ಹರಿಹರ: ಅಧಿಕಾರ ಹಾಗೂ ಮತಗಳಿಕೆಗಾಗಿ ಮಠಗಳನ್ನು ರಾಜಕಾರಣಿಗಳು ಬಳಸಿಕೊಳ್ಳುತ್ತಾರೆ. ಈ ಹಿನ್ನೆಲೆಯಲ್ಲಿ ಸಮಾಜದ ಒಳಿತಿಗಾಗಿ ಅಧಿಕಾರದಲ್ಲಿ ಇರುವವರನ್ನು ಒತ್ತಾಯಿಸುವುದು ಸಹಜ. ಅಧಿಕಾರದಲ್ಲಿ ಇರುವವರು ಸ್ವಾಮೀಜಿಗಳ ಮಾತು ಕೇಳುವ ತಾಳ್ಮೆ ಬೆಳೆಸಿಕೊಳ್ಳಬೇಕು ಎಂದು ಶಾಸಕ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಹೆಸರೆತ್ತದೇ ಟೀಕೆ ಮಾಡಿದರು.
ಮುಖ್ಯಮಂತ್ರಿ ಬಳಿ ಸಮಾಜದ ಶಾಸಕರಿಗೆ ಸಚಿವ ಸಂಪುಟದಲ್ಲಿ ಅವಕಾಶ ನೀಡಿ ಎಂದು 3 ಬಾರಿ ಮನವಿ ಮಾಡಿದರೂ, ಉತ್ತರಿಸದೇ ಉದಾಸೀನ ತೋರಿದರು. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಸಭೆಯಲ್ಲಿ ಈ ವಿಚಾರವನ್ನು ಕೇಳಬೇಕಾಯಿತು. –ವಚನಾನಂದ ಸ್ವಾಮೀಜಿ