ಪ್ರವಾಹ ಸಂಭಾವ್ಯ ಮತ್ತು ಭೂಕುಸಿತ ಉಂಟಾಗುವ ಜಿಲ್ಲೆಗಳಲ್ಲಿ ಸಂತ್ರಸ್ತರಿಗೆ ಪರಿಹಾರ ಕೇಂದ್ರ, ಆಸ್ಪತ್ರೆ, ವಸತಿ, ಶೌಚಾಲಯ, ಸ್ನಾನದ ಮನೆ, ಆಹಾರ, ಆಪ್ತ ಸಲಹಾ ಕೇಂದ್ರಗಳನ್ನು ತೆರೆಯಲು ಈ ನಿಧಿಯಿಂದ ₹201.08 ಕೋಟಿ ಬಳಸಲು ಸೂಚಿಸಲಾಗಿದೆ. ಮುಂದಾಲೋಚನೆಯಿಂದ ಇಂತಹ ಕ್ರಮ ತೆಗೆದುಕೊಂಡಿರುವ ಪ್ರಧಾನಿಯವರು ಅಭಿನಂದನಾರ್ಹರು ಎಂದು ಅಶೋಕ ತಿಳಿಸಿದರು.