ಅಗ್ನಿಶಾಮಕ ದಳದ ಹಿರಿಯ ಅಧಿಕಾರಿ ಪ್ರಭಾತ್ ರಹಂಗ್ಡೇಲ್ ಮಾತನಾಡಿ, ‘ದುರಂತ ಸಂಭವಿಸಿದ ಕೆಲವು ಸಂದರ್ಭಗಳಲ್ಲಿ ದಟ್ಟ ಹೊಗೆ, ಗಾಳಿಯ(ಆಮ್ಲಜನಕ) ಕೊರತೆಯಿಂದ ಸಿಬಂದಿಯ ಕಣ್ಣಿಗೆ ಏನೂ ಕಾಣಿಸದೆ ಜೀವಕ್ಕೆ ಆಪತ್ತು ಎದುರಾಗುತ್ತದೆ. ಅಂತಹ ಪರಿಸ್ಥಿತಿಗಳಲ್ಲಿ ರೋಬೋಟ್ ಸಿಬ್ಬಂದಿಗೆ ನೆರವಾಗುತ್ತದೆ. ಸದ್ಯ ನಮ್ಮಲ್ಲಿ ಒಂದೇ ಒಂದು ರೋಬೋಟ್ ಲಭ್ಯವಿದೆ’ ಎಂದು ತಿಳಿಸಿದ್ದಾರೆ.