<p><strong>ಚಂಡೀಘಡ: </strong>ಸಿಖ್ಖರ ಧಾರ್ಮಿಕ ಮೆರವಣಿಗೆ ಸಂದರ್ಭ ಟ್ರಾಕ್ಟರ್ನಲ್ಲಿ ಇರಿಸಿದ್ದ ರಾಸಾಯನಿಕ ಸ್ಫೋಟಗೊಂಡ ಪರಿಣಾಮ ಇಬ್ಬರು ಮೃತಪಟ್ಟು ಹಲವು ಮಂದಿ ಗಾಯಗೊಂಡಿರುವ ಘಟನೆ ಪಂಚಾಬಿನ ತರ್ನ್ ತರನ್ ಜಿಲ್ಲೆಯದಲೇಕೆ ಗ್ರಾಮದಲ್ಲಿ ಶನಿವಾರ ನಡೆದಿದೆ.</p>.<p>ಯುವಕರು ಪಹುವಿಂಡ್ ಗ್ರಾಮದಿಂದ ಚಬ್ಬಾ ಗ್ರಾಮದ ಗುರುದ್ವಾರ ತಹ್ಲಾ ಸಾಹಿಬ್ ಬಳಿಗೆ ಸಿಖ್ ಸಂಪ್ರದಾಯದಂತೆ ಹಾಡು ಹೇಳಿಕೊಂಡು ಮೆರವಣಿಗೆಯಲ್ಲಿ ತೆರಳುತ್ತಿದ್ದರು. ಈ ಸಮಯದಲ್ಲಿ ಸಂಜೆ ವೇಳೆಗೆ ಇದ್ದಕ್ಕಿದ್ದಂತೆ ಟ್ರಾಕ್ಟರ್ನ ಹಿಂಬದಿಯಿಂದ ಭಾರಿ ಸ್ಫೋಟದ ಶಬ್ದ ಕೇಳಿಬಂತು. ಕೂಡಲೆ ಸಂಭ್ರಮದಿಂದ ತೆರಳುತ್ತಿದ್ದ ಮೆರವಣಿಗೆಯಲ್ಲಿ ಸ್ಫೋಟಕ್ಕೆ ಸಿಲುಕಿದ ಯುವಕರು ಸುಟ್ಟಗಾಯಗಳಿಂದ ಒದ್ದಾಡ ತೊಡಗಿದರು. ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟರೆ, ಹಲವರು ಸುಟ್ಟಗಾಯಗೊಂಡರು.</p>.<p>ಮೃತಪಟ್ಟವರನ್ನು ಗುರುಪ್ರೀತ್ ಸಿಂಗ್ ಮತ್ತು ಮನಪ್ರೀತ್ ಸಿಂಗ್ ಎಂದು ಗುರುತಿಸಲಾಗಿದೆ. ಗಾಯಗೊಂಡವರನ್ನು ಅನಮೋಲ್ ಪ್ರೀತ್ ಸಿಂಗ್, ಸರ್ಗುಣ್ ಸಿಂಗ್, ಅಜಯ್ಪಾಲ್ ಸಿಂಗ್, ನರೇನ್ದೀಪ್ ಸಿಂಗ್, ಹರ್ನೂರ್ ಸಿಂಗ್, ದವೀಂದರ್ಬೀರ್ ಸಿಂಗ್, ಸರಬಜೋತ್ ಸಿಂಗ್, ಕಿರತ್ ಸಿಂಗ್ ಹಾಗೂ ಗುರ್ ಸಿಮ್ರನ್ ಸಿಂಗ್ ಎಂದು ಗುರುತಿಸಲಾಗಿದೆ.</p>.<p>ವಿಷಯ ತಿಳಿದ ಕೂಡಲೆ ಪೊಲೀಸರು ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಅಮೃತಸರದ ಗುರುನಾನಕ್ ದೇವ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಎಸ್ಪಿ ಜಗಜೀತ್ ಸಿಂಗ್ ವಾಲಿಯಾ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಂಡೀಘಡ: </strong>ಸಿಖ್ಖರ ಧಾರ್ಮಿಕ ಮೆರವಣಿಗೆ ಸಂದರ್ಭ ಟ್ರಾಕ್ಟರ್ನಲ್ಲಿ ಇರಿಸಿದ್ದ ರಾಸಾಯನಿಕ ಸ್ಫೋಟಗೊಂಡ ಪರಿಣಾಮ ಇಬ್ಬರು ಮೃತಪಟ್ಟು ಹಲವು ಮಂದಿ ಗಾಯಗೊಂಡಿರುವ ಘಟನೆ ಪಂಚಾಬಿನ ತರ್ನ್ ತರನ್ ಜಿಲ್ಲೆಯದಲೇಕೆ ಗ್ರಾಮದಲ್ಲಿ ಶನಿವಾರ ನಡೆದಿದೆ.</p>.<p>ಯುವಕರು ಪಹುವಿಂಡ್ ಗ್ರಾಮದಿಂದ ಚಬ್ಬಾ ಗ್ರಾಮದ ಗುರುದ್ವಾರ ತಹ್ಲಾ ಸಾಹಿಬ್ ಬಳಿಗೆ ಸಿಖ್ ಸಂಪ್ರದಾಯದಂತೆ ಹಾಡು ಹೇಳಿಕೊಂಡು ಮೆರವಣಿಗೆಯಲ್ಲಿ ತೆರಳುತ್ತಿದ್ದರು. ಈ ಸಮಯದಲ್ಲಿ ಸಂಜೆ ವೇಳೆಗೆ ಇದ್ದಕ್ಕಿದ್ದಂತೆ ಟ್ರಾಕ್ಟರ್ನ ಹಿಂಬದಿಯಿಂದ ಭಾರಿ ಸ್ಫೋಟದ ಶಬ್ದ ಕೇಳಿಬಂತು. ಕೂಡಲೆ ಸಂಭ್ರಮದಿಂದ ತೆರಳುತ್ತಿದ್ದ ಮೆರವಣಿಗೆಯಲ್ಲಿ ಸ್ಫೋಟಕ್ಕೆ ಸಿಲುಕಿದ ಯುವಕರು ಸುಟ್ಟಗಾಯಗಳಿಂದ ಒದ್ದಾಡ ತೊಡಗಿದರು. ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟರೆ, ಹಲವರು ಸುಟ್ಟಗಾಯಗೊಂಡರು.</p>.<p>ಮೃತಪಟ್ಟವರನ್ನು ಗುರುಪ್ರೀತ್ ಸಿಂಗ್ ಮತ್ತು ಮನಪ್ರೀತ್ ಸಿಂಗ್ ಎಂದು ಗುರುತಿಸಲಾಗಿದೆ. ಗಾಯಗೊಂಡವರನ್ನು ಅನಮೋಲ್ ಪ್ರೀತ್ ಸಿಂಗ್, ಸರ್ಗುಣ್ ಸಿಂಗ್, ಅಜಯ್ಪಾಲ್ ಸಿಂಗ್, ನರೇನ್ದೀಪ್ ಸಿಂಗ್, ಹರ್ನೂರ್ ಸಿಂಗ್, ದವೀಂದರ್ಬೀರ್ ಸಿಂಗ್, ಸರಬಜೋತ್ ಸಿಂಗ್, ಕಿರತ್ ಸಿಂಗ್ ಹಾಗೂ ಗುರ್ ಸಿಮ್ರನ್ ಸಿಂಗ್ ಎಂದು ಗುರುತಿಸಲಾಗಿದೆ.</p>.<p>ವಿಷಯ ತಿಳಿದ ಕೂಡಲೆ ಪೊಲೀಸರು ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಅಮೃತಸರದ ಗುರುನಾನಕ್ ದೇವ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಎಸ್ಪಿ ಜಗಜೀತ್ ಸಿಂಗ್ ವಾಲಿಯಾ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>