’ಕಳೆದ ವರ್ಷದ ಸೆಪ್ಟೆಂಬರ್ನಿಂದ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ‘ ಎಂದು ವೇಣುಗೋಪಾಲ ಹೇಳಿದಾಗ, ’ಸಾಕಷ್ಟು ಸಮಯ ತೆಗೆದುಕೊಂಡಿದ್ದೀರಿ. ಈ ವರೆಗೆ ಏನು ಕ್ರಮ ಕೈಗೊಂಡಿದ್ದೀರಿ‘ ಎಂದು ಪೀಠ ಪ್ರಶ್ನಿಸಿತು. ಅಟಾರ್ನಿ ಜನರಲ್ ವೇಣುಗೋಪಾಲ ಅವರು ಪುನಃ ಇದೇ ಮಾತನ್ನು ಹೇಳಿದಾಗ ’ಕಳೆದ ಸೆಪ್ಟೆಂಬರ್ ನಿಂದ ಈವರೆಗೆ ಏನು ಮಾಡಿದ್ದೀರಿ ಎಂಬ ಬಗ್ಗೆ ದಾಖಲೆಗಳನ್ನು ನೀಡಿ‘ ಎಂದು ಕಟುವಾಗಿ ಹೇಳಿತು.