‘ಕ್ಷೇತ್ರವೇ ಗೊತ್ತಿಲ್ಲದ ವಿಶ್ವನಾಥ್ ಅವರನ್ನು ಮೊದಲು ನಾವೆಲ್ಲ ಸೇರಿ ಗೆಲ್ಲಿಸಿದೆವು. ನಂತರ, ಅವರು ಕ್ಷೇತ್ರದತ್ತ ಮುಖ ಮಾಡಲಿಲ್ಲ. ಬಿಜೆಪಿ ಸೇರುವಾಗಲೂ ಚರ್ಚೆ ನಡೆಸಿರಲಿಲ್ಲ. ಸಂಬಂಧವೇ ಇಲ್ಲದ ಕ್ಷೇತ್ರಕ್ಕೆ ಬಂದು ಕುಕ್ಕರ್, ಸೀರೆ ಹಂಚಿ, ಒಕ್ಕಲಿಗರ ಸಂಘಕ್ಕೆ ₹5 ಕೋಟಿ ಆಮಿಷ ತೋರಿಸಿ ಗೆದ್ದುಬಿಡಬಹುದು ಎಂದು ಯೋಚಿಸುವುದು ಭ್ರಮೆ. ಮೈಸೂರಿನ ರಾಜಕಾರಣವೇ ಬೇರೆ; ರಾಜ್ಯ ರಾಜಕಾರಣವೇ ಬೇರೆ’ ಎಂದರು.