ವಿಧಾನಸಭೆಯಲ್ಲಿ ಮಂಗಳವಾರ ಶೂನ್ಯವೇಳೆಯಲ್ಲಿ ದೊಡ್ಡಬಳ್ಳಾಪುರ ಶಾಸಕ ವೆಂಕಟರಮಣಯ್ಯ ಮತ್ತು ಆನೇಕಲ್ ಶಾಸಕ ಶಿವಣ್ಣ ಈ ವಿಷಯ ಪ್ರಸ್ತಾಪಿಸಿ, ‘ದೊಡ್ಡಬಳ್ಳಾಪುರ, ಆನೆಕಲ್ಲು ಕ್ಷೇತ್ರಗಳಲ್ಲಿ ಘನತ್ಯಾಜ್ಯ ಸಂಗ್ರಹಣೆಯ ಕ್ವಾರಿಗಳು ಹಾಗೂ ಟೆರ್ರಾಫಾರ್ಮ್ ಗಳಿಂದ ನಿವಾಸಿಗಳಿಗೆ ಭಾರಿ ತೊಂದರೆಯಾಗುತ್ತಿದೆ. ಇದನ್ನು ವಿರೋಧಿಸಿ ನಿವಾಸಿಗಳೂ ಘನತ್ಯಾಜ್ಯ ಹೋರಾಟ ಸಮಿತಿ ರಚಿಸಿ
ಪ್ರತಿಭಟನೆ ನಡೆಸುತ್ತಿದ್ದಾರೆ’ ಎಂದು ಹೇಳಿದರು.