡೆಯಲಿವೆ.</p>.<p>‘ಆಸ್ಟ್ರೇಲಿಯಾ ತಂಡವನ್ನು ಅವರದೇ ನೆಲದಲ್ಲಿ ಎದುರಿಸುವುದು ದೊಡ್ಡ ಸವಾಲು. ಈಗ ಏಷ್ಯಾ ಕಪ್ ಸಿದ್ಧತೆಯ ಹಂತದಲ್ಲಿ ನಮಗೆ ಅಗತ್ಯವಿದ್ದುದೂ ಇಂಥ ಸರಣಿ’ ಎಂದು ತಂಡ ನಿರ್ಗಮಿಸುವ ಮೊದಲು ಭಾರತ ತಂಡದ ನಾಯಕ ತಿಳಿಸಿದರು.</p>.<p>‘ಈ ಸರಣಿಯು ಏಷ್ಯಾ ಕಪ್ಗೆ ನಮ್ಮ ಸಿದ್ಧತೆಯ ಪ್ರಮುಖ ಭಾಗವಾಗಿದೆ ಎಂದು ಪರಿಗಣಿಸಿದ್ದೇವೆ. ಪ್ರಬಲ ಎದುರಾಳಿಯ ವಿರುದ್ಧ ತಂಡವಾಗಿ ಸುಧಾರಣೆ ಕಂಡುಕೊಳ್ಳುವುದರತ್ತ ಗಮನ ನೀಡುತ್ತಿದ್ದೇವೆ. ರಾಜಗೀರ್ಗೆ ತೆರಳುವ ಮೊದಲು ನಮಗೆ ಬೇಕಿದ್ದ ಮಾನಸಿಕ ಸಿದ್ಧತೆ ಕಂಡುಕೊಳ್ಳಲಿದ್ದೇವೆ’ ಎಂದರು.</p>.<p>ತಂಡದಲ್ಲಿ ಅನುಭವಿ ಆಟಗಾರರ ಜೊತೆ ಉದಯೋನ್ಮುಖ ಆಟಗಾರರ ಹದವಾದ ಮಿಳಿತವಿದೆ. ಏಷ್ಯಾ ಕಪ್ಗೆ ತಂಡವನ್ನು ಅಂತಿಮಗೊಳಿಸಲೂ ಈ ಸರಣಿ ನೆರವಾಗಲಿದೆ.</p>.<p>ಏಷ್ಯಾ ಕಪ್ ಟೂರ್ನಿಯು ರಾಜಗೀರ್ನಲ್ಲಿ ಆ. 29ರಿಂದ ನಡೆಯಲಿದೆ. ಈ ಟೂರ್ನಿಯ ವಿಜೇತರು ವಿಶ್ವಕಪ್ಗೆ ನೇರ ಅರ್ಹತೆ ಪಡೆಯಲಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ‘ಆಸ್ಟ್ರೇಲಿಯಾ ತಂಡವನ್ನು ಅದರ ತವರಿನಲ್ಲಿ ಎದುರಿಸುವುದರಿಂದ ನಾವು ಆಟದಲ್ಲಿ ಸುಧಾರಿಸಬೇಕಾಗಿರುವುದು ಎಲ್ಲೆಲ್ಲಿ ಎಂಬುದನ್ನು ತಿಳಿದುಕೊಳ್ಳಲು ನೆರವಾಗಲಿದೆ. ಮುಂದಿನ ತಿಂಗಳ ಏಷ್ಯಾ ಕಪ್ಗೆ ಸಿದ್ಧತೆಗೂ ನಮಗೆ ಅನುಕೂಲವಾಗಲಿದೆ’ ಎಂದು ಭಾರತ ಹಾಕಿ ತಂಡದ ನಾಯಕ ಹರ್ಮನ್ಪ್ರೀತ್ ಸಿಂಗ್ ಶುಕ್ರವಾರ ತಿಳಿಸಿದರು.</p>.<p>ನಾಲ್ಕು ಪಂದ್ಯಗಳ ಸರಣಿಯನ್ನು ಆಡಲು ಭಾರತ ತಂಡ ಶುಕ್ರವಾರ ಬೆಳಗಿನ ಜಾವ ಆಸ್ಟ್ರೇಲಿಯಾಕ್ಕೆ ಪಯಣಿಸಿತು. ಪಂದ್ಯಗಳು ಪರ್ತ್ ಹಾಕಿ ಕ್ರೀಡಾಂಗಣದಲ್ಲಿ ಆಗಸ್ಟ್ 15, 16, 19 ಮತ್ತು 21ರಂದು ಪಂದ್ಯಗಳು ನಡೆಯಲಿವೆ.</p>.<p>‘ಆಸ್ಟ್ರೇಲಿಯಾ ತಂಡವನ್ನು ಅವರದೇ ನೆಲದಲ್ಲಿ ಎದುರಿಸುವುದು ದೊಡ್ಡ ಸವಾಲು. ಈಗ ಏಷ್ಯಾ ಕಪ್ ಸಿದ್ಧತೆಯ ಹಂತದಲ್ಲಿ ನಮಗೆ ಅಗತ್ಯವಿದ್ದುದೂ ಇಂಥ ಸರಣಿ’ ಎಂದು ತಂಡ ನಿರ್ಗಮಿಸುವ ಮೊದಲು ಭಾರತ ತಂಡದ ನಾಯಕ ತಿಳಿಸಿದರು.</p>.<p>‘ಈ ಸರಣಿಯು ಏಷ್ಯಾ ಕಪ್ಗೆ ನಮ್ಮ ಸಿದ್ಧತೆಯ ಪ್ರಮುಖ ಭಾಗವಾಗಿದೆ ಎಂದು ಪರಿಗಣಿಸಿದ್ದೇವೆ. ಪ್ರಬಲ ಎದುರಾಳಿಯ ವಿರುದ್ಧ ತಂಡವಾಗಿ ಸುಧಾರಣೆ ಕಂಡುಕೊಳ್ಳುವುದರತ್ತ ಗಮನ ನೀಡುತ್ತಿದ್ದೇವೆ. ರಾಜಗೀರ್ಗೆ ತೆರಳುವ ಮೊದಲು ನಮಗೆ ಬೇಕಿದ್ದ ಮಾನಸಿಕ ಸಿದ್ಧತೆ ಕಂಡುಕೊಳ್ಳಲಿದ್ದೇವೆ’ ಎಂದರು.</p>.<p>ತಂಡದಲ್ಲಿ ಅನುಭವಿ ಆಟಗಾರರ ಜೊತೆ ಉದಯೋನ್ಮುಖ ಆಟಗಾರರ ಹದವಾದ ಮಿಳಿತವಿದೆ. ಏಷ್ಯಾ ಕಪ್ಗೆ ತಂಡವನ್ನು ಅಂತಿಮಗೊಳಿಸಲೂ ಈ ಸರಣಿ ನೆರವಾಗಲಿದೆ.</p>.<p>ಏಷ್ಯಾ ಕಪ್ ಟೂರ್ನಿಯು ರಾಜಗೀರ್ನಲ್ಲಿ ಆ. 29ರಿಂದ ನಡೆಯಲಿದೆ. ಈ ಟೂರ್ನಿಯ ವಿಜೇತರು ವಿಶ್ವಕಪ್ಗೆ ನೇರ ಅರ್ಹತೆ ಪಡೆಯಲಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>