ಭ್ರಷ್ಟಾಚಾರ ನಿರ್ಮೂಲನಾ ಮತ್ತು ಪರಿಸರ ಸಂರಕ್ಷಣಾ ವೇದಿಕೆಯ ಅಧ್ಯಕ್ಷ ಅಬ್ರಹಾಂ ಟಿ.ಜಿ, ‘2010ರಿಂದ ನೈಸ್ ರಸ್ತೆಯಲ್ಲಿ ಸಂಗ್ರಹಿಸಿದ ಸುಂಕದಲ್ಲಿ ನಯಾಪೈಸೆಯನ್ನೂ ಸಹ ಕಂಪನಿ ತೆಗೆದುಕೊಳ್ಳುವಂತಿಲ್ಲ ಎನ್ನುವ ಆದೇಶವಿದೆ. ಆದರೆಆ ಆದೇಶದ ಕಡತವನ್ನು ಮುಚ್ಚಿ, ಹೊಸ ನಿಯಮವನ್ನು ತಂದು ಸುಂಕವನ್ನು ಬಾಚಿಕೊಳ್ಳುತ್ತಿದೆ’ ಎಂದು ಆರೋಪಿಸಿದರು.