ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ನವರು ತಾಯಿ, ಹೆಂಡತಿಯನ್ನು ಅನುಮಾನಿಸದಿರಲಿ: ಸಿ.ಟಿ.ರವಿ

ಇವಿಎಂ ದೋಷದಿಂದ ಅನರ್ಹರು ಆಯ್ಕೆ ಎಂಬ ಕಾಂಗ್ರೆಸ್‌ ನಾಯಕ ಬಯ್ಯಾಪುರ ಹೇಳಿಕೆ ರವಿ ಕಿಡಿ
Last Updated 9 ಜನವರಿ 2020, 8:28 IST
ಅಕ್ಷರ ಗಾತ್ರ

ಕೊಪ್ಪಳ: ಕಾಂಗ್ರೆಸ್‌ನವರಿಗೆ ಅನುಮಾನಿಸುವ ಕಾಯಿಲೆ ಇದೆ. ಹೆಂಡತಿ ಮತ್ತು ತಾಯಿಯನ್ನು ಅವಮಾನಿಸದಿರಲಿ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದ್ದು ವಿವಾದಕ್ಕೆ ಕಾರಣವಾಗಿದೆ.

ಕುಷ್ಟಗಿಯಲ್ಲಿ ನಡೆದ ಕಾರ್ಮಿಕರ ಮುಷ್ಕರ ಮತ್ತು ಸಿಎಎ ಕಾಯ್ದೆ ವಿರೋಧಿಸಿ ಬಯ್ಯಾಪುರ ಮಾತನಾಡುವಾಗ, ಎವಿಎಂ ದೋಷದಿಂದಲೇ ಅನರ್ಹ ಶಾಸಕರು ಗೆಲ್ಲುವಂತೆ ಆಯಿತು ಎಂಬ ಹೇಳಿಕೆ ನೀಡಿದ್ದರು. ಇದಕ್ಕೆ ರವಿ ತೀಕ್ಷಣಪ್ರತಿಕ್ರಿಯೆ ನೀಡಿದ್ದು, ವಿವಾದ ಹೊತ್ತಿಕೊಳ್ಳುವ ಸಾಧ್ಯತೆಗಳಿವೆ.

ಅಮರೇಗೌಡ ಗೆದ್ದಿದ್ದು ಕೂಡ ಇವಿಎಂನಿಂದಲೇ,ಕಾಂಗ್ರೆಸ್‌ಗೆ ಅಧಿಕಾರ ಇಲ್ಲದೆ ಇರುವುವಾಗ ಕಾಯಿಲೆ ತೀವ್ರವಾಗಿ ಉಲ್ಭಣವಾಗುತ್ತದೆ.ಸೈನಿಕರು ಸರ್ಜಿಕಲ್ ಸ್ಟ್ರೈಕ್ ಮಾಡಿದರೂ ಅನುಮಾನ,ಚುನಾವಣೆ ಸೋತರೆ ಇವಿಎಂ ಮೇಲೆ ಅನುಮಾನ. ಈ ಕೆಟ್ಟ ಕಾಯಿಲೆ ಕಾಂಗ್ರೆಸ್‌ನಿಂದ ದೂರವಾಗಲಿ ಎಂದು ಟಾಂಗ್ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT