ಕಲಬುರ್ಗಿ: ‘ಪಕ್ಷದ ಅಧ್ಯಕ್ಷರಾಗಿ ಪದಗ್ರಹಣ ಸಮಾರಂಭಕ್ಕೆ ಒಂದೇ ಕಡೆ 10 ಲಕ್ಷ ಜನರನ್ನು ಸೇರಿಸಿ ತಾಕತ್ ಪ್ರದರ್ಶನ ಮಾಡಬೇಕಿತ್ತು. ಟಿವಿಯಲ್ಲಿ 10 ಲಕ್ಷ ನೋಡುತ್ತಿದ್ದಾರೆಂದು ಹೇಳಿಕೊಂಡರೆ ಅದಕ್ಕೆ ಹೆಚ್ಚು ಮಹತ್ವ ನೀಡಬೇಕಿಲ್ಲ’ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ವ್ಯಂಗ್ಯವಾಡಿದರು.
ಅಫಜಲಪುರ ತಾಲ್ಲೂಕಿನ ಸೊನ್ನಾ ಬ್ಯಾರೇಜಗೆ ಗುರುವಾರ ಭೇಟಿ ನೀಡಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, 'ಅಧ್ಯಕ್ಷರಾದವರ ತಾಕತ್ ಏನೆಂದು ಗೊತ್ತಿದೆ. ಅವರು ನಮ್ಮ ಮಿತ್ರರಲ್ಲ' ಎಂದು ಡಿ.ಕೆ.ಶಿವಕುಮಾರ್ ಹೆಸರನ್ನು ಪ್ರಸ್ತಾಪಿಸದೇ ಪರೋಕ್ಷವಾಗಿ ಮಾತನಾಡಿದರು.