<p><strong>ಮನಿಲಾ</strong>:ಫಿಲಿಪ್ಪೀನ್ಸ್ಗೆ ಐದು ದಿನಗಳ ಪ್ರವಾಸ ಕೈಗೊಂಡಿರುವ ರಾಷ್ಟ್ರಪತಿ ರಾಮನಾಥ ಕೋವಿಂದ್, ಫಿಲಿಪ್ಪೀನ್ಸ್ ಅಧ್ಯಕ್ಷರೊಡ್ರಿಗೊ ಡುಟರ್ಟೆ ಅವರಿಗೆ ದೇವತೆ ‘ತಾರಾ’ ವಿಗ್ರಹವನ್ನು ಶುಕ್ರವಾರ ಉಡುಗೊರೆಯಾಗಿ ನೀಡಿದರು.</p>.<p>‘ಎರಡೂ ದೇಶಗಳ ನಡುವಿನ ಐತಿಹಾಸಿಕ, ಸಾಂಸ್ಕೃತಿಕ ಸಂಬಂಧದ ಜ್ಞಾಪಕಾರ್ಥ ರಾಷ್ಟ್ರಪತಿ ಕೋವಿಂದ್ ಈ ಉಡುಗೊರೆ ನೀಡಿದರು. ಹಿಂದೂ ಮತ್ತು ಬೌದ್ಧ ಧರ್ಮದಲ್ಲಿ ದೇವತೆ ‘ತಾರಾ’ಗೆ ಮಹತ್ವದ ಸ್ಥಾನವಿದ್ದು, ಶಕ್ತಿ ದೇವತೆ ಎಂದು ಎರಡೂ ಧರ್ಮೀಯರು ನಂಬುತ್ತಾರೆ’ ಎಂದು ರಾಷ್ಟ್ರಪತಿ ಭವನ ಟ್ವೀಟ್ ಮಾಡಿದೆ.</p>.<p>ಭಯೋತ್ಪಾದನೆ ನಿರ್ಮೂಲನೆ, ರಕ್ಷಣೆಮತ್ತು ಸಾಗರ ಭದ್ರತೆಯಲ್ಲಿ ಸಹಭಾಗಿತ್ವ ಕುರಿತು ಉಭಯ ರಾಷ್ಟ್ರಗಳ ನಾಯಕರು ಚರ್ಚೆ ನಡೆಸಿದರು ಎಂದೂ ಟ್ವೀಟ್ನಲ್ಲಿ ವಿವರಿಸಲಾಗಿದೆ.</p>.<p><strong>ಯಕೃತ್ ಕಸಿಗೊಳಗಾದ ಮಕ್ಕಳ ಪೋಷಕರೊಂದಿಗೆ ಸಂವಾದ</strong><br />ಭಾರತದಲ್ಲಿ ಯಶಸ್ವಿಯಾಗಿ ಯಕೃತ್ ಕಸಿ ಮಾಡಿಸಿಕೊಂಡಿರುವ ಫಿಲಿಪ್ಪೀನ್ಸ್ನ ಮಕ್ಕಳ ಪೋಷಕರೊಂದಿಗೆ ಅಧ್ಯಕ್ಷ ರಾಮನಾಥ ಕೋವಿಂದ್ ಶನಿವಾರ ಸಂವಾದ ನಡೆಸಿದರು.</p>.<p>ಆಗ್ನೇಯ ಏಷ್ಯಾದ ಪ್ರಮುಖ ದೇಶದೊಂದಿಗೆ ಭಾರತದ ಸಂಬಂಧ ಗಟ್ಟಿಗೊಂಡಿರುವುದಕ್ಕೆ ಅವರು ಸಂತಸ ವ್ಯಕ್ತಪಡಿಸಿದರು.</p>.<p>ಫಿಲಿಪ್ಪೀನ್ಸ್–ಇಂಡಿಯಾ ಯಕೃತ್ ಕಸಿ ಕಾರ್ಯಕ್ರಮದ ಅಡಿಯಲ್ಲಿ ಭಾರತದಲ್ಲಿ ಕಳೆದ 28 ತಿಂಗಳಲ್ಲಿ ಫಿಲಿಪ್ಪೀನ್ಸ್ನ 35 ಶಿಶುಗಳಿಗೆ ಯಕೃತ್ ಕಸಿ ಮಾಡಲಾಗಿದೆ.</p>.<p>‘ಭಾರತ ಮತ್ತು ಫಿಲಿಪ್ಪೀನ್ಸ್ ನಡುವೆ ಮಾನವೀಯ ಸಂಬಂಧಗಳು ಗಟ್ಟಿಗೊಂಡಿವೆ ಎಂಬುದಕ್ಕೆ ಇದೊಂದು ಉದಾಹರಣೆ. ಈ ಮಕ್ಕಳು ಆರೋಗ್ಯವಂತರಾಗಿ ಬಾಳಲಿ’ ಎಂದು ಅವರು ಟ್ವೀಟ್ನಲ್ಲಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮನಿಲಾ</strong>:ಫಿಲಿಪ್ಪೀನ್ಸ್ಗೆ ಐದು ದಿನಗಳ ಪ್ರವಾಸ ಕೈಗೊಂಡಿರುವ ರಾಷ್ಟ್ರಪತಿ ರಾಮನಾಥ ಕೋವಿಂದ್, ಫಿಲಿಪ್ಪೀನ್ಸ್ ಅಧ್ಯಕ್ಷರೊಡ್ರಿಗೊ ಡುಟರ್ಟೆ ಅವರಿಗೆ ದೇವತೆ ‘ತಾರಾ’ ವಿಗ್ರಹವನ್ನು ಶುಕ್ರವಾರ ಉಡುಗೊರೆಯಾಗಿ ನೀಡಿದರು.</p>.<p>‘ಎರಡೂ ದೇಶಗಳ ನಡುವಿನ ಐತಿಹಾಸಿಕ, ಸಾಂಸ್ಕೃತಿಕ ಸಂಬಂಧದ ಜ್ಞಾಪಕಾರ್ಥ ರಾಷ್ಟ್ರಪತಿ ಕೋವಿಂದ್ ಈ ಉಡುಗೊರೆ ನೀಡಿದರು. ಹಿಂದೂ ಮತ್ತು ಬೌದ್ಧ ಧರ್ಮದಲ್ಲಿ ದೇವತೆ ‘ತಾರಾ’ಗೆ ಮಹತ್ವದ ಸ್ಥಾನವಿದ್ದು, ಶಕ್ತಿ ದೇವತೆ ಎಂದು ಎರಡೂ ಧರ್ಮೀಯರು ನಂಬುತ್ತಾರೆ’ ಎಂದು ರಾಷ್ಟ್ರಪತಿ ಭವನ ಟ್ವೀಟ್ ಮಾಡಿದೆ.</p>.<p>ಭಯೋತ್ಪಾದನೆ ನಿರ್ಮೂಲನೆ, ರಕ್ಷಣೆಮತ್ತು ಸಾಗರ ಭದ್ರತೆಯಲ್ಲಿ ಸಹಭಾಗಿತ್ವ ಕುರಿತು ಉಭಯ ರಾಷ್ಟ್ರಗಳ ನಾಯಕರು ಚರ್ಚೆ ನಡೆಸಿದರು ಎಂದೂ ಟ್ವೀಟ್ನಲ್ಲಿ ವಿವರಿಸಲಾಗಿದೆ.</p>.<p><strong>ಯಕೃತ್ ಕಸಿಗೊಳಗಾದ ಮಕ್ಕಳ ಪೋಷಕರೊಂದಿಗೆ ಸಂವಾದ</strong><br />ಭಾರತದಲ್ಲಿ ಯಶಸ್ವಿಯಾಗಿ ಯಕೃತ್ ಕಸಿ ಮಾಡಿಸಿಕೊಂಡಿರುವ ಫಿಲಿಪ್ಪೀನ್ಸ್ನ ಮಕ್ಕಳ ಪೋಷಕರೊಂದಿಗೆ ಅಧ್ಯಕ್ಷ ರಾಮನಾಥ ಕೋವಿಂದ್ ಶನಿವಾರ ಸಂವಾದ ನಡೆಸಿದರು.</p>.<p>ಆಗ್ನೇಯ ಏಷ್ಯಾದ ಪ್ರಮುಖ ದೇಶದೊಂದಿಗೆ ಭಾರತದ ಸಂಬಂಧ ಗಟ್ಟಿಗೊಂಡಿರುವುದಕ್ಕೆ ಅವರು ಸಂತಸ ವ್ಯಕ್ತಪಡಿಸಿದರು.</p>.<p>ಫಿಲಿಪ್ಪೀನ್ಸ್–ಇಂಡಿಯಾ ಯಕೃತ್ ಕಸಿ ಕಾರ್ಯಕ್ರಮದ ಅಡಿಯಲ್ಲಿ ಭಾರತದಲ್ಲಿ ಕಳೆದ 28 ತಿಂಗಳಲ್ಲಿ ಫಿಲಿಪ್ಪೀನ್ಸ್ನ 35 ಶಿಶುಗಳಿಗೆ ಯಕೃತ್ ಕಸಿ ಮಾಡಲಾಗಿದೆ.</p>.<p>‘ಭಾರತ ಮತ್ತು ಫಿಲಿಪ್ಪೀನ್ಸ್ ನಡುವೆ ಮಾನವೀಯ ಸಂಬಂಧಗಳು ಗಟ್ಟಿಗೊಂಡಿವೆ ಎಂಬುದಕ್ಕೆ ಇದೊಂದು ಉದಾಹರಣೆ. ಈ ಮಕ್ಕಳು ಆರೋಗ್ಯವಂತರಾಗಿ ಬಾಳಲಿ’ ಎಂದು ಅವರು ಟ್ವೀಟ್ನಲ್ಲಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>